ಸಮಸ್ಯೆ ಬಗೆಹರಿಸಲು ಆರೋಗ್ಯ ಇಲಾಖೆ ಹಾಗೂ ತಾಲ್ಲೂಕು, ಜಿಲ್ಲಾ ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟವರು ಗಮನಹರಿಸಿ ಶಿಥಿಲಗೊಂಡಿರುವ ಕಟ್ಟಡ ಕೆಡವಿ ನೂತನ ಕಟ್ಟಡ ನಿರ್ಮಿಸಿ, ವೈದ್ಯರನ್ನು ನೇಮಿಸಬೇಕು. ಇಲ್ಲವೇ ಗ್ರಾಮ ಪಂಚಾಯಿತಿಗಾದರೂ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಾಪಣ್ಣ, ರಂಗಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ್, ಸೋಂಪುರ ಭವ್ಯಕೇಶವಮೂರ್ತಿ, ಮುಖಂಡರಾದ ಬಸವರಾಜು, ಸುನೀಲ್, ಮಲ್ಲಣ್ಣ, ನಾಗೇಂದ್ರಪ್ಪ, ರವಿಕುಮಾರ್, ರಂಗನಾಥ್, ಕಾರ್ತಿಕ್ ಕುಮಾರ್, ದೇವರಾಜ್, ಅಂಜಿ, ಗಂಗಣ್ಣ, ಹನುಮಂತರಾಯಪ್ಪ, ಚಿಕ್ಕಹನುಮಂತರಾಯಪ್ಪ, ಬಡಪ್ಪ ಒತ್ತಾಯಿಸಿದ್ದಾರೆ.