<p><strong>ತುಮಕೂರು</strong>: ತುಮಕೂರು ಗ್ರಾಮಾಂತರ ಕ್ಷೇತ್ರದ ಗಂಗೋನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕೆಂಬಳಲು ಪಾಳ್ಯದಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರಾಗಿ ಗೆಲುವು ಸಾಧಿಸಿರುವ ರವಿ ಎಂಬುವರನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಸುರೇಶ್ಗೌಡ ಬಿಜೆಪಿಗೆ ಆಹ್ವಾನಿಸಿರುವ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.</p>.<p>ಈ ವಿಚಾರವಾಗಿ ಜೆಡಿಎಸ್ ಕಾರ್ಯಕರ್ತರು ತಮ್ಮ ಫೇಸ್ಬುಕ್ ಖಾತೆಗಳಲ್ಲಿ ಸುರೇಶ್ಗೌಡ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.</p>.<p><strong>ಆಡಿಯೊದಲ್ಲಿ ಏನಿದೆ</strong>: ‘ಅವನು ಯಾರೂ ಇದ್ದಾನಲ್ಲ ಸೊಸೈಟಿಯವನು ನಾಸಿರ್ ಮತ್ತು ಅಡವಿ ನಡುವೆ ನೀವು ರಾಜಕೀಯ ಮಾಡಲು ಸಾಧ್ಯವಿಲ್ಲ. ಬಿಜೆಪಿಯಲ್ಲಿ ಇದ್ದರೆ ರಾಜನಂತೆ ಇರುವೆ. ನಿನ್ನೇ ಅಧ್ಯಕ್ಷನನ್ನಾಗಿ ಮಾಡುತ್ತೇವೆ’ ಎಂದು ಸುರೇಶ್ಗೌಡರು ರವಿಗೆ ಹೇಳಿದ್ದಾರೆ.</p>.<p>‘ನನ್ನ ಗರಡಿಯಲ್ಲಿ 10 ವರ್ಷ ಬೆಳೆದಿದ್ದೀಯಾ’ ಎಂದು ಸುರೇಶ್ಗೌಡ ಹೇಳಿದಾಗ, ‘ಹೌದು, ಮುದ್ದಹನುಮೇಗೌಡರನ್ನು ಬಿಟ್ಟರೆ, ನಾವು ನಿಮ್ಮ ಜತೆ ಬೆಳೆದಿದ್ದು’ ಎಂದು ರವಿ ಹೇಳಿದ್ದಾರೆ.</p>.<p>‘ಏನು ನಿರ್ಧಾರ ಮಾಡುತ್ತಿಯೋ ಮಾಡು. ಎಲ್ಲಾದರೂ ಸಿಕ್ಕು ಮಾತನಾಡೋಣ. ನಿನ್ನೇ ಅಧ್ಯಕ್ಷನನ್ನಾಗಿ ಮಾಡುತ್ತೇವೆ. ಬಾ ನನ್ನ ಜತೆ’ ಎಂದಿದ್ದಾರೆ.</p>.<p>ಗಂಗೋನಹಳ್ಳಿ ಪಂಚಾಯಿತಿ ಭಾಗದಲ್ಲಿ ಬಿಜೆಪಿಗೆ ನೆಲೆ ಇಲ್ಲ. ಈ ಕಾರಣದಿಂದ ಜೆಡಿಎಸ್ ಬೆಂಬಲಿತ ಸದಸ್ಯರಿಗೆ ಆಮಿಷವೊಡ್ಡಿ ಬಿಜೆಪಿಗೆ ಸೆಳೆಯಲಾಗುತ್ತಿದೆ ಎಂದು ಜೆಡಿಎಸ್ ಮುಖಂಡರು ದೂರುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ತುಮಕೂರು ಗ್ರಾಮಾಂತರ ಕ್ಷೇತ್ರದ ಗಂಗೋನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕೆಂಬಳಲು ಪಾಳ್ಯದಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರಾಗಿ ಗೆಲುವು ಸಾಧಿಸಿರುವ ರವಿ ಎಂಬುವರನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಸುರೇಶ್ಗೌಡ ಬಿಜೆಪಿಗೆ ಆಹ್ವಾನಿಸಿರುವ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.</p>.<p>ಈ ವಿಚಾರವಾಗಿ ಜೆಡಿಎಸ್ ಕಾರ್ಯಕರ್ತರು ತಮ್ಮ ಫೇಸ್ಬುಕ್ ಖಾತೆಗಳಲ್ಲಿ ಸುರೇಶ್ಗೌಡ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.</p>.<p><strong>ಆಡಿಯೊದಲ್ಲಿ ಏನಿದೆ</strong>: ‘ಅವನು ಯಾರೂ ಇದ್ದಾನಲ್ಲ ಸೊಸೈಟಿಯವನು ನಾಸಿರ್ ಮತ್ತು ಅಡವಿ ನಡುವೆ ನೀವು ರಾಜಕೀಯ ಮಾಡಲು ಸಾಧ್ಯವಿಲ್ಲ. ಬಿಜೆಪಿಯಲ್ಲಿ ಇದ್ದರೆ ರಾಜನಂತೆ ಇರುವೆ. ನಿನ್ನೇ ಅಧ್ಯಕ್ಷನನ್ನಾಗಿ ಮಾಡುತ್ತೇವೆ’ ಎಂದು ಸುರೇಶ್ಗೌಡರು ರವಿಗೆ ಹೇಳಿದ್ದಾರೆ.</p>.<p>‘ನನ್ನ ಗರಡಿಯಲ್ಲಿ 10 ವರ್ಷ ಬೆಳೆದಿದ್ದೀಯಾ’ ಎಂದು ಸುರೇಶ್ಗೌಡ ಹೇಳಿದಾಗ, ‘ಹೌದು, ಮುದ್ದಹನುಮೇಗೌಡರನ್ನು ಬಿಟ್ಟರೆ, ನಾವು ನಿಮ್ಮ ಜತೆ ಬೆಳೆದಿದ್ದು’ ಎಂದು ರವಿ ಹೇಳಿದ್ದಾರೆ.</p>.<p>‘ಏನು ನಿರ್ಧಾರ ಮಾಡುತ್ತಿಯೋ ಮಾಡು. ಎಲ್ಲಾದರೂ ಸಿಕ್ಕು ಮಾತನಾಡೋಣ. ನಿನ್ನೇ ಅಧ್ಯಕ್ಷನನ್ನಾಗಿ ಮಾಡುತ್ತೇವೆ. ಬಾ ನನ್ನ ಜತೆ’ ಎಂದಿದ್ದಾರೆ.</p>.<p>ಗಂಗೋನಹಳ್ಳಿ ಪಂಚಾಯಿತಿ ಭಾಗದಲ್ಲಿ ಬಿಜೆಪಿಗೆ ನೆಲೆ ಇಲ್ಲ. ಈ ಕಾರಣದಿಂದ ಜೆಡಿಎಸ್ ಬೆಂಬಲಿತ ಸದಸ್ಯರಿಗೆ ಆಮಿಷವೊಡ್ಡಿ ಬಿಜೆಪಿಗೆ ಸೆಳೆಯಲಾಗುತ್ತಿದೆ ಎಂದು ಜೆಡಿಎಸ್ ಮುಖಂಡರು ದೂರುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>