ನಗರದ ಶ್ರೀಗಂಧ ಹಾಗೂ ಸಾಮಗಾನ ಸಂಸ್ಥೆಗಳಿಂದ ಶನಿವಾರ ಇಲ್ಲಿ ಆಯೋಜಿಸಿದ್ದ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ‘ಹಿಂದೂಗಳ ಶಕ್ತಿ ಕೇಂದ್ರ ಶಿವಮೊಗ್ಗ ಎಂಬುದು ಗೊತ್ತಿಲ್ಲದೇ ಕೆಲ ದಿನಗಳ ಹಿಂದೆ ವೀರ ಸಾವರ್ಕರ್ ಅವರಿಗೆ ಇಲ್ಲಿ ಅಪಮಾನ ಮಾಡಲಾಯಿತು. ಇದರ ಫಲವಾಗಿ ಸಾವರ್ಕರ್ ವಿಚಾರಧಾರೆ ಎಂಬ ಜ್ಯೋತಿ ಇಡೀ ರಾಜ್ಯಕ್ಕೆ ವ್ಯಾಪಿಸಿದೆ’ ಎಂದರು.