‘ಈಗ ಎಂಟು ವರ್ಷಗಳಿಂದಲೂ ಸರಿಯಾಗಿ ಮಳೆಯಿಲ್ಲದೆ ನೀರಿಗೆ ತೊಂದರೆಪಡುತ್ತಿದ್ದ ನಮಗೆ ಈಗ ಸ್ವಲ್ಪ ಮಳೆ ಆಗಿದೆ. ನೀರಿನ ತೊಂದರೆ ತಪ್ಪಿದ್ದರೂ ಸದಾ ನೀರಿನ ಕೊರತೆ ಇದ್ದೇ ಇರುವುದರಿಂದ ಈ ಗ್ರಾಮದ ಹಿರೀಕೆರೆಗೆ ಸರ್ಕಾರವರು ನಾಲಾ ಬರುವಂತೆ ತಯಾರಿಸಿರುವ ಎಸ್ಟಿಮೇಟನ್ನು ಜಾಗ್ರತೆ ಮಂಜೂರು ಮಾಡಿಸಿ. ಆ ಮೂಲಕ ಜನ, ಜಾನುವಾರುಗಳಿಗೂ ಅನುಕೂಲ ಕಲ್ಪಿಸಿಕೊಡಬೇಕಾಗಿದೆ ಪ್ರಾರ್ಥಿಸುತ್ತೇವೆ’–ರಾಜಭಕ್ತಿಯುಳ್ಳ ಹೊನ್ನವಳ್ಳಿ ಗ್ರಾಮದ ಪ್ರಜೆಗಳು ಎಂದು ಮಹಾರಾಜರಿಗೆ ವಿಜ್ಞಾಪನಾ ಪತ್ರ ಬರೆಯಲಾಗಿದೆ.