ಈ ಗುಡ್ಡದ ತುದಿ ಭಾಗದಲ್ಲಿರುವ ಕಲ್ಲು ಬಂಡೆಗಳ ಮೇಲೆ ಚಿರತೆಗಳು ಕಾಣಿಸುತ್ತಿವೆ. ಸಂಜೆಯಾದರೆ ಸಾಕು ಹಸು, ಕುರಿ, ಮೇಕೆಗಳ ರೊಪ್ಪಕ್ಕೆ ನುಗ್ಗಲು ಹೊಂಚು ಹಾಕುವ ಚಿರತೆಗಳು ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ತಿಂದು ಹಾಕುತ್ತಿವೆ. ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.