ಹಣ್ಣು, ಸೊಪ್ಪುಗಳತ್ತ ಜನರ ಚಿತ್ತ: ಬಿಸಿಲಿನ ತೀವ್ರತೆ ಹೆಚ್ಚಾದಂತೆ ವೈದ್ಯರು, ಹವಾಮಾನ ಇಲಾಖೆ ನೀಡುತ್ತಿರುವ ಎಚ್ಚರಿಕೆಯಿಂದ ದ್ರವ ಪದಾರ್ಥಗಳನ್ನು ಹೆಚ್ಚಿಗೆ ಬಳಸುತ್ತಿದ್ದಾರೆ. ಸೊಪ್ಪು, ಕರಬೂಜ, ಕಲ್ಲಂಗಡಿ ಹಣ್ಣು ಹೆಚ್ಚಾಗಿ ಬಳಸುತ್ತಿದ್ದಾರೆ. ಆದರೆ ನೀರಿಲ್ಲದೆ ಹಾಗೂ ಬಿಸಿಲ ತಾಪಕ್ಕೆ ಅವುಗಳು ಸಹ ಉತ್ತಮವಾಗಿ ಹಣ್ಣಾಗದೆ ಬಲಿಯುವ ಮೊದಲೆ ಹಣ್ಣಿನ ಬಣ್ಣ ಬರುತ್ತಿದೆ. ಇನ್ನೂ ತರಕಾರಿಗಳನ್ನು ಕೇಳುವಂತಯೇ ಇಲ್ಲದಾಗಿದ್ದು ಸೊಪ್ಪು ಕಿತ್ತ ಅರ್ಧಗಂಟೆಯಲ್ಲಿಯೇ ಬಾಡಿ ಹೋಗುತ್ತಿದ್ದು ಗುಣಮಟ್ಟದ ತರಕಾರಿ ಮಾರುಕಟ್ಟೆಗೆ ಬುರತ್ತಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ.