ಗುಬ್ಬಿ: ಪಟ್ಟಣದ ತೊರೆಮಠದ ಪೀಠಾಧ್ಯಕ್ಷ ರಾಜಶೇಖರ ಸ್ವಾಮೀಜಿ ಅಂತಿಮ ವಿಧಿ ವಿಧಾನ ಮಠದ ಆವರಣದಲ್ಲಿ ಮಂಗಳವಾರ ನೆರವೇರಿತು.
ರಾಜಶೇಖರ ಸ್ವಾಮೀಜಿ 37 ವರ್ಷ ತೊರೆಮಠದ ಪೀಠಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ವಿವಿಧ ಮಠಾಧೀಶರ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ವೀರಶೈವ ಲಿಂಗಾಯತ ಪದ್ಧತಿಯಂತೆ ವಿಭೂತಿ ಹಾಗೂ ಇಟ್ಟಿಗೆಗಳಿಂದ ಸಮಾಧಿ ನಿರ್ಮಿಸಲಾಗಿತ್ತು. ಸ್ವಾಮೀಜಿಗಳ ಪೂರ್ವಾಶ್ರಮದ ಸಂಬಂಧಿಗಳನ್ನು ಒಳಗೊಂಡಂತೆ ಮಠದ ಭಕ್ತರು ಹಾಗೂ 18 ಕೋಮಿನ ಮುಖಂಡರ ಭಾಗಿಯಾದರು.