ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಟಗೆರೆಯಲ್ಲಿ ಕರಡಿ ದಾಳಿ; ಮೂವರಿಗೆ ಗಾಯ

Last Updated 2 ಡಿಸೆಂಬರ್ 2018, 5:30 IST
ಅಕ್ಷರ ಗಾತ್ರ

ತುಮಕೂರು: ಕೊರಟಗೆರೆ ತಾಲ್ಲೂಕು ತೋವಿನಕೆರೆ ಸುತ್ತಲಿನ ಗ್ರಾಮಗಳಲ್ಲಿ ಕರಡಿಗಳ ದಾಳಿ ಮುಂದುವರಿದಿದೆ. ಭಾನುವಾರ ಬೆಳಿಗ್ಗೆ ಸೂರೇನಹಳ್ಳಿಯ ಬಳಿ ಮೂವರ ಮೇಲೆ ದಾಳಿ ಮಾಡಿದೆ.

ರೇಣುಕಮ್ಮ ಎಂಬುವವರು ಹೊಲದಲ್ಲಿ ಕಾಕಡ ಹೂ ಬಿಡಿಸುವಾಗ ಕರಡಿ ದಾಳಿ ನಡೆಸಿ ಕಚ್ಚಿದೆ. ಅಲ್ಲಿಂದ ಮುಂದಿನ ತೋಟದಲ್ಲಿ ದಂಪತಿ ಮೇಲೆ ದಾಳಿ ಮಾಡಿದೆ.

ಗಾಯಾಳುಗಾಳನ್ನು ತೋವಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ. ಕರಡಿ ಯಾವ ದಿಕ್ಕಿಗೆ ಹೋಯಿತು ಎಂದು ಜನರಿಗೆ ತಿಳಿದಿಲ್ಲ. ಇದು ಮತ್ತಷ್ಟು ಗಾಬರಿಗೆ ಕಾರಣವಾಗಿದೆ. ಎರಡು ವಾರದ ಹಿಂದೆ ಇದೇ ರೀತಿ ಬೆಳಿಗ್ಗೆ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ಐದು ಮಂದಿ ರೈತರ ಮೇಲೆ ಕರಡಿ ದಾಳಿ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT