<p><strong>ಶಿವಮೊಗ್ಗ</strong>: ವಚನ ಸಾಹಿತ್ಯದ ಜ್ಞಾನ ಬೆಳಕನ್ನು ವಿಶ್ವಕ್ಕೆ ಪಸರಿಸಿದವರು ಗುರು ಬಸವಣ್ಣನವರು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಾತೆ ಗಂಗಾದೇವಿ ಹೇಳಿದರು.</p>.<p>ಬಸವಣ್ಣನವರ ಲಿಂಗೈಕ್ಯ ಸ್ಥಳ ಕೂಡಲಸಂಗಮದಲ್ಲಿ ನಡೆಯುವ 39 ನೇ ಶರಣ ಮೇಳ ಕಾರ್ಯಕ್ರಮ ನಿಮಿತ್ತ ಶಿವಮೊಗ್ಗದ ಬಸವ ಮಂಟಪದಲ್ಲಿ ನಡೆದ ವಿಶ್ವ ಧರ್ಮ ಪ್ರವಚನದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>ಎಲ್ಲರೂ ನಮ್ಮವರು ಎನ್ನುವ ವಿಶ್ವ ಭಾವೈಕ್ಯ ತತ್ವದಡಿಯಲ್ಲಿ ಎಲ್ಲರನ್ನೂ ಬರಮಾಡಿಕೊಂಡು, ಎಲ್ಲರಿಗೂ ಧಾರ್ಮಿಕ, ಆಧ್ಯಾತ್ಮಿಕ ಸಂಸ್ಕಾರ ನೀಡಿದವರು ಬಸವಣ್ಣ ಎಂದರು.</p>.<p>ವಿಶ್ವಕ್ಕೆ ಪರಮಾತ್ಮ ತತ್ತ್ವದ ದರ್ಶನ ಶಾಸ್ತ್ರ ನೀಡುವುದರ ಮೂಲಕ ಎಲ್ಲರೂ ಪರಮಾತ್ಮ ತತ್ವ ವನ್ನು ಅರ್ಥ ಮಾಡಿಕೊಂಡು, ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂಬ ಆಶಯವನ್ನು ವಚನಗಳು ಹೊಂದಿವೆ.</p>.<p>'ಸ್ತ್ರೀಯರಿಗೂ ಸಹ ಧಾರ್ಮಿಕ ಸ್ವಾತಂತ್ರ್ಯ ನೀಡುವ ಮೂಲಕ ಅವರ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಕಾರಣ ಕರ್ತರಾದವರು ಬಸವಣ್ಣ. ಅವರ ತತ್ವ ಸಂದೇಶದಡಿ ವಿಶ್ವ ಸಾಗಿದರೆ ಆನಂದ ಪೂರ್ಣ ಬದುಕು ಕಾಣಲು ಸಾಧ್ಯ' ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ವಚನ ಸಾಹಿತ್ಯದ ಜ್ಞಾನ ಬೆಳಕನ್ನು ವಿಶ್ವಕ್ಕೆ ಪಸರಿಸಿದವರು ಗುರು ಬಸವಣ್ಣನವರು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಾತೆ ಗಂಗಾದೇವಿ ಹೇಳಿದರು.</p>.<p>ಬಸವಣ್ಣನವರ ಲಿಂಗೈಕ್ಯ ಸ್ಥಳ ಕೂಡಲಸಂಗಮದಲ್ಲಿ ನಡೆಯುವ 39 ನೇ ಶರಣ ಮೇಳ ಕಾರ್ಯಕ್ರಮ ನಿಮಿತ್ತ ಶಿವಮೊಗ್ಗದ ಬಸವ ಮಂಟಪದಲ್ಲಿ ನಡೆದ ವಿಶ್ವ ಧರ್ಮ ಪ್ರವಚನದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>ಎಲ್ಲರೂ ನಮ್ಮವರು ಎನ್ನುವ ವಿಶ್ವ ಭಾವೈಕ್ಯ ತತ್ವದಡಿಯಲ್ಲಿ ಎಲ್ಲರನ್ನೂ ಬರಮಾಡಿಕೊಂಡು, ಎಲ್ಲರಿಗೂ ಧಾರ್ಮಿಕ, ಆಧ್ಯಾತ್ಮಿಕ ಸಂಸ್ಕಾರ ನೀಡಿದವರು ಬಸವಣ್ಣ ಎಂದರು.</p>.<p>ವಿಶ್ವಕ್ಕೆ ಪರಮಾತ್ಮ ತತ್ತ್ವದ ದರ್ಶನ ಶಾಸ್ತ್ರ ನೀಡುವುದರ ಮೂಲಕ ಎಲ್ಲರೂ ಪರಮಾತ್ಮ ತತ್ವ ವನ್ನು ಅರ್ಥ ಮಾಡಿಕೊಂಡು, ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂಬ ಆಶಯವನ್ನು ವಚನಗಳು ಹೊಂದಿವೆ.</p>.<p>'ಸ್ತ್ರೀಯರಿಗೂ ಸಹ ಧಾರ್ಮಿಕ ಸ್ವಾತಂತ್ರ್ಯ ನೀಡುವ ಮೂಲಕ ಅವರ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಕಾರಣ ಕರ್ತರಾದವರು ಬಸವಣ್ಣ. ಅವರ ತತ್ವ ಸಂದೇಶದಡಿ ವಿಶ್ವ ಸಾಗಿದರೆ ಆನಂದ ಪೂರ್ಣ ಬದುಕು ಕಾಣಲು ಸಾಧ್ಯ' ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>