ವಿಜಯಪುರ ನಗರದ ರೈಲು ನಿಲ್ದಾಣ ಸಮೀಪದ ಚೌಗಲೆ ಕಂಪೌಂಡ್ ನ ಭರತ್ ಅಗರವಾಲ್(43), ಪೇಟೆ ಬಾವಡಿಯ ವಾಸಿಂ ಶೇಖ್(35) ಮತ್ತು ಮಹಾರಾಷ್ಟ್ರ ರಾಜ್ಯದ ಪುಣಿ ಜಿಲ್ಲೆಯ ಕಲವಾಡಿಯ ಅಕ್ಬರ್ ಶೇಖ್(32) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳಿಂದ 70 ಗ್ರಾಂ ಬಂಗಾರದ ಆಭರಣ, 20 ಕೆ.ಜಿ.ಬೆಳ್ಳಿ ಆಭರಣ ಹಾಗೂ ₹ 5 ಲಕ್ಷ ನಗದು ಸೇರಿದಂತೆ ಒಟ್ಟು ₹17.50 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ದಿ, ಡಿಎಸ್ ಪಿ ಕೆ.ಸಿ.ಲಕ್ಷ್ಮೀನಾರಾಯಣ, ಸಿಪಿಐ ರಮೇಶ ಅವಜಿ, ಗೋಳಗುಮ್ಮಟ ಪಿಎಸ್ ಐ ಸೀತಾರಾಮ ಲಮಾಣಿ, ಜಲನಗರ ಠಾಣೆ ಪಿಎಸ್ ಐ ಎಸ್.ಎಂ.ಶಿರಗುಪ್ಪಿ, ಸೋಮೇಶ ಗೆಜ್ಜೆ, ಪ್ರೇಮಾ ಕುಚಬಾಳ ಇದ್ದರು.