ಮೈಸೂರು ಮೃಗಾಲಯದಿಂದ ಶಿವಮೊಗ್ಗದ ಹುಲಿ-ಸಿಂಹಧಾಮಕ್ಕೆ ಗಂಡು ನೀರು ಕುದುರೆಯನ್ನು ಉಡುಗೊರೆಯಾಗಿ ನೀಡಲಾಗಿದೆ. ಆಫ್ರಿಕಾ ಮೂಲದ ಪ್ರಾಣಿಯಾಗಿರುವ ಇದು ಸುಮಾರು 40 ವರ್ಷ ಬದುಕಬಲ್ಲದು. ಮೈಸೂರು, ಬನ್ನೇರುಘಟ್ಟದಲ್ಲಿ ಮಾತ್ರ ಇದನ್ನು ನೋಡಬಹುದಾಗಿದೆ. ಇದೇ ಮೊದಲು ಶಿವಮೊಗ್ಗ ತಾವರೆಕೊಪ್ಪದ ಹುಲಿ–ಸಿಂಹಧಾಮಕ್ಕೆ ನೀರು ಕುದುರೆ ಆಗಮಿಸಿದೆ. ಅದು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡಿದ್ದು, ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದ್ಚಂದ್ ತಿಳಿಸಿದರು.