<p><strong>ಗುಬ್ಬಿ:</strong> ತಾಲ್ಲೂಕಿನ ತೊರೇಹಳ್ಳಿ ಬೇವಿನಗುಡ್ಡಪ್ಪ ಸ್ವಾಮಿ (ಆಂಜನೇಯ ಸ್ವಾಮಿ) ದೇವಸ್ಥಾನ ಪ್ರವೇಶಿಸಿದ್ದ ಪರಿಶಿಷ್ಟ ಜಾತಿ ಬಾಲಕಿಯನ್ನು ನಿಂದಿಸಿ, ದೇಗುಲದಿಂದ ಹೊರಗಡೆ ಕಳುಹಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.</p>.<p>‘ಬೇವಿನಗುಡ್ಡಪ್ಪ ಅಭಿವೃದ್ಧಿ ಟ್ರಸ್ಟ್ನವರು ಮಗಳಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬಾಲಕಿಯ ತಾಯಿ ದೊಡ್ಡಮ್ಮ ಗುರುವಾರ ತಹಶೀಲ್ದಾರ್ಗೆ ದೂರು ನೀಡಿದ್ದಾರೆ.</p>.<p>‘ದೇವಸ್ಥಾನದಲ್ಲಿ ಹಿಂದಿನಿಂದಲೂ ಪರಿಶಿಷ್ಟರಿಗೆ ಪ್ರವೇಶ ನೀಡುತ್ತಿಲ್ಲ. ಸಮುದಾಯ ಭವನದಲ್ಲಿ ಊಟಕ್ಕೆ ಹೊರಗೆ ಕೂರಿಸುತ್ತಾರೆ. ಜಾತ್ರೆ ವೇಳೆ ದೇವರ ಮೂರ್ತಿಗಳನ್ನು ಪರಿಶಿಷ್ಟರ ಬೀದಿಗೆ ಕಳುಹಿಸುವುದಿಲ್ಲ’ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.</p>.<p>ಸುದ್ದಿಗಾರರ ಜತೆ ಮಾತನಾಡಿದ ದೊಡ್ಡಮ್ಮ,‘ಪೂಜೆಗೆ ಹೋದಾಗ ಮಗಳು ಅಲ್ಲಿದ್ದ ನೀರಿನ ಬಾಟಲಿ ತೆಗೆದುಕೊಂಡಿದ್ದಳು. ಪೂಜೆ ಮಾಡುವವರು, ನೀನು ಒಳಗೆ ಬರಬಾರದು ಎಂದು ತಳ್ಳಿದರು. ನಾವು ಕರೆಯುವ ತನಕ ಬರಬಾರದು. ಹೊರಗೆ ಕುಳಿತುಕೊಳ್ಳಬೇಕು ಎಂದರು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಬ್ಬಿ:</strong> ತಾಲ್ಲೂಕಿನ ತೊರೇಹಳ್ಳಿ ಬೇವಿನಗುಡ್ಡಪ್ಪ ಸ್ವಾಮಿ (ಆಂಜನೇಯ ಸ್ವಾಮಿ) ದೇವಸ್ಥಾನ ಪ್ರವೇಶಿಸಿದ್ದ ಪರಿಶಿಷ್ಟ ಜಾತಿ ಬಾಲಕಿಯನ್ನು ನಿಂದಿಸಿ, ದೇಗುಲದಿಂದ ಹೊರಗಡೆ ಕಳುಹಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.</p>.<p>‘ಬೇವಿನಗುಡ್ಡಪ್ಪ ಅಭಿವೃದ್ಧಿ ಟ್ರಸ್ಟ್ನವರು ಮಗಳಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬಾಲಕಿಯ ತಾಯಿ ದೊಡ್ಡಮ್ಮ ಗುರುವಾರ ತಹಶೀಲ್ದಾರ್ಗೆ ದೂರು ನೀಡಿದ್ದಾರೆ.</p>.<p>‘ದೇವಸ್ಥಾನದಲ್ಲಿ ಹಿಂದಿನಿಂದಲೂ ಪರಿಶಿಷ್ಟರಿಗೆ ಪ್ರವೇಶ ನೀಡುತ್ತಿಲ್ಲ. ಸಮುದಾಯ ಭವನದಲ್ಲಿ ಊಟಕ್ಕೆ ಹೊರಗೆ ಕೂರಿಸುತ್ತಾರೆ. ಜಾತ್ರೆ ವೇಳೆ ದೇವರ ಮೂರ್ತಿಗಳನ್ನು ಪರಿಶಿಷ್ಟರ ಬೀದಿಗೆ ಕಳುಹಿಸುವುದಿಲ್ಲ’ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.</p>.<p>ಸುದ್ದಿಗಾರರ ಜತೆ ಮಾತನಾಡಿದ ದೊಡ್ಡಮ್ಮ,‘ಪೂಜೆಗೆ ಹೋದಾಗ ಮಗಳು ಅಲ್ಲಿದ್ದ ನೀರಿನ ಬಾಟಲಿ ತೆಗೆದುಕೊಂಡಿದ್ದಳು. ಪೂಜೆ ಮಾಡುವವರು, ನೀನು ಒಳಗೆ ಬರಬಾರದು ಎಂದು ತಳ್ಳಿದರು. ನಾವು ಕರೆಯುವ ತನಕ ಬರಬಾರದು. ಹೊರಗೆ ಕುಳಿತುಕೊಳ್ಳಬೇಕು ಎಂದರು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>