‘ಉಕ್ರೇನ್ ರಾಯಭಾರಿ ಕಚೇರಿ ಅಧಿಕಾರಿಗಳು ನಮಗೆ ಸ್ಪಂದಿಸಲಿಲ್ಲ. ನಾವೇ ಧೈರ್ಯ ಮಾಡಿ ಭಾರತದ ರಾಷ್ಟ್ರಧ್ವಜ ಹಿಡಿದು ಉಕ್ರೇನ್
ರೈಲು ಹತ್ತಿ ಲಿವಿ ಪ್ರಾಂತ್ಯ, ಅಲ್ಲಿಂದ ಬುಡಾಪೆಸ್ಟ್ ನಂತರ ರೊಮೇನಿಯಾ ತಲುಪಿದೆವು. ಬುಡಾಪೆಸ್ಟ್ನಲ್ಲಿ ಸ್ವಯಂಸೇವಕರು ಚರ್ಚ್ನಲ್ಲಿ ಉಳಿಯಲು ಅವಕಾಶ ಕಲ್ಪಿಸಿ, ಊಟದ ವ್ಯವಸ್ಥೆ ಮಾಡಿದ್ದರು. ನಂತರ ಸ್ವಂತ ಖರ್ಚಿನಲ್ಲಿ ರೊಮೇನಿಯಾ ತಲುಪಿದೆವು. ಅಲ್ಲಿ ಭಾರತೀಯ ರಾಯಭಾರ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ತಕ್ಷಣ ಸ್ಪಂದಿಸಿ ವಿಮಾನದಲ್ಲಿ ಆಸನದ ವ್ಯವಸ್ಥೆ ಕಲ್ಪಿಸಲು ಸಹಕರಿಸಿ ದರು’ ಎಂದು ಅವರು ವಿವರಿಸಿದರು.