<p><strong>ತುಮಕೂರು:</strong> ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) ಆಡಳಿತ ಮಂಡಳಿ ನಿರ್ದೇಶಕ ಸ್ಥಾನದಿಂದ ಮಧುಗಿರಿ ತಾಲ್ಲೂಕಿನ ಬಿ.ನಾಗೇಶಬಾಬು ಅವರನ್ನು ಅನರ್ಹಗೊಳಿಸಿ ಹೈಕೋರ್ಟ್ ಆದೇಶಿಸಿದೆ.</p>.<p>ನಾಗೇಶ್ಬಾಬು ವಿರುದ್ಧ ಸ್ಪರ್ಧಿಸಿ 9 ಮತಗಳ ಅಂತರದಿಂದ ಸೋತಿದ್ದ ಕೊಂಡವಾಡಿ ಚಂದ್ರಶೇಖರ್ ತುಮುಲ್ ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ. ಜಿಲ್ಲಾ ಚುನಾವಣೆ ಅಧಿಕಾರಿ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಆಯ್ಕೆಯನ್ನು ಘೋಷಣೆ ಮಾಡಬೇಕಿದೆ.</p>.<p>ಮಧುಗಿರಿ ತಾಲ್ಲೂಕು ಬಂದ್ರೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ನಾಗೇಶ್ಬಾಬು ಪ್ರತಿನಿಧಿಸಿದ್ದರು. ಈ ಸಂಘವನ್ನು ನಿಯಮಾನುಸಾರ ಅನರ್ಹಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಬಾಬು ಹೈಕೋರ್ಟ್ ಮೆಟ್ಟಿಲೇರಿದ್ದು, ಮತದಾನಕ್ಕೆ ಕೋರ್ಟ್ ಅವಕಾಶ ನೀಡಿತ್ತು. ನಂತರ ನಡೆದ ಚುನಾವಣೆಯಲ್ಲಿ ಬಾಬು ಆಯ್ಕೆ ಆಗಿದ್ದರು. ಈಗ ಅಂತಿಮ ತೀರ್ಪು ಹೊರ ಬಿದ್ದಿದ್ದು, ಮತದಾನಕ್ಕೆ ನೀಡಿದ್ದ ಅವಕಾಶವನ್ನು ಕೋರ್ಟ್ ರದ್ದುಪಡಿಸಿದ್ದು, ಇದರಿಂದಾಗಿ ನಿರ್ದೇಶಕ ಸ್ಥಾನ ಕಳೆದುಕೊಂಡಿದ್ದಾರೆ.</p>.<p>ತುಮುಲ್ ನಿರ್ದೇಶಕರ ಚುನಾವಣೆಗೆ ಮುನ್ನ ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಪ್ರತಿ ಡೇರಿಯಿಂದ ಒಂದು ಮತ ಚಲಾಯಿಸಲು ಅವಕಾಶ ಇರುತ್ತದೆ. ಡೇರಿಯಿಂದ ಡೆಲಿಗೇಟ್ಸ್ ಪಡೆದವರು ಮತದಾನದಲ್ಲಿ ಭಾಗವಹಿಸುತ್ತಾರೆ. ಆದರೆ ನಾಗೇಶ್ಬಾಬು ಪ್ರತಿನಿಧಿಸುವ ಬಂದ್ರೇನಹಳ್ಳಿ ಡೇರಿಗೆ ಮತದಾನದ ಹಕ್ಕು ಸಿಕ್ಕಿರಲಿಲ್ಲ. ಅನರ್ಹರ ಪಟ್ಟಿಗೆ ಸೇರಿಸಲಾಗಿತ್ತು. ಇಂತಹ ಸಂಘಕ್ಕೆ ಮೂರು ನೋಟಿಸ್ ನೀಡಲಾಗುತ್ತದೆ. ಈ ಸಂಘಕ್ಕೂ ನೋಟಿಸ್ ನೀಡಿದ್ದು, ಅದಕ್ಕೆ ಕೊಟ್ಟಿದ್ದ ಉತ್ತರ ಸಮಂಜಸವಾಗಿಲ್ಲ ಎಂಬ ಕಾರಣ ನೀಡಿ, ಮತದಾರರ ಅರ್ಹರ ಪಟ್ಟಿಗೆ ಸೇರಿಸಲಾಗಿತ್ತು.</p>.<p>‘ಮತದಾನಕ್ಕೆ ಅವಕಾಶ ನೀಡದೆ ಅನರ್ಹಗೊಳಿದ್ದನ್ನು ಪ್ರಶ್ನಿಸಿ ನಾಗೇಶ್ಬಾಬು ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ನಂತರ ಕೂಲಂಕಷವಾಗಿ ವಿಚಾರಣೆ ನಡೆದ ನಂತರ ತೀರ್ಪು ಹೊರ ಬಂದಿದೆ. ನನ್ನನ್ನೇ ನಿರ್ದೇಶಕರನ್ನಾಗಿ ಚುನಾವಣೆ ಅಧಿಕಾರಿ ಘೋಷಣೆ ಮಾಡಲಿದ್ದಾರೆ’ ಎಂದು ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.</p>.<p>ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಕೊಂಡವಾಡಿ ಚಂದ್ರಶೇಖರ್ ತೊಡೆತಟ್ಟಿದ್ದರು. ತಮ್ಮ ಆಪ್ತ ನಾಗೇಶ್ಬಾಬು ಅವರನ್ನು ಗೆಲ್ಲಿಸಿಕೊಳ್ಳಲು ರಾಜಣ್ಣ ಸಾಕಷ್ಟು ಪ್ರಯತ್ನ ನಡೆಸಿದ್ದರು. ಆರಂಭದಲ್ಲಿ ಮತದಾನಕ್ಕೆ ಅವಕಾಶ ಸಿಗದಿದ್ದರೂ ಕೋರ್ಟ್ ಮೂಲಕ ಅವಕಾಶ ಸಿಗುವಂತೆ ಮಾಡಿದ್ದರು. ಈಗ ಕೋರ್ಟ್ ತೀರ್ಪಿನಿಂದ ನಾಗೇಶ್ಬಾಬು ಜತೆಗೆ ರಾಜಣ್ಣ ಅವರಿಗೂ ಹಿನ್ನೆಡೆಯಾದಂತಾಗಿದೆ. ತುಮುಲ್ ಚುನಾವಣೆಯಲ್ಲಿ ಚಂದ್ರಶೇಖರ್ ಮೇಲುಗೈ ಸಾಧಿಸಿದಂತಾಗಿದೆ.</p>.<p> <strong>ಪಾವಗಡ ಏನಾಗಲಿದೆ?</strong> </p><p>ಪಾವಗಡ ತಾಲ್ಲೂಕಿನ ಮತಗಳನ್ನು ಮರು ಎಣಿಕೆ ಮಾಡುವಂತೆ ಹೈಕೋರ್ಟ್ ಆದೇಶಿಸಿದ್ದು ಮುಂದಿನ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಬೆಂಬಲಿಗ ಚಂದ್ರಶೇಖರರೆಡ್ಡಿ ಕೇವಲ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದರು. ಪ್ರತಿಸ್ಪರ್ಧಿ ಜೆಡಿಎಸ್ ಬೆಂಬಲದ ಚನ್ನಮಲ್ಲಯ್ಯ ಒಂದು ಮತದ ಅಂತರದಿಂದ ಸೋತಿದ್ದರು. ಈಗ ಮರು ಎಣಿಕೆಗೆ ಆದೇಶಿಸಿದ್ದು ಫಲಿತಾಂಶ ಯಾರ ಕಡೆಗೂ ವಾಲಬಹುದು. ಪಾವಗಡ ತಾಲ್ಲೂಕಿನಲ್ಲಿ ಅನರ್ಹಗೊಂಡಿದ್ದ 7 ಮಂದಿ ಮತದಾನಕ್ಕೆ ಹೈಕೋರ್ಟ್ನಿಂದ ಅವಕಾಶ ಪಡೆದುಕೊಂಡಿದ್ದರು. ಅನರ್ಹಗೊಂಡು ಮತದಾನಕ್ಕೆ ಅವಕಾಶ ಪಡೆದುಕೊಂಡವರ ಮತ ಪತ್ರಗಳನ್ನು ಪ್ರತ್ಯೇಕವಾಗಿ ಇರಿಸಿ ಎಣಿಕೆ ಮಾಡಲಾಗಿತ್ತು. ಮರು ಎಣಿಕೆ ನಂತರ ಫಲಿತಾಂಶ ಘೋಷಿಸಲಾಗುತ್ತದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) ಆಡಳಿತ ಮಂಡಳಿ ನಿರ್ದೇಶಕ ಸ್ಥಾನದಿಂದ ಮಧುಗಿರಿ ತಾಲ್ಲೂಕಿನ ಬಿ.ನಾಗೇಶಬಾಬು ಅವರನ್ನು ಅನರ್ಹಗೊಳಿಸಿ ಹೈಕೋರ್ಟ್ ಆದೇಶಿಸಿದೆ.</p>.<p>ನಾಗೇಶ್ಬಾಬು ವಿರುದ್ಧ ಸ್ಪರ್ಧಿಸಿ 9 ಮತಗಳ ಅಂತರದಿಂದ ಸೋತಿದ್ದ ಕೊಂಡವಾಡಿ ಚಂದ್ರಶೇಖರ್ ತುಮುಲ್ ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ. ಜಿಲ್ಲಾ ಚುನಾವಣೆ ಅಧಿಕಾರಿ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಆಯ್ಕೆಯನ್ನು ಘೋಷಣೆ ಮಾಡಬೇಕಿದೆ.</p>.<p>ಮಧುಗಿರಿ ತಾಲ್ಲೂಕು ಬಂದ್ರೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ನಾಗೇಶ್ಬಾಬು ಪ್ರತಿನಿಧಿಸಿದ್ದರು. ಈ ಸಂಘವನ್ನು ನಿಯಮಾನುಸಾರ ಅನರ್ಹಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಬಾಬು ಹೈಕೋರ್ಟ್ ಮೆಟ್ಟಿಲೇರಿದ್ದು, ಮತದಾನಕ್ಕೆ ಕೋರ್ಟ್ ಅವಕಾಶ ನೀಡಿತ್ತು. ನಂತರ ನಡೆದ ಚುನಾವಣೆಯಲ್ಲಿ ಬಾಬು ಆಯ್ಕೆ ಆಗಿದ್ದರು. ಈಗ ಅಂತಿಮ ತೀರ್ಪು ಹೊರ ಬಿದ್ದಿದ್ದು, ಮತದಾನಕ್ಕೆ ನೀಡಿದ್ದ ಅವಕಾಶವನ್ನು ಕೋರ್ಟ್ ರದ್ದುಪಡಿಸಿದ್ದು, ಇದರಿಂದಾಗಿ ನಿರ್ದೇಶಕ ಸ್ಥಾನ ಕಳೆದುಕೊಂಡಿದ್ದಾರೆ.</p>.<p>ತುಮುಲ್ ನಿರ್ದೇಶಕರ ಚುನಾವಣೆಗೆ ಮುನ್ನ ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಪ್ರತಿ ಡೇರಿಯಿಂದ ಒಂದು ಮತ ಚಲಾಯಿಸಲು ಅವಕಾಶ ಇರುತ್ತದೆ. ಡೇರಿಯಿಂದ ಡೆಲಿಗೇಟ್ಸ್ ಪಡೆದವರು ಮತದಾನದಲ್ಲಿ ಭಾಗವಹಿಸುತ್ತಾರೆ. ಆದರೆ ನಾಗೇಶ್ಬಾಬು ಪ್ರತಿನಿಧಿಸುವ ಬಂದ್ರೇನಹಳ್ಳಿ ಡೇರಿಗೆ ಮತದಾನದ ಹಕ್ಕು ಸಿಕ್ಕಿರಲಿಲ್ಲ. ಅನರ್ಹರ ಪಟ್ಟಿಗೆ ಸೇರಿಸಲಾಗಿತ್ತು. ಇಂತಹ ಸಂಘಕ್ಕೆ ಮೂರು ನೋಟಿಸ್ ನೀಡಲಾಗುತ್ತದೆ. ಈ ಸಂಘಕ್ಕೂ ನೋಟಿಸ್ ನೀಡಿದ್ದು, ಅದಕ್ಕೆ ಕೊಟ್ಟಿದ್ದ ಉತ್ತರ ಸಮಂಜಸವಾಗಿಲ್ಲ ಎಂಬ ಕಾರಣ ನೀಡಿ, ಮತದಾರರ ಅರ್ಹರ ಪಟ್ಟಿಗೆ ಸೇರಿಸಲಾಗಿತ್ತು.</p>.<p>‘ಮತದಾನಕ್ಕೆ ಅವಕಾಶ ನೀಡದೆ ಅನರ್ಹಗೊಳಿದ್ದನ್ನು ಪ್ರಶ್ನಿಸಿ ನಾಗೇಶ್ಬಾಬು ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ನಂತರ ಕೂಲಂಕಷವಾಗಿ ವಿಚಾರಣೆ ನಡೆದ ನಂತರ ತೀರ್ಪು ಹೊರ ಬಂದಿದೆ. ನನ್ನನ್ನೇ ನಿರ್ದೇಶಕರನ್ನಾಗಿ ಚುನಾವಣೆ ಅಧಿಕಾರಿ ಘೋಷಣೆ ಮಾಡಲಿದ್ದಾರೆ’ ಎಂದು ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.</p>.<p>ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಕೊಂಡವಾಡಿ ಚಂದ್ರಶೇಖರ್ ತೊಡೆತಟ್ಟಿದ್ದರು. ತಮ್ಮ ಆಪ್ತ ನಾಗೇಶ್ಬಾಬು ಅವರನ್ನು ಗೆಲ್ಲಿಸಿಕೊಳ್ಳಲು ರಾಜಣ್ಣ ಸಾಕಷ್ಟು ಪ್ರಯತ್ನ ನಡೆಸಿದ್ದರು. ಆರಂಭದಲ್ಲಿ ಮತದಾನಕ್ಕೆ ಅವಕಾಶ ಸಿಗದಿದ್ದರೂ ಕೋರ್ಟ್ ಮೂಲಕ ಅವಕಾಶ ಸಿಗುವಂತೆ ಮಾಡಿದ್ದರು. ಈಗ ಕೋರ್ಟ್ ತೀರ್ಪಿನಿಂದ ನಾಗೇಶ್ಬಾಬು ಜತೆಗೆ ರಾಜಣ್ಣ ಅವರಿಗೂ ಹಿನ್ನೆಡೆಯಾದಂತಾಗಿದೆ. ತುಮುಲ್ ಚುನಾವಣೆಯಲ್ಲಿ ಚಂದ್ರಶೇಖರ್ ಮೇಲುಗೈ ಸಾಧಿಸಿದಂತಾಗಿದೆ.</p>.<p> <strong>ಪಾವಗಡ ಏನಾಗಲಿದೆ?</strong> </p><p>ಪಾವಗಡ ತಾಲ್ಲೂಕಿನ ಮತಗಳನ್ನು ಮರು ಎಣಿಕೆ ಮಾಡುವಂತೆ ಹೈಕೋರ್ಟ್ ಆದೇಶಿಸಿದ್ದು ಮುಂದಿನ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಬೆಂಬಲಿಗ ಚಂದ್ರಶೇಖರರೆಡ್ಡಿ ಕೇವಲ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದರು. ಪ್ರತಿಸ್ಪರ್ಧಿ ಜೆಡಿಎಸ್ ಬೆಂಬಲದ ಚನ್ನಮಲ್ಲಯ್ಯ ಒಂದು ಮತದ ಅಂತರದಿಂದ ಸೋತಿದ್ದರು. ಈಗ ಮರು ಎಣಿಕೆಗೆ ಆದೇಶಿಸಿದ್ದು ಫಲಿತಾಂಶ ಯಾರ ಕಡೆಗೂ ವಾಲಬಹುದು. ಪಾವಗಡ ತಾಲ್ಲೂಕಿನಲ್ಲಿ ಅನರ್ಹಗೊಂಡಿದ್ದ 7 ಮಂದಿ ಮತದಾನಕ್ಕೆ ಹೈಕೋರ್ಟ್ನಿಂದ ಅವಕಾಶ ಪಡೆದುಕೊಂಡಿದ್ದರು. ಅನರ್ಹಗೊಂಡು ಮತದಾನಕ್ಕೆ ಅವಕಾಶ ಪಡೆದುಕೊಂಡವರ ಮತ ಪತ್ರಗಳನ್ನು ಪ್ರತ್ಯೇಕವಾಗಿ ಇರಿಸಿ ಎಣಿಕೆ ಮಾಡಲಾಗಿತ್ತು. ಮರು ಎಣಿಕೆ ನಂತರ ಫಲಿತಾಂಶ ಘೋಷಿಸಲಾಗುತ್ತದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>