ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ವರ್ಷ ಸಂಪೂರ್ಣ ಬರಗಾಲ ಆವರಿಸಿದ ಕಾರಣ ಬೆಳೆ ಬಿತ್ತನೆ ಮಾಡಿದ ಕೆಲವೇ ದಿನಗಳಲ್ಲಿ ಒಣಗಿ ಹೋಗಿದೆ. ದವಸ-ಧಾನ್ಯ ಆಗದೆ ಹೋದರೂ ರಾಸುಗಳಿಗೆ ಮೇವಾದರೂ ಲಭ್ಯವಾಗಬಹುದು ಎಂದು ನಂಬಿದ್ದ ರೈತರಿಗೆ ನಿರಾಸೆ ಮೂಡಿಸಿತ್ತು. ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರಿನಲ್ಲಿ ಅಲ್ಪಸ್ವಲ್ಪ ಮಳೆ ಬಿದ್ದಿದ್ದು ಬಿಟ್ಟರೆ ಉತ್ತಮ ಮಳೆ ಆಗಿಲ್ಲ.