ಬಿಎಂಶ್ರೀ ತಾಯಿ ನಮ್ಮ ಗ್ರಾಮದವರೆಂಬುದು ಹೆಮ್ಮೆಯ ವಿಷಯ. ಹಾಗಾಗಿ ಸರ್ಕಾರ ಭವನದ ಜೀರ್ಣೋದ್ಧಾರಕ್ಕೆ ಹೆಚ್ಚಿನ ಅನುದಾನ ನೀಡಲಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಂಗಳಿಗೊಂದು ಸಾಂಸ್ಕೃತಿಕ ಚಟುವಟಿಕೆ ಹಮ್ಮಿಕೊಳ್ಳಲಿ.
ಎಸ್.ಎನ್. ಯೋಗೀಶ್ ಸಂಪಿಗೆ
ಸಂಪಿಗೆ ಗ್ರಾಮ ಐತಿಹಾಸಿಕ ಮತ್ತು ಪೌರಾಣಿಕ ಸ್ಥಳ. ಅಲ್ಲಿ ಶ್ರೀನಿವಾಸ ದೇವಾಲಯವಿದೆ. ಕಲಾವಿದರು ಜನಪದ ಕೃಷಿ ಹೀಗೆ ಸಾಕಷ್ಟು ಪ್ರಸಿದ್ಧ ಪಡೆದ ಗ್ರಾಮ. ಇದನ್ನು ಪ್ರವಾಸೋದ್ಯಮ ಗ್ರಾಮವಾಗಿ ಮಾಡಿದರೆ ಬಿಎಂಶ್ರೀ ಭವನವೂ ಜನಪ್ರಿಯವಾಗಲಿದೆ.
ನಂರಾಜು ಮುನಿಯೂರು ಕಸಾಪ ಮಾಜಿ ಅಧ್ಯಕ್ಷ
ಸಂಪಿಗೆಯಲ್ಲಿರುವ ಬಿಎಂಶ್ರೀ ಭವನದ ಸಂಪೂರ್ಣ ಜವಾಬ್ದಾರಿ ಮತ್ತು ನಿರ್ವಹಣೆ ಜಿಲ್ಲಾಡಳಿತದ್ದೇ ಹೊರತು ತುರುವೇಕೆರೆ ಕಸಾಪದ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ನಾವು ಅದಕ್ಕೆ ಹಸ್ತಕ್ಷೇಪ ಮಾಡಲಾಗದು.