<p><strong>ಗುಬ್ಬಿ:</strong> ‘ರ್ಯಾಪಿಡ್ ಪರೀಕ್ಷಾ ಕಿಟ್ ಖರೀದಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಾರ್ವಜನಿಕರು ಮತ್ತು ಅನೇಕ ರಾಜಕೀಯ ಪಕ್ಷಗಳ ಮುಖಂಡರು ಆರೋಪಿಸಿದ್ದಾರೆ. ಸರ್ಕಾರ ಪ್ರಾಮಾಣಿಕವಾಗಿ ಕೊಂಡುಕೊಂಡಿದೆ ಎಂಬುದಾದರೆ ಸೂಕ್ತ ತನಿಖೆ ಮಾಡಿ ರಾಜ್ಯದ ಜನತೆಗೆ ಉತ್ತರ ನೀಡಬೇಕು’ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.</p>.<p>ತಾಲ್ಲೂಕಿನ ಕಲ್ಲ ಹರದಗೆರೆ ಗ್ರಾಮದಲ್ಲಿ ಸುಮಾರು ₹22 ಲಕ್ಷ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣ ಮತ್ತು ಕೊಠಡಿ ದುರಸ್ತಿಗಾಗಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.</p>.<p>‘ಸರ್ಕಾರ ಅಕ್ರಮವಾಗಿ ಖರೀದಿ ಮಾಡಿದೆ ಎಂದಾದರೆ ಯಾವುದೇ ತನಿಖೆಗೆ ಮುಂದಾಗುವುದಿಲ್ಲ. ಯಾವುದಕ್ಕೂ ಸರ್ಕಾರವೇ ಸತ್ಯ ಹೇಳಬೇಕು’ ಎಂದರು.</p>.<p>ತಾಲ್ಲೂಕಿನಲ್ಲಿ ರಸ್ತೆ ಕಾಮಗಾರಿಗಳು ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತವಾಗಲು ಕಾರಣ ಕೋವಿಡ್ ಹಾಗೂ ಕಳೆದ ಬಾರಿ ಉಂಟಾದ ಪ್ರವಾಹದಿಂದ ರಾಜ್ಯ ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆ ಮಾಡಿದ್ದ ಅನುದಾನದ ಹಣವನ್ನು ಹಿಂಪಡೆದುಕೊಂಡಿರುವುದು ಎಂದು ತಿಳಿಸಿದರು.</p>.<p>ಕಲ್ಲ ಹರದಗೆರೆ ಗ್ರಾಮದ ನಿವೃತ್ತ ಮುಖ್ಯಶಿಕ್ಷಕ ಶಿವಾನಂದಯ್ಯ 12 ಕುಂಟೆ ಜಮೀನನ್ನು ಶಾಲಾ ಕಟ್ಟಡ ನಿರ್ಮಾಣಕ್ಕೆ ಉಚಿತವಾಗಿ ದಾನ ನೀಡಿದರು.</p>.<p>ಜಿಲ್ಲಾ ಪಂಚಾಯಿತಿ ಸದಸ್ಯೆ ಯಶೋಧಮ್ಮ, ಗ್ರಾ.ಪಂ ಸದ್ಯ ಸಚ್ಚಿದಾನಂದ ಮೂರ್ತಿ, ಬಿಇಒ ಸೋಮಶೇಖರ್, ಬಿಆರ್ಸಿ ಸಿದ್ಧಲಿಂಗಸ್ವಾಮಿ, ಮುಖ್ಯಶಿಕ್ಷಕರಾದ ದೇವರಾಜು, ಷಡಾಕ್ಷರಿ, ಶಿವಕುಮಾರ್, ಪಾಲನೇತ್ರಯ್ಯ, ಮಹಾಲಿಂಗಣ್ಣ, ಕುಮಾರ್ ಸುರೇಶ್, ಶೇಖರ್ ಮಠಪತಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಬ್ಬಿ:</strong> ‘ರ್ಯಾಪಿಡ್ ಪರೀಕ್ಷಾ ಕಿಟ್ ಖರೀದಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಾರ್ವಜನಿಕರು ಮತ್ತು ಅನೇಕ ರಾಜಕೀಯ ಪಕ್ಷಗಳ ಮುಖಂಡರು ಆರೋಪಿಸಿದ್ದಾರೆ. ಸರ್ಕಾರ ಪ್ರಾಮಾಣಿಕವಾಗಿ ಕೊಂಡುಕೊಂಡಿದೆ ಎಂಬುದಾದರೆ ಸೂಕ್ತ ತನಿಖೆ ಮಾಡಿ ರಾಜ್ಯದ ಜನತೆಗೆ ಉತ್ತರ ನೀಡಬೇಕು’ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.</p>.<p>ತಾಲ್ಲೂಕಿನ ಕಲ್ಲ ಹರದಗೆರೆ ಗ್ರಾಮದಲ್ಲಿ ಸುಮಾರು ₹22 ಲಕ್ಷ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣ ಮತ್ತು ಕೊಠಡಿ ದುರಸ್ತಿಗಾಗಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.</p>.<p>‘ಸರ್ಕಾರ ಅಕ್ರಮವಾಗಿ ಖರೀದಿ ಮಾಡಿದೆ ಎಂದಾದರೆ ಯಾವುದೇ ತನಿಖೆಗೆ ಮುಂದಾಗುವುದಿಲ್ಲ. ಯಾವುದಕ್ಕೂ ಸರ್ಕಾರವೇ ಸತ್ಯ ಹೇಳಬೇಕು’ ಎಂದರು.</p>.<p>ತಾಲ್ಲೂಕಿನಲ್ಲಿ ರಸ್ತೆ ಕಾಮಗಾರಿಗಳು ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತವಾಗಲು ಕಾರಣ ಕೋವಿಡ್ ಹಾಗೂ ಕಳೆದ ಬಾರಿ ಉಂಟಾದ ಪ್ರವಾಹದಿಂದ ರಾಜ್ಯ ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆ ಮಾಡಿದ್ದ ಅನುದಾನದ ಹಣವನ್ನು ಹಿಂಪಡೆದುಕೊಂಡಿರುವುದು ಎಂದು ತಿಳಿಸಿದರು.</p>.<p>ಕಲ್ಲ ಹರದಗೆರೆ ಗ್ರಾಮದ ನಿವೃತ್ತ ಮುಖ್ಯಶಿಕ್ಷಕ ಶಿವಾನಂದಯ್ಯ 12 ಕುಂಟೆ ಜಮೀನನ್ನು ಶಾಲಾ ಕಟ್ಟಡ ನಿರ್ಮಾಣಕ್ಕೆ ಉಚಿತವಾಗಿ ದಾನ ನೀಡಿದರು.</p>.<p>ಜಿಲ್ಲಾ ಪಂಚಾಯಿತಿ ಸದಸ್ಯೆ ಯಶೋಧಮ್ಮ, ಗ್ರಾ.ಪಂ ಸದ್ಯ ಸಚ್ಚಿದಾನಂದ ಮೂರ್ತಿ, ಬಿಇಒ ಸೋಮಶೇಖರ್, ಬಿಆರ್ಸಿ ಸಿದ್ಧಲಿಂಗಸ್ವಾಮಿ, ಮುಖ್ಯಶಿಕ್ಷಕರಾದ ದೇವರಾಜು, ಷಡಾಕ್ಷರಿ, ಶಿವಕುಮಾರ್, ಪಾಲನೇತ್ರಯ್ಯ, ಮಹಾಲಿಂಗಣ್ಣ, ಕುಮಾರ್ ಸುರೇಶ್, ಶೇಖರ್ ಮಠಪತಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>