<p><strong>ತುಮಕೂರು: </strong>ಮುಂದಿನ ಪೀಳಿಗೆಗೆ ವಿದ್ಯುತ್ ಉಳಿಸಲುಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ನಿರ್ಲಕ್ಷ್ಯ ತೋರಿದರೆ ಮುಂದೆ ವಿದ್ಯುತ್ ಕ್ಷಾಮ ಉಂಟಾಗಲಿದೆ ಎಂದು ‘ಸಾಹೇ’ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಎಂ.ಝಡ್. ಕುರಿಯನ್ ಎಚ್ಚರಿಸಿದರು.</p>.<p>ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಎನರ್ಜಿ ಕ್ಲಬ್’ ವತಿಯಿಂದ ಮಂಗಳವಾರ ಆರಂಭಗೊಂಡ ಒಂದು ವಾರದ ‘ರಾಷ್ಟ್ರೀಯ ಇಂಧನ ಶಕ್ತಿ ಸಂರಕ್ಷಣಾ ಜಾಗೃತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು<br />ಮಾತನಾಡಿದರು.</p>.<p>ಮುಂದಿನ ಐದು ವರ್ಷಗಳಲ್ಲಿ ಪೆಟ್ರೋಲ್ ಬಂಕ್ಗಳು ಮುಚ್ಚಿ, ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಾಗುತ್ತದೆ. ಆಗ ಸಹಜವಾಗಿ ವಿದ್ಯುತ್ಗೆ ಬೇಡಿಕೆಯುಂಟಾಗುತ್ತದೆ. ಆದ್ದರಿಂದ ಇಂದಿನಿಂದಲೇ ವಿದ್ಯುತ್ ಉಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.</p>.<p>ಆನ್ಲೈನ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಾಂಶುಪಾಲ ಎಂ.ಎಸ್. ರವಿಪ್ರಕಾಶ, ‘ಸುಖಾ ಸುಮ್ಮನೆ ಇಂಧನ ಅಥವಾ ವಿದ್ಯುತ್ ಶಕ್ತಿಯನ್ನು ಬಳಸಬಾರದು. ಶಕ್ತಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದರು.</p>.<p>ಪರೀಕ್ಷಾಂಗ ಕುಲಸಚಿವ ಕರುಣಾಕರ್, ಡೀನ್ ಎಂ. ಸಿದ್ದಪ್ಪ, ವೇಣುಗೋಪಾಲ್, ಆಂತರಿಕ ಗುಣಮಟ್ಟ ಕೋಶ ಘಟಕದ ಮುಖ್ಯ ಸಂಚಾಲಕ ಆರ್. ಪ್ರಕಾಶ್, ಎನರ್ಜಿ ಕ್ಲಬ್ನ ಎಲ್. ಸಂಜೀವ್ ಕುಮಾರ್, ಸಂಚಾಲಕರಾದ ಎನ್. ಪ್ರದೀಪ್, ಜೆ. ಹರ್ಷ, ಜೆ. ಭರತ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಮುಂದಿನ ಪೀಳಿಗೆಗೆ ವಿದ್ಯುತ್ ಉಳಿಸಲುಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ನಿರ್ಲಕ್ಷ್ಯ ತೋರಿದರೆ ಮುಂದೆ ವಿದ್ಯುತ್ ಕ್ಷಾಮ ಉಂಟಾಗಲಿದೆ ಎಂದು ‘ಸಾಹೇ’ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಎಂ.ಝಡ್. ಕುರಿಯನ್ ಎಚ್ಚರಿಸಿದರು.</p>.<p>ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಎನರ್ಜಿ ಕ್ಲಬ್’ ವತಿಯಿಂದ ಮಂಗಳವಾರ ಆರಂಭಗೊಂಡ ಒಂದು ವಾರದ ‘ರಾಷ್ಟ್ರೀಯ ಇಂಧನ ಶಕ್ತಿ ಸಂರಕ್ಷಣಾ ಜಾಗೃತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು<br />ಮಾತನಾಡಿದರು.</p>.<p>ಮುಂದಿನ ಐದು ವರ್ಷಗಳಲ್ಲಿ ಪೆಟ್ರೋಲ್ ಬಂಕ್ಗಳು ಮುಚ್ಚಿ, ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಾಗುತ್ತದೆ. ಆಗ ಸಹಜವಾಗಿ ವಿದ್ಯುತ್ಗೆ ಬೇಡಿಕೆಯುಂಟಾಗುತ್ತದೆ. ಆದ್ದರಿಂದ ಇಂದಿನಿಂದಲೇ ವಿದ್ಯುತ್ ಉಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.</p>.<p>ಆನ್ಲೈನ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಾಂಶುಪಾಲ ಎಂ.ಎಸ್. ರವಿಪ್ರಕಾಶ, ‘ಸುಖಾ ಸುಮ್ಮನೆ ಇಂಧನ ಅಥವಾ ವಿದ್ಯುತ್ ಶಕ್ತಿಯನ್ನು ಬಳಸಬಾರದು. ಶಕ್ತಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದರು.</p>.<p>ಪರೀಕ್ಷಾಂಗ ಕುಲಸಚಿವ ಕರುಣಾಕರ್, ಡೀನ್ ಎಂ. ಸಿದ್ದಪ್ಪ, ವೇಣುಗೋಪಾಲ್, ಆಂತರಿಕ ಗುಣಮಟ್ಟ ಕೋಶ ಘಟಕದ ಮುಖ್ಯ ಸಂಚಾಲಕ ಆರ್. ಪ್ರಕಾಶ್, ಎನರ್ಜಿ ಕ್ಲಬ್ನ ಎಲ್. ಸಂಜೀವ್ ಕುಮಾರ್, ಸಂಚಾಲಕರಾದ ಎನ್. ಪ್ರದೀಪ್, ಜೆ. ಹರ್ಷ, ಜೆ. ಭರತ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>