<p><strong>ಗುಬ್ಬಿ:</strong> ತಾಲ್ಲೂಕಿನಲ್ಲಿ ಅಡಿಕೆ ಕೊಯ್ಲುಮಾಡಿ ಬೇಯಿಸಿ ಒಣಗಿಸಲು ಗ್ರಾಮ ಹಾಗೂ ಜಮೀನಿನಲ್ಲಿ ಜಾಗವಿಲ್ಲದೆ ಡಾಂಬರು ರಸ್ತೆ ಹಾಗೂ ಹೆದ್ದಾರಿಗಳನ್ನು ರೈತರು ಬಳಸಿಕೊಳ್ಳುತ್ತಿದ್ದಾರೆ.</p>.<p>ಕಳೆದ ಎರಡು, ಮೂರು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ರೈತರು ಹಾಗೂ ಚೇಣಿದಾರರು ಅಡಿಕೆ ಒಣಗಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.</p>.<p>ಹೆದ್ದಾರಿಗೆ ಸಮೀಪವಿರುವ ರೈತರು ಹೆದ್ದಾರಿಯಲ್ಲಿ, ವಾಹನಗಳ ಸಂಚಾರಕ್ಕೆ ಅನುವು ನೀಡದಿರುವ ಜಾಗಗಳಲ್ಲಿ ಹಾಗೂ ಖಾಲಿ ಇರುವ ಹೆದ್ದಾರಿ ಮೇಲು ಸೇತುವೆಗಳಲ್ಲಿ ಒಣಗಿಸುತ್ತಿದ್ದಾರೆ.</p>.<p>‘ಬೇಯಿಸಿದ ಅಡಿಕೆಯನ್ನು ವ್ಯವಸ್ಥಿತವಾಗಿ ಒಣಗಿಸಬೇಕು. ಸ್ವಲ್ಪ ಹೆಚ್ಚು ಕಮ್ಮಿ ಆದಲ್ಲಿ ಅಡಿಕೆ ಕೆಟ್ಟು ಹೋಗಿ ಯಾವುದೇ ಪ್ರಯೋಜನಕ್ಕೆ ಬರದಂತಾಗುತ್ತದೆ. ಅಡಿಕೆಯಿಂದಲೇ ಬದುಕು ಕಟ್ಟಿಕೊಂಡಿರುವ ನಾವು ಸಂಕಷ್ಟಕ್ಕೆ ಸಿಲುಕುವಂತಾಗಿದೆ’ ಎಂದು ರೈತ ಗುರುಮೂರ್ತಿ ಬೇಸರ ವ್ಯಕ್ತಪಡಿಸಿದರು.</p>.<p>‘ಲಕ್ಷಾಂತರ ಬಂಡವಾಳ ಹಾಕಿ ಅಡಿಕೆ ಚೇಣಿ ಮಾಡಿದ್ದೇವೆ. ಸ್ವಲ್ಪ ಹೊತ್ತು ಸಮಯ ಸಿಕ್ಕರೂ ಗಾಳಿಗಾದರೂ ಆರಿಕೊಳ್ಳುತ್ತದೆ ಎಂಬ ಕಾರಣಕ್ಕೆ ಹೆದ್ದಾರಿಗೆ ತಂದು ಹಾಕುತ್ತಿದ್ದೇವೆ. ಒಂದು ಬೆಳೆ ಹಾಳಾದರೆ ಲಕ್ಷಾಂತರ ರೂ ನಷ್ಟವಾಗುತ್ತದೆ’ ಎಂದು ಚೇಣಿದಾರ ಸಿದ್ದಲಿಂಗಪ್ಪ ಹೇಳಿದರು.</p>.<p>‘ತಾಲ್ಲೂಕಿನಲ್ಲಿ ರೈತರು ಅಧಿಕವಾಗಿ ಅಡಿಕೆ ಬೆಳೆಯುತ್ತಿದ್ದಾರೆ. ಅಡಿಕೆ ಒಣಗಿಸಲು ಆಧುನಿಕ ತಂತ್ರಜ್ಞಾನನು ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸಬೇಕಿದೆ’ ಎನ್ನುತ್ತಾರೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಗುರುಪ್ರಸಾದ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಬ್ಬಿ:</strong> ತಾಲ್ಲೂಕಿನಲ್ಲಿ ಅಡಿಕೆ ಕೊಯ್ಲುಮಾಡಿ ಬೇಯಿಸಿ ಒಣಗಿಸಲು ಗ್ರಾಮ ಹಾಗೂ ಜಮೀನಿನಲ್ಲಿ ಜಾಗವಿಲ್ಲದೆ ಡಾಂಬರು ರಸ್ತೆ ಹಾಗೂ ಹೆದ್ದಾರಿಗಳನ್ನು ರೈತರು ಬಳಸಿಕೊಳ್ಳುತ್ತಿದ್ದಾರೆ.</p>.<p>ಕಳೆದ ಎರಡು, ಮೂರು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ರೈತರು ಹಾಗೂ ಚೇಣಿದಾರರು ಅಡಿಕೆ ಒಣಗಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.</p>.<p>ಹೆದ್ದಾರಿಗೆ ಸಮೀಪವಿರುವ ರೈತರು ಹೆದ್ದಾರಿಯಲ್ಲಿ, ವಾಹನಗಳ ಸಂಚಾರಕ್ಕೆ ಅನುವು ನೀಡದಿರುವ ಜಾಗಗಳಲ್ಲಿ ಹಾಗೂ ಖಾಲಿ ಇರುವ ಹೆದ್ದಾರಿ ಮೇಲು ಸೇತುವೆಗಳಲ್ಲಿ ಒಣಗಿಸುತ್ತಿದ್ದಾರೆ.</p>.<p>‘ಬೇಯಿಸಿದ ಅಡಿಕೆಯನ್ನು ವ್ಯವಸ್ಥಿತವಾಗಿ ಒಣಗಿಸಬೇಕು. ಸ್ವಲ್ಪ ಹೆಚ್ಚು ಕಮ್ಮಿ ಆದಲ್ಲಿ ಅಡಿಕೆ ಕೆಟ್ಟು ಹೋಗಿ ಯಾವುದೇ ಪ್ರಯೋಜನಕ್ಕೆ ಬರದಂತಾಗುತ್ತದೆ. ಅಡಿಕೆಯಿಂದಲೇ ಬದುಕು ಕಟ್ಟಿಕೊಂಡಿರುವ ನಾವು ಸಂಕಷ್ಟಕ್ಕೆ ಸಿಲುಕುವಂತಾಗಿದೆ’ ಎಂದು ರೈತ ಗುರುಮೂರ್ತಿ ಬೇಸರ ವ್ಯಕ್ತಪಡಿಸಿದರು.</p>.<p>‘ಲಕ್ಷಾಂತರ ಬಂಡವಾಳ ಹಾಕಿ ಅಡಿಕೆ ಚೇಣಿ ಮಾಡಿದ್ದೇವೆ. ಸ್ವಲ್ಪ ಹೊತ್ತು ಸಮಯ ಸಿಕ್ಕರೂ ಗಾಳಿಗಾದರೂ ಆರಿಕೊಳ್ಳುತ್ತದೆ ಎಂಬ ಕಾರಣಕ್ಕೆ ಹೆದ್ದಾರಿಗೆ ತಂದು ಹಾಕುತ್ತಿದ್ದೇವೆ. ಒಂದು ಬೆಳೆ ಹಾಳಾದರೆ ಲಕ್ಷಾಂತರ ರೂ ನಷ್ಟವಾಗುತ್ತದೆ’ ಎಂದು ಚೇಣಿದಾರ ಸಿದ್ದಲಿಂಗಪ್ಪ ಹೇಳಿದರು.</p>.<p>‘ತಾಲ್ಲೂಕಿನಲ್ಲಿ ರೈತರು ಅಧಿಕವಾಗಿ ಅಡಿಕೆ ಬೆಳೆಯುತ್ತಿದ್ದಾರೆ. ಅಡಿಕೆ ಒಣಗಿಸಲು ಆಧುನಿಕ ತಂತ್ರಜ್ಞಾನನು ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸಬೇಕಿದೆ’ ಎನ್ನುತ್ತಾರೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಗುರುಪ್ರಸಾದ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>