ಗ್ರಾಮಸ್ಥರಿಂದಲೇ ದುರಸ್ತಿ ಕಾರ್ಯ ಮಾಡಿರುವ ತುಮರಿ ಅರಬಳ್ಳಿ ರಸ್ತೆ ಮಾರ್ಗ
ತುಮರಿ ಗ್ರಾಮದಿಂದ ಅರಬಳ್ಳಿ ಗೋಳಗೋಡು ಸಂಪರ್ಕ ಕಲ್ಪಿಸುವ ಹದಗೆಟ್ಟ ರಸ್ತೆಯನ್ನು ಗ್ರಾಮಸ್ಥರು ದುರಸ್ತಿ ಮಾಡಿದರು.
ಕಾಂಕ್ರೀಟ್ ರಸ್ತೆ ನಿರ್ಮಿಸಲು ಮನವಿ
ಪ್ರತಿವರ್ಷವೂ ಮಳೆಗಾಲ ಕಳೆದ ನಂತರ ಈ ರಸ್ತೆಯ ದುರಸ್ತಿ ಮಾಡಲೇಬೇಕಿದೆ. ಇಲ್ಲದಿದ್ದರೆ ತಾಲ್ಲೂಕು ಕೇಂದ್ರವಾಗಲೀ ಗ್ರಾಮ ಪಂಚಾಯಿತಿ ಕಚೇರಿ ಇರುವ ಸ್ಥಳಕ್ಕಾಗಲೀ ಹೋಗುವುದು ಕಷ್ಟಕರವಾಗುತ್ತದೆ ಎಂಬುದು ಸ್ಥಳೀಯರ ಗೋಳು. ಶಾಲೆ– ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಕೆಸರುಮಯ ರಸ್ತೆಯಲ್ಲಿ ನಿತ್ಯ ಸಾಗಲು ಕಷ್ಟಪಡುತ್ತಾರೆ. ಇಲ್ಲಿ ತುರ್ತಾಗಿ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.