ದೇವಸ್ಥಾನದ ಸಮೀಪ ಸಣ್ಣ ಹೋಟೆಲ್ ನಡೆಸುತ್ತಿರುವ ದ್ಯಾವಪ್ಪ ಗೌಡರು ಮಧ್ಯಾಹ್ನ 12.30ರ ವೇಳೆಗೆ ಪೂಜೆಗೆ ಬಂದಿದ್ದಾರೆ. ಆಗ ಶೇಷಗಿರಿ ಭಟ್ ಹಾಗೂ ದ್ಯಾವಪ್ಪ ಗೌಡರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದೇ ಹೊತ್ತಿಗೆ ಸುಬ್ರಾಯ ಭಟ್ ಅವರು ಮೈಮೇಲೆ ದೇವಿ ಬಂದಂತೆ ವರ್ತಿಸುತ್ತ ದ್ಯಾವಪ್ಪ ಗೌಡ, ದೇವಸ್ಥಾನದ ಸಿಬ್ಬಂದಿ ಮಹೇಶ್, ವಿಮಲಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ದೇವಸ್ಥಾನದ ಕಚೇರಿ ಕಿಟಕಿ ಗಾಜು ಒಡೆದಿದ್ದಾರೆ.