<p><strong>ಕೊಡಿಗೇನಹಳ್ಳಿ:</strong> ಹೋಬಳಿಯ ಮಸರಪಡಿಯಲ್ಲಿ ಕೆಲ ಪ್ರಭಾವಿಗಳು ಕೆರೆ ಒತ್ತುವರಿ ಜೊತೆಗೆ ಕೆರೆಯಲ್ಲಿನ ಮಣ್ಣು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಸ್ಥಳಕ್ಕೆ ದೌಡಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. </p>.<p>ಮಸರಪಡಿ ಹೊರವಲಯದಲ್ಲಿನ ಕೆರೆಯನ್ನು ಬೆಂಗಳೂರಿನ ಕೆಲ ಪ್ರಭಾವಿಗಳು ಸ್ಥಳೀಯರ ಹಾಗೂ ರಿಯಲ್ ಎಸ್ಟೇಟ್ ದಂಧೆಕೋರರ ಸಹಕಾರದಿಂದ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದರು.</p>.<p>ನೂರಾರು ವರ್ಷಗಳಿಂದ ಈ ಕೆರೆಯಲ್ಲಿನ ನೀರನ್ನು ಕೃಷಿ, ದನಕರು, ಕುರಿ-ಮೇಕೆಗೆ ನೀರುಣಿಸಲು ಹಾಗೂ ಮೇವು ತಿನ್ನಲು ಬಳಕೆ ಮಾಡಿಕೊಳ್ಳುತ್ತಿದ್ದೆವು. ಆದರೆ ಈಗ ಕೆಲವರು ಅರ್ಧ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಆ ಜಮೀನಿಗೆ ಕಲ್ಲು, ಮುಳ್ಳುತಂತಿ ಹಾಕಿಸಿರುವುದಲ್ಲದೇ, ಗ್ರಾಮ ಪಂಚಾಯಿತಿ ಮತ್ತು ಸಣ್ಣ ನೀರಾವರಿ ಇಲಾಖೆಯವರ ಅನುಮತಿ ಪಡೆಯದೆ ಮಸರಪಡಿ ಹಾಗೂ ಸಿಂಗನಹಳ್ಳಿ ಕೆರೆಗಳಲ್ಲಿ ಮಣ್ಣನ್ನು ಹೊಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.</p>.<p>ಒತ್ತುವರಿ ತೆರವು ಮಾಡಬೇಕು. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಗೋಪಾಲ್, ಜಯಮ್ಮ, ಲಕ್ಷ್ಮಮ್ಮ, ಅಲುವೇಲಮ್ಮ, ಭಾಗ್ಯಮ್ಮ, ಶಾರದಮ್ಮ, ಆನಂದಮ್ಮ, ಹುಸೇನ್ ಬಿ, ಲಕ್ಷ್ಮಮ್ಮ, ರಂಗಮ್ಮ, ನಾಗಮ್ಮ, ತಿಪ್ಪಮ್ಮ, ರಾಮಾಂಜಪ್ಪ ಹಾಗೂ ಕೆಲ ರೈತ ಸಂಘಟನೆಯವರು ಎಚ್ಚರಿಸಿದ್ದಾರೆ.</p>.<p>‘ನಾನು ಕೆರೆಯಲ್ಲಿನ ಯಾವುದೇ ಭೂಮಿ ಒತ್ತುವರಿ ಮಾಡಿಕೊಂಡಿಲ್ಲ. ಅಧಿಕಾರಿಗಳು ಬಂದು ಸ್ಥಳ ತನಿಖೆ ನಡೆಸಿ ಈ ಸ್ಥಳ ಕೆರೆ ಭೂಮಿ ಎಂದರೆ ನಾನು ಯಾವುದೇ ತಕರಾರರಿಲ್ಲದೇ ಭೂಮಿ ಬಿಡಲು ಸಿದ್ಧ’ ಎಂದು ಭೂಮಾಲೀಕ ಕೃಷ್ಣಮೂರ್ತಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಡಿಗೇನಹಳ್ಳಿ:</strong> ಹೋಬಳಿಯ ಮಸರಪಡಿಯಲ್ಲಿ ಕೆಲ ಪ್ರಭಾವಿಗಳು ಕೆರೆ ಒತ್ತುವರಿ ಜೊತೆಗೆ ಕೆರೆಯಲ್ಲಿನ ಮಣ್ಣು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಸ್ಥಳಕ್ಕೆ ದೌಡಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. </p>.<p>ಮಸರಪಡಿ ಹೊರವಲಯದಲ್ಲಿನ ಕೆರೆಯನ್ನು ಬೆಂಗಳೂರಿನ ಕೆಲ ಪ್ರಭಾವಿಗಳು ಸ್ಥಳೀಯರ ಹಾಗೂ ರಿಯಲ್ ಎಸ್ಟೇಟ್ ದಂಧೆಕೋರರ ಸಹಕಾರದಿಂದ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದರು.</p>.<p>ನೂರಾರು ವರ್ಷಗಳಿಂದ ಈ ಕೆರೆಯಲ್ಲಿನ ನೀರನ್ನು ಕೃಷಿ, ದನಕರು, ಕುರಿ-ಮೇಕೆಗೆ ನೀರುಣಿಸಲು ಹಾಗೂ ಮೇವು ತಿನ್ನಲು ಬಳಕೆ ಮಾಡಿಕೊಳ್ಳುತ್ತಿದ್ದೆವು. ಆದರೆ ಈಗ ಕೆಲವರು ಅರ್ಧ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಆ ಜಮೀನಿಗೆ ಕಲ್ಲು, ಮುಳ್ಳುತಂತಿ ಹಾಕಿಸಿರುವುದಲ್ಲದೇ, ಗ್ರಾಮ ಪಂಚಾಯಿತಿ ಮತ್ತು ಸಣ್ಣ ನೀರಾವರಿ ಇಲಾಖೆಯವರ ಅನುಮತಿ ಪಡೆಯದೆ ಮಸರಪಡಿ ಹಾಗೂ ಸಿಂಗನಹಳ್ಳಿ ಕೆರೆಗಳಲ್ಲಿ ಮಣ್ಣನ್ನು ಹೊಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.</p>.<p>ಒತ್ತುವರಿ ತೆರವು ಮಾಡಬೇಕು. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಗೋಪಾಲ್, ಜಯಮ್ಮ, ಲಕ್ಷ್ಮಮ್ಮ, ಅಲುವೇಲಮ್ಮ, ಭಾಗ್ಯಮ್ಮ, ಶಾರದಮ್ಮ, ಆನಂದಮ್ಮ, ಹುಸೇನ್ ಬಿ, ಲಕ್ಷ್ಮಮ್ಮ, ರಂಗಮ್ಮ, ನಾಗಮ್ಮ, ತಿಪ್ಪಮ್ಮ, ರಾಮಾಂಜಪ್ಪ ಹಾಗೂ ಕೆಲ ರೈತ ಸಂಘಟನೆಯವರು ಎಚ್ಚರಿಸಿದ್ದಾರೆ.</p>.<p>‘ನಾನು ಕೆರೆಯಲ್ಲಿನ ಯಾವುದೇ ಭೂಮಿ ಒತ್ತುವರಿ ಮಾಡಿಕೊಂಡಿಲ್ಲ. ಅಧಿಕಾರಿಗಳು ಬಂದು ಸ್ಥಳ ತನಿಖೆ ನಡೆಸಿ ಈ ಸ್ಥಳ ಕೆರೆ ಭೂಮಿ ಎಂದರೆ ನಾನು ಯಾವುದೇ ತಕರಾರರಿಲ್ಲದೇ ಭೂಮಿ ಬಿಡಲು ಸಿದ್ಧ’ ಎಂದು ಭೂಮಾಲೀಕ ಕೃಷ್ಣಮೂರ್ತಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>