ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಶಾಸಕ ಟಿ.ಬಿ.ಜಯಚಂದ್ರ ಸನ್ಮಾನಿಸಿದ ಬಿಜೆಪಿ, ಜೆಡಿಎಸ್ ಮುಖಂಡರು

Published 26 ಜೂನ್ 2023, 15:57 IST
Last Updated 26 ಜೂನ್ 2023, 15:57 IST
ಅಕ್ಷರ ಗಾತ್ರ

ಶಿರಾ: ನಗರಸಭೆ ಸಾಮಾನ್ಯ ಸಭೆ ನಡೆಯುತ್ತಿದ್ದ ಸಮಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಶಾಸಕ ಟಿ.ಬಿ.ಜಯಚಂದ್ರ ಅವರನ್ನು ಸನ್ಮಾನ ಮಾಡಿ ಆಶ್ಚರ್ಯ ಮೂಡಿಸಿದರು.

ಪ್ರಥಮ ಬಾರಿ ನಗರಸಭೆ ಕಚೇರಿಗೆ ಆಗಮಿಸಿದ ಶಾಸಕರಿಗೆ ಸನ್ಮಾನ ಮಾಡಲು ನಗರಸಭೆ ಅಧ್ಯಕ್ಷ ಅಂಜಿನಪ್ಪ ಮುಂದಾದ ಸಮಯದಲ್ಲಿ ಅದನ್ನು ನಯವಾಗಿ ಶಾಸಕರು ನಿರಾಕರಿಸಿದರು.

ಜೆಡಿಎಸ್ ನಗರ ಅಧ್ಯಕ್ಷ ಶ್ರೀರಂಗ, ನಗರಸಭೆ ಮಾಜಿ ಸದಸ್ಯ ಆರ್.ರಾಘವೇಂದ್ರ ಹಾಗೂ ಬಿಜೆಪಿ ಮಾಜಿ ನಗರಾಧ್ಯಕ್ಷ ವಿಜಯರಾಜು ಬಂದು ಸನ್ಮಾನ ಮಾಡಿದರು. ಇದರ ನಂತರ ಶಿಡ್ಲೇಕೋಣ ವಾಲ್ಮೀಕಿ ಪೀಠದ ಸಂಜಯಕುಮಾರ ಸ್ವಾಮೀಜಿ ಬಂದು ಶಾಸಕರಿಗೆ ಸನ್ಮಾನಿಸಿದರು.

ನಗರಸಭೆ ಸಾಮಾನ್ಯ ಸಭೆಗೆ ಸದಸ್ಯರು ಮಾತ್ರ ಹಾಜರಾಗಲು ಅವಕಾಶವಿದೆ. ಆದರೆ, ನಗರಸಭೆಗೆ ಸಂಬಂಧವೇ ಇಲ್ಲದವರು ಸಾಮಾನ್ಯ ಸಭೆಗೆ ಬಂದು ಸನ್ಮಾನ ಮಾಡಿದ್ದು ಎಷ್ಟು ಸೂಕ್ತ ಎಂದು ಕೆಲ ಸದಸ್ಯರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT