ಭಾನುವಾರ, 20 ಜುಲೈ 2025
×
ADVERTISEMENT
ADVERTISEMENT

ತಿಪಟೂರು | ಕೆವಿಕೆ ಸ್ಥಳಾಂತರದ ಸದ್ದು: ಸ್ಥಳೀಯ ರೈತರಿಂದ ತೀವ್ರ ವಿರೋಧ

ಕೊನೇಹಳ್ಳಿ ಕೇಂದ್ರದ ಆಸ್ತಿ ವರ್ಗಾವಣೆ
ಪ್ರಶಾಂತ್ ಕೆ.ಆರ್.
Published : 19 ಜುಲೈ 2025, 3:09 IST
Last Updated : 19 ಜುಲೈ 2025, 3:09 IST
ಫಾಲೋ ಮಾಡಿ
Comments
ಯಾವುದೇ ಕಾರಣಕ್ಕೂ ಕೆವಿಕೆ ಸ್ಥಳಾಂತರಿಸುವ ಪ್ರಶ್ನೆಯೇ ಇಲ್ಲ. ಈಗಾಗಲೇ ಬೀದರ್ ಕುಲಪತಿ ಜೊತೆ ಮಾತುಕತೆ ನಡೆಸಲಾಗಿದೆ. ಕೊನೇಹಳ್ಳಿ ಕೆವಿಕೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಶ್ರಮಿಸಲಾಗುವುದು.
-ಕೆ.ಷಡಕ್ಷರಿ, ಶಾಸಕ
ಕೆವಿಕೆ ಸ್ಥಳಾಂತರಕ್ಕೆ ಮುಂದಾಗಿರುವುದು ತಪ್ಪು. ಈಗಾಗಲೇ 115 ಎಕರೆ ಪ್ರದೇಶದ ಕೃಷಿ ಸಂಶೋಧನೆ ಕೇಂದ್ರ ಮುಚ್ಚಿಹೋಗಿದೆ. ಉಳುಮೆ ನಿರ್ವಹಣೆ ಇಲ್ಲದೆ ಗೋದಾಮು ಕೊಟ್ಟಿಗೆ ಕಚೇರಿಗಳು ಶಿಥಿಲಾವಸ್ಥೆ ತಲುಪಿದೆ. ವನ್ಯ ಜೀವಿಗಳ ಆವಾಸಸ್ಥಾನವಾಗಿದೆ. ಜಾನುವಾರು ಮೇಯಲು ಕಷ್ಟದ ಸ್ಥಿತಿ ಇದೆ. ಶಾಸಕರು ಕೆವಿಕೆ ಉಳಿಸಲು ಯತ್ನಿಸಬೇಕು.
-ಯೋಗೀಶ್, ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ 
ಕೃಷಿಕರ ಕಣ್ಣಿನ ಬೆಳಕು ಕೆವಿಕೆ ಕೇವಲ ಕಚೇರಿಯಲ್ಲ. ಕೃಷಿಕರ ಕಣ್ಣಿನ ಬೆಳಕು. ನಮ್ಮ ಮಕ್ಕಳಿಗೆ ಕೃಷಿ ಬಗ್ಗೆ ಆಸಕ್ತಿ ಬೆಳೆಸಿದ್ದೇವೆ. ಈಗ ಇದನ್ನು ಕಳೆದುಕೊಂಡರೆ ಗ್ರಾಮಕ್ಕೆ ನಷ್ಟವಾಗುತ್ತದೆ. ಇಲ್ಲಿ ನಾವು ಮಣ್ಣು ಪರೀಕ್ಷಿಸಿದ್ದೇವೆ ಬೀಜ ಪಡೆದಿದ್ದೇವೆ ತರಬೇತಿ ಪಡೆದು ನಿಷ್ಠಾವಂತ ಕೃಷಿಕರಾಗಿದ್ದೇವೆ. ಈಗ ನಮ್ಮ ಕೈಯಿಂದ ಈ ಕೇಂದ್ರವನ್ನು ಕಿತ್ತುಕೊಂಡರೆ ಕೃಷಿಕ ಜೀವನ ನಾಶವಾಗುತ್ತದೆ.
-ಪುಟ್ಟಶಂಕರಪ್ಪ, ರೈತ ಪಟ್ರೇಹಳ್ಳಿ 
ಮೌಲ್ಯವರ್ಧನೆ ಸಲಹೆ ಪ್ರಾತ್ಯಕ್ಷಿಕೆಯಿಂದ ವಂಚಿತ ಎರಡು ದಶಕಗಳಿಂದ ರೈತರಿಗೆ ತರಬೇತಿ ನೀಡಲಾಗುತ್ತಿದೆ. ಬೀಜೋತ್ಪಾದನೆ ಮಾಡಿ ರೈತರಿಗೆ ವಿತರಿಸಲಾಗುತ್ತಿದೆ. ಮೈಸೂರು ಮಹಾರಾಜರ ಕಾಲದಿಂದಲೂ ಗುರುತಿಸಿರುವ ಕೊನೇಹಳ್ಳಿ ಹುಲ್ಲುಗಾವಲು ಕೃಷಿ ಮತ್ತು ಪಶು ಪಶುಪಾಲನೆಗೆ ಯೋಗ್ಯವಾಗಿದೆ. ಸ್ಥಳಾಂತರವಾದರೆ ಸ್ಥಳೀಯರು ಕೃಷಿ ಮಾಹಿತಿಯಿಂದ ವಂಚಿತರಾಗುತ್ತಾರೆ. ಮೌಲ್ಯವರ್ಧನೆ ತಾಂತ್ರಿಕ ಸಲಹೆ ವಿವಿಧ ಪ್ರಾತ್ಯಕ್ಷಿಕೆಗಳು ರೈತರು ವೀಕ್ಷಣಗೆ ದೊರೆಯದಂತಾಗುತ್ತದೆ. ವಿವಿಧ ಬೀಜೋತ್ಪಾದನೆ ಮತ್ತು ಹೊಸ ತಳಿಗಳ ಸಂಶೋಧನೆ ನಿಂತು ಹೋಗುತ್ತದೆ.
-ಉಜ್ಜಜ್ಜಿ ರಾಜಣ್ಣ, ಅಲೆಮಾರಿ ಬುಡಕಟ್ಟು ಮಹಾಸಭಾ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT