<p><strong>ತುಮಕೂರು: </strong>ಅಗ್ನಿವಂಶ ಕ್ಷತ್ರಿಯ ತಿಗಳ ಸಮಾಜದಮೂಲ ಪುರುಷ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಆಚರಣೆಗೆ ನೆರವಾದ ಸಮಾಜದ ಮುಖಂಡರು, ಯಜಮಾನರನ್ನು ಶುಕ್ರವಾರ ನಗರದ ಹನುಮಂತಪುರ ಕೊಲ್ಲಾಪುರದಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ತಿಗಳ ಸಮಾಜದ ವತಿಯಿಂದ ಗೌರವಿಸಲಾಯಿತು.</p>.<p>ನಾಲ್ಕು ಕಟ್ಟೆಗಳ ಯಜಮಾನರಾದ ಟಿ.ಎಸ್.ಶಿವಕುಮಾರ್, ಕಡಬ ದಾಸೇಗೌಡ, ಟಿ.ಜಿ.ಹನುಮಂತರಾಜು, ತುರುವೇಕೆರೆ ಕೃಷ್ಣಪ್ಪ, ಹನುಮಂತರಾಜು, ಕುಣಿಗಲ್ ಮಂಜಣ್ಣ,, ಗಡಿಯ ಯಜಮಾನರಾದ ಗಂಗಹನುಮಯ್ಯ, ಮಾಗಡಿ ನಾರಾಯಣಪ್ಪ, ರಂಗಪ್ಪ, ಕಡಬ ಚಿಕ್ಕತಿಮ್ಮಯ್ಯ, ತುರುವೇಕೆರೆ ಆಣೆಕಾರ್ ರಾಜಣ್ಣ, ಕುಣಿಗಲ್ ಶಿವಣ್ಣ ಅವರನ್ನು ಸನ್ಮಾನಿಸಲಾಯಿತು.</p>.<p>ಅಗ್ನಿವಂಶ ಕ್ಷತ್ರಿಯ ತಿಗಳ ಸಮಾಜದ ಮುಖಂಡರಾದ ಟಿ.ಎಲ್.ಕುಂಭಯ್ಯ, ಡಿ.ಕುಂಭಿನರಸಯ್ಯ, ಎನ್.ಎಸ್.ಶಿವಣ್ಣ, ವಕೀಲ ನಾರಾಯಣಸ್ವಾಮಿ, ಹನುಮಂತರಾಜು, ಜಿ.ಪಂ ಮಾಜಿ ಉಪಾಧ್ಯಕ್ಷ ಕೃಷ್ಣಮೂರ್ತಿ, ನಿವೃತ್ತ ಪ್ರಾಚಾರ್ಯ ಆಂಜನೇಯ, ಗುಬ್ಬಿ ಮಲ್ಲಪ್ಪ ಅವರನ್ನು ಅಭಿನಂದಿಸಲಾಯಿತು.</p>.<p>ಮುಖಂಡ ಪ್ರೆಸ್ ರಾಜಣ್ಣ ಮಾತನಾಡಿ, ‘ಅಗ್ನಿ ಬನ್ನಿರಾಯಸ್ವಾಮಿ ಸ್ಮರಣೆ ಮಾಡುವ ಮೂಲಕ ಸಮಾಜದಲ್ಲಿ ಒಗ್ಗಟ್ಟು ಮೂಡಿದೆ. ಸಮಾಜದ ಸಂಘಟನೆಗೆ ನೆರವಾಗುತ್ತಿರುವ ಯಜಮಾನರು, ಮುಖಂಡರನ್ನು ಗೌರವಿಸಿ, ಕೃತಜ್ಞತೆ ಹೇಳಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.</p>.<p>ಪ್ರತಿ ವರ್ಷವೂ ಮಾರ್ಚ್ 28ರಂದು ಅಗ್ನಿಬನ್ನಿರಾಯ ಸ್ವಾಮಿ ಜಯಂತಿ ಆಚರಿಸಿ, ಸಮಾಜದಲ್ಲಿ ಒಗ್ಗಟ್ಟು ಮೂಡಲು ಹಿರಿಯರು ಮಾರ್ಗದರ್ಶನ ನೀಡಬೇಕು ಎಂದರು.</p>.<p>ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕಳ್ಳಿಪಾಳ್ಯದ ಎಚ್.ಬಸವರಾಜು, ಅಗ್ನಿಬನ್ನಿರಾಯ ಚರಿತ್ರೆ ಸಾರುವ ಹಾಡುಗಳ ಧ್ವನಿಮುದ್ರಿಕೆ ಸಿದ್ಧಮಾಡಿಕೊಟ್ಟ ಶ್ರೀನಿವಾಸ್, ಡ್ಯಾನಿಯಲ್, ಹೃತಿಕ್ ಅವರನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಅಗ್ನಿವಂಶ ಕ್ಷತ್ರಿಯ ತಿಗಳ ಸಮಾಜದಮೂಲ ಪುರುಷ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಆಚರಣೆಗೆ ನೆರವಾದ ಸಮಾಜದ ಮುಖಂಡರು, ಯಜಮಾನರನ್ನು ಶುಕ್ರವಾರ ನಗರದ ಹನುಮಂತಪುರ ಕೊಲ್ಲಾಪುರದಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ತಿಗಳ ಸಮಾಜದ ವತಿಯಿಂದ ಗೌರವಿಸಲಾಯಿತು.</p>.<p>ನಾಲ್ಕು ಕಟ್ಟೆಗಳ ಯಜಮಾನರಾದ ಟಿ.ಎಸ್.ಶಿವಕುಮಾರ್, ಕಡಬ ದಾಸೇಗೌಡ, ಟಿ.ಜಿ.ಹನುಮಂತರಾಜು, ತುರುವೇಕೆರೆ ಕೃಷ್ಣಪ್ಪ, ಹನುಮಂತರಾಜು, ಕುಣಿಗಲ್ ಮಂಜಣ್ಣ,, ಗಡಿಯ ಯಜಮಾನರಾದ ಗಂಗಹನುಮಯ್ಯ, ಮಾಗಡಿ ನಾರಾಯಣಪ್ಪ, ರಂಗಪ್ಪ, ಕಡಬ ಚಿಕ್ಕತಿಮ್ಮಯ್ಯ, ತುರುವೇಕೆರೆ ಆಣೆಕಾರ್ ರಾಜಣ್ಣ, ಕುಣಿಗಲ್ ಶಿವಣ್ಣ ಅವರನ್ನು ಸನ್ಮಾನಿಸಲಾಯಿತು.</p>.<p>ಅಗ್ನಿವಂಶ ಕ್ಷತ್ರಿಯ ತಿಗಳ ಸಮಾಜದ ಮುಖಂಡರಾದ ಟಿ.ಎಲ್.ಕುಂಭಯ್ಯ, ಡಿ.ಕುಂಭಿನರಸಯ್ಯ, ಎನ್.ಎಸ್.ಶಿವಣ್ಣ, ವಕೀಲ ನಾರಾಯಣಸ್ವಾಮಿ, ಹನುಮಂತರಾಜು, ಜಿ.ಪಂ ಮಾಜಿ ಉಪಾಧ್ಯಕ್ಷ ಕೃಷ್ಣಮೂರ್ತಿ, ನಿವೃತ್ತ ಪ್ರಾಚಾರ್ಯ ಆಂಜನೇಯ, ಗುಬ್ಬಿ ಮಲ್ಲಪ್ಪ ಅವರನ್ನು ಅಭಿನಂದಿಸಲಾಯಿತು.</p>.<p>ಮುಖಂಡ ಪ್ರೆಸ್ ರಾಜಣ್ಣ ಮಾತನಾಡಿ, ‘ಅಗ್ನಿ ಬನ್ನಿರಾಯಸ್ವಾಮಿ ಸ್ಮರಣೆ ಮಾಡುವ ಮೂಲಕ ಸಮಾಜದಲ್ಲಿ ಒಗ್ಗಟ್ಟು ಮೂಡಿದೆ. ಸಮಾಜದ ಸಂಘಟನೆಗೆ ನೆರವಾಗುತ್ತಿರುವ ಯಜಮಾನರು, ಮುಖಂಡರನ್ನು ಗೌರವಿಸಿ, ಕೃತಜ್ಞತೆ ಹೇಳಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.</p>.<p>ಪ್ರತಿ ವರ್ಷವೂ ಮಾರ್ಚ್ 28ರಂದು ಅಗ್ನಿಬನ್ನಿರಾಯ ಸ್ವಾಮಿ ಜಯಂತಿ ಆಚರಿಸಿ, ಸಮಾಜದಲ್ಲಿ ಒಗ್ಗಟ್ಟು ಮೂಡಲು ಹಿರಿಯರು ಮಾರ್ಗದರ್ಶನ ನೀಡಬೇಕು ಎಂದರು.</p>.<p>ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕಳ್ಳಿಪಾಳ್ಯದ ಎಚ್.ಬಸವರಾಜು, ಅಗ್ನಿಬನ್ನಿರಾಯ ಚರಿತ್ರೆ ಸಾರುವ ಹಾಡುಗಳ ಧ್ವನಿಮುದ್ರಿಕೆ ಸಿದ್ಧಮಾಡಿಕೊಟ್ಟ ಶ್ರೀನಿವಾಸ್, ಡ್ಯಾನಿಯಲ್, ಹೃತಿಕ್ ಅವರನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>