ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ ಮಾತನಾಢಿ, ವರ್ಷದಿಂದ ದೆಹಲಿಯಲ್ಲಿ ಬೃಹತ್ ಚಳವಳಿ ಹಮ್ಮಿಕೊಂಡು, ಸುಮಾರು 700 ರೈತರು ಬಲಿದಾನ ಮಾಡಿದ್ದಾರೆ. ಇವರ ತ್ಯಾಗದ ಫಲವಾಗಿ ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಹಿಂಪಡೆದಿದೆ. ವಿಶ್ವದ ಹಸವು ತಣಿಸುವ ರೈತರ ಬಗ್ಗೆ ಸರ್ಕಾರಗಳು ತಾತ್ಸಾರ ಮಾಡಬಾರದು. ರೈತ ವಿರೋಧಿ ಕಾಯ್ದೆ ಜಾರಿ ಮಾಡುವ ಮುನ್ನ ಎಚ್ಚರಿಕೆಯಿಂದ ಇರಬೇಕು ಎನ್ನುವುದನ್ನು ಈ ಹೋರಾಟ ತಿಳಿಸಿಕೊಟ್ಟಿದೆ ಎಂದರು.