<p><strong>ಗುಬ್ಬಿ: </strong>ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಶವ ಸಾಗಿಸಲು ನಿರಾಕರಿಸಿದ ತರಕಾರಿ ಸಾಗಣೆ ವಾಹನ ಚಾಲಕನ ವಿರುದ್ಧ ಅನಗತ್ಯ ಪ್ರಕರಣ ದಾಖಲಿಸಲಾಗಿದೆ. ಇಡೀ ದಿನ ವಾಹನವನ್ನು ಠಾಣೆಯಲ್ಲಿರಿಸಿಕೊಂಡು ಪೊಲೀಸರು ತೊಂದರೆ ನೀಡಿದ್ದಾರೆ ಎಂದು ಆರೋಪಿಸಿ ತರಕಾರಿ ಸಾಗಣೆ ವಾಹನಗಳ ಚಾಲಕರು ಶುಕ್ರವಾರ ಪ್ರತಿಭಟನೆ ನಡೆಸಿದರು.</p>.<p>ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕು ಲಿಂಗದಹಳ್ಳಿಯ 22 ತರಕಾರಿ ಸಾಗಣೆ ವಾಹನ ಚಾಲಕರು ಪ್ರತಿಭಟನೆ ನಡೆಸಿ ಎಸ್ಐ ವಿರುದ್ಧ ಕಿಡಿಕಾರಿದರು.</p>.<p>ಶವ ಸಾಗಿಸಲು ನಿರಾಕರಿಸಿದ ಕಾರಣಕ್ಕೆ ಪೊಲೀಸ್ ಠಾಣೆ ಬಳಿ ವಾಹನ ಜಪ್ತಿ ಮಾಡಿದ್ದಾರೆ. ಸೀಟ್ ಬೆಲ್ಟ್ ಹಾಗೂ ಯೂನಿಫಾರಂ ಹಾಕಿಲ್ಲ ಎನ್ನುವ ಕಾರಣ ನೀಡಿ ವಾಹನವನ್ನು ಠಾಣೆಯಲ್ಲೇ ನಿಲ್ಲಿಸಿಕೊಂಡಿದ್ದರು. ಕಾನೂನು ರೀತಿ ದಂಡ ಕಟ್ಟುವುದಾಗಿ ಮನವಿ ಮಾಡಿದ್ದರೂ ಪ್ರಕರಣ ದಾಖಲಿಸಿದ್ದಾರೆ ಎಂದು ದೂರಿದರು.</p>.<p>‘ಕೇವಲ ₹100ರ ದಂಡದ ರಸೀದಿ ಹಾಕಿ, ₹7,000ವನ್ನು ಫೋನ್ ಪೇ ಮೂಲಕ ಪಡೆಯಲಾಗಿದೆ. ಲಂಚ ಪಡೆದ ನಂತರವೂ ವಾಹನ ಬಿಡಲಿಲ್ಲ’ ಎಂದು ಕಿಡಿಕಾರಿದರು.</p>.<p>ನಿತ್ಯ ಬೆಂಗಳೂರಿಗೆ ತರಕಾರಿ ಸಾಗಿಸುವ 40 ವಾಹನಗಳು ಇದೇ ಹೆದ್ದಾರಿಯಲ್ಲಿ ಸಂಚರಿಸುತ್ತವೆ. ಎಲ್ಲ ವಾಹನಗಳ ದಾಖಲೆಗಳು ಸರಿಯಾಗೇ ಇವೆ. ಕಾನೂನು ರೀತಿ ಮಾತನಾಡಿದ್ದಕ್ಕೆ ವಾಹನದಲ್ಲಿ ಮದ್ಯದ ಬಾಟಲ್ ಇರಿಸಿ, ಜೈಲಿಗೆ ಹಾಕುವ ಬೆದರಿಕೆ ಹಾಕಿದ್ದಾರೆ ಎಂದು ಚಾಲಕ ಯೂನಸ್ ದೂರಿದರು.</p>.<p>ನಿತ್ಯ ಲಕ್ಷಾಂತರ ರೂಪಾಯಿ ತರಕಾರಿ ಸಾಗಿಸುವ ಈ ಗೂಡ್ಸ್ ವಾಹನ ಇಡೀ ದಿನ ಠಾಣೆ ಮುಂದೆ ನಿಂತಿರುವ ಕಾರಣ ಈ ದಿನದ ದುಡಿಮೆಯನ್ನು ಪೊಲೀಸ್ ಇಲಾಖೆ ಕಟ್ಟಿಕೊಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.</p>.<p>ಧರಣಿ ಆರಂಭಿಸಿದ ನಂತರ ಫೋನ್ ಪೇ ಮೂಲಕ ಪಡೆದಿದ್ದ ₹7,000ವನ್ನು ವಾಪಸ್ ಕೊಡಲಾಯಿತು. ವಾಹನದ ದುಡಿಮೆ ಮತ್ತು ಚಾಲಕರ ಕೂಲಿ ಯಾರು ನೀಡುತ್ತಾರೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.</p>.<p>ಚಾಲಕರಾದ ಮುರುಗೇಶ್, ಅಬ್ಜಲ್ಖಾನ್, ಬಾಬು, ರಫೀಕ್, ಮಂಜು, ಶಕೀಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಬ್ಬಿ: </strong>ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಶವ ಸಾಗಿಸಲು ನಿರಾಕರಿಸಿದ ತರಕಾರಿ ಸಾಗಣೆ ವಾಹನ ಚಾಲಕನ ವಿರುದ್ಧ ಅನಗತ್ಯ ಪ್ರಕರಣ ದಾಖಲಿಸಲಾಗಿದೆ. ಇಡೀ ದಿನ ವಾಹನವನ್ನು ಠಾಣೆಯಲ್ಲಿರಿಸಿಕೊಂಡು ಪೊಲೀಸರು ತೊಂದರೆ ನೀಡಿದ್ದಾರೆ ಎಂದು ಆರೋಪಿಸಿ ತರಕಾರಿ ಸಾಗಣೆ ವಾಹನಗಳ ಚಾಲಕರು ಶುಕ್ರವಾರ ಪ್ರತಿಭಟನೆ ನಡೆಸಿದರು.</p>.<p>ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕು ಲಿಂಗದಹಳ್ಳಿಯ 22 ತರಕಾರಿ ಸಾಗಣೆ ವಾಹನ ಚಾಲಕರು ಪ್ರತಿಭಟನೆ ನಡೆಸಿ ಎಸ್ಐ ವಿರುದ್ಧ ಕಿಡಿಕಾರಿದರು.</p>.<p>ಶವ ಸಾಗಿಸಲು ನಿರಾಕರಿಸಿದ ಕಾರಣಕ್ಕೆ ಪೊಲೀಸ್ ಠಾಣೆ ಬಳಿ ವಾಹನ ಜಪ್ತಿ ಮಾಡಿದ್ದಾರೆ. ಸೀಟ್ ಬೆಲ್ಟ್ ಹಾಗೂ ಯೂನಿಫಾರಂ ಹಾಕಿಲ್ಲ ಎನ್ನುವ ಕಾರಣ ನೀಡಿ ವಾಹನವನ್ನು ಠಾಣೆಯಲ್ಲೇ ನಿಲ್ಲಿಸಿಕೊಂಡಿದ್ದರು. ಕಾನೂನು ರೀತಿ ದಂಡ ಕಟ್ಟುವುದಾಗಿ ಮನವಿ ಮಾಡಿದ್ದರೂ ಪ್ರಕರಣ ದಾಖಲಿಸಿದ್ದಾರೆ ಎಂದು ದೂರಿದರು.</p>.<p>‘ಕೇವಲ ₹100ರ ದಂಡದ ರಸೀದಿ ಹಾಕಿ, ₹7,000ವನ್ನು ಫೋನ್ ಪೇ ಮೂಲಕ ಪಡೆಯಲಾಗಿದೆ. ಲಂಚ ಪಡೆದ ನಂತರವೂ ವಾಹನ ಬಿಡಲಿಲ್ಲ’ ಎಂದು ಕಿಡಿಕಾರಿದರು.</p>.<p>ನಿತ್ಯ ಬೆಂಗಳೂರಿಗೆ ತರಕಾರಿ ಸಾಗಿಸುವ 40 ವಾಹನಗಳು ಇದೇ ಹೆದ್ದಾರಿಯಲ್ಲಿ ಸಂಚರಿಸುತ್ತವೆ. ಎಲ್ಲ ವಾಹನಗಳ ದಾಖಲೆಗಳು ಸರಿಯಾಗೇ ಇವೆ. ಕಾನೂನು ರೀತಿ ಮಾತನಾಡಿದ್ದಕ್ಕೆ ವಾಹನದಲ್ಲಿ ಮದ್ಯದ ಬಾಟಲ್ ಇರಿಸಿ, ಜೈಲಿಗೆ ಹಾಕುವ ಬೆದರಿಕೆ ಹಾಕಿದ್ದಾರೆ ಎಂದು ಚಾಲಕ ಯೂನಸ್ ದೂರಿದರು.</p>.<p>ನಿತ್ಯ ಲಕ್ಷಾಂತರ ರೂಪಾಯಿ ತರಕಾರಿ ಸಾಗಿಸುವ ಈ ಗೂಡ್ಸ್ ವಾಹನ ಇಡೀ ದಿನ ಠಾಣೆ ಮುಂದೆ ನಿಂತಿರುವ ಕಾರಣ ಈ ದಿನದ ದುಡಿಮೆಯನ್ನು ಪೊಲೀಸ್ ಇಲಾಖೆ ಕಟ್ಟಿಕೊಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.</p>.<p>ಧರಣಿ ಆರಂಭಿಸಿದ ನಂತರ ಫೋನ್ ಪೇ ಮೂಲಕ ಪಡೆದಿದ್ದ ₹7,000ವನ್ನು ವಾಪಸ್ ಕೊಡಲಾಯಿತು. ವಾಹನದ ದುಡಿಮೆ ಮತ್ತು ಚಾಲಕರ ಕೂಲಿ ಯಾರು ನೀಡುತ್ತಾರೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.</p>.<p>ಚಾಲಕರಾದ ಮುರುಗೇಶ್, ಅಬ್ಜಲ್ಖಾನ್, ಬಾಬು, ರಫೀಕ್, ಮಂಜು, ಶಕೀಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>