‘ನಾವು ಬದುಕು ಸಾಗಿಸಬೇಕೋ ಅಥವಾ ಸಾಯಬೇಕೋ ತಿಳಿಯುತ್ತಿಲ್ಲ. ಚರಂಡಿ ನೀರು ಸುಮಾರು ಎರಡು ಎಕರೆಯಷ್ಟು ಜಾಗದಲ್ಲಿ ಸಂಗ್ರಹವಾಗಿ ಇಡೀ ಕಾಲೊನಿ ಗಬ್ಬೆದ್ದು ನಾರುತ್ತಿದೆ. ಅಡುಗೆ ಮಾಡುವುದು, ಊಟ, ನಿದ್ದೆ ಇಡೀ ಜೀವನ ಇದರಲ್ಲೇ ನಡೆಯುತ್ತಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಮಾ.3 ರಂದು ತಹಶೀಲ್ದಾರ್ ಕಚೇರಿ ಎದುರು ಸ್ಲಂ ನಿವಾಸಿಗಳ ಸಮಸ್ಯೆಗಳಿಗೆ ಮುಕ್ತಿ ಸಿಗುವವರೆಗೂ ಅನಿರ್ದಿಷ್ಟಾವಧಿಧರಣಿ ನಡೆಸಲು ನಿರ್ಧರಿಸಲಾಗಿದೆ’ ಎಂದು ಕಾಲೊನಿ ಮಹಿಳೆ ಗಂಗವ್ವ ಗೊಲ್ಲರ, ಯಲ್ಲವ್ವ ಗೊಲ್ಲರ ಹೇಳಿದರು.