<p><strong>pokಶಿರಾ:</strong> ಪಾಕ್ ಆಕ್ರಮಿತ ಕಾಶ್ಮೀರ ಮತ್ತೆ ಭಾರತಕ್ಕೆ ಸೇರುವ ಮೂಲಕ ನಮ್ಮ ದೇಶದ ಭೂಪಟ ವಿಸ್ತಾರವಾಗಬೇಕು ಎಂದು ಸ್ಪಟಿಕಪುರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ದೊದ್ದಬಾಣಗೆರೆ ಗ್ರಾಮದಲ್ಲಿ ನಡೆದ ವೀರ ಆಂಜನೇಯ, ಶಿವ ಪಾರ್ವತಿ, ಮಹಾಗಣಪತಿ ಹಾಗೂ ನಾಗದೇವತಾ ಪ್ರತಿಷ್ಟಾಪನಾ ಮಹೋತ್ಸವದಲ್ಲಿ ಮಾತನಾಡಿದರು.</p>.<p>ಗಡಿಯಲ್ಲಿ ಸೈನಿಕರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಕಠಿಣ ಸಮಯದಲ್ಲಿ ಪ್ರಧಾನಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿರುವ ಎಲ್ಲಾ ನಿರ್ಧಾರಗಳಿಗೂ ಪಕ್ಷಾತೀತವಾಗಿ ಕೈಜೋಡಿಸುವ ಮೂಲಕ ದೇಶದ ಸಾರ್ವಭೌಮತೆ ಎತ್ತಿಹಿಡಿದ್ದಾರೆ ಎಂದರು.</p>.<p>ಮದಲೂರು ಕರೆ ತುಂಬಿದ ನಂತರ ದೊಡ್ಡಬಾಣಗೆರೆ ಕೆರೆಗೆ ಹೇಮಾವತಿ ನೀರು ಹರಿಸುವ ಬೇಡಿಕೆ ಇಟ್ಟಿದ್ದೆವು, ಭದ್ರಾ ಹಾಗೂ ಹೇಮಾವತಿ ಎರಡು ನೀರು ಬರಲಿ ಎಂದರು.</p>.<p>ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ಭದ್ರಾ ನೀರು ತರುವಾಗ ಪ್ರಕೃತಿ ಮತ್ತು ಜನರನ್ನು ಉಳಿಸಲು ಅನೇಕ ತಂತ್ರಗಳನ್ನು ಮಾಡಲಾಗುತ್ತಿದೆ. ದೊಡ್ಡಬಾಣಗೆರೆ ಕೆರೆಗೆ ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ನೀರನ್ನೂ ಕೊಡಲಾಗುವುದು ಎಂದರು.</p>.<p>ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ, ನಾಲ್ಕು ದೇವರ ಸಂಗಮದಲ್ಲಿ ಕೆರೆಯ ದಡದಲ್ಲಿ ದೇವಾಲಯ ನಿರ್ಮಾಣವಾಗಿದೆ. ಇದು ಗ್ರಾಮ ಏಳಿಗೆಗೆ ಉತ್ತಮ ಸಂದೇಶ ಸಾರುವಂತಿದೆ ಎಂದರು.</p>.<p>ವನಕಲ್ಲು ಸಂಸ್ಥಾನ ಮಠದ ಪೀಠಾಧ್ಯಕ್ಷ ಬಸವರಮಾನಂದ ಸ್ವಾಮೀಜಿ, ವಿಎಸ್ಎಸ್ಎನ್ ಅಧ್ಯಕ್ಷ ಬಿ.ಹಲುಗುಂಡೇಗೌಡ, ಬಿ.ಎಚ್.ಗುಜ್ಜಾರಪ್ಪ, ಎಸ್.ರಾಮಕೃಷ್ಣ, ಅಜ್ಜೇಗೌಡ, ರಂಗನಾಥಪ್ಪ, ಬಿ.ವಿ.ಗುಂಡಪ್ಪ, ಮಲ್ಲಮ್ಮ ಕಾಂತರಾಜ್, ರೂಪಾ ನರಸಪ್ಪ, ಜಿ.ರಾಜಣ್ಣ, ಹನುಮಂತರಾಯಪ್ಪ, ಶ್ರೀರಾಮೇಗೌಡ, ಪುಟ್ಟೀರಪ್ಪ, ಕ್ಯಾದಿಗುಂಟೆ ತಿಪ್ಪೇಸ್ವಾಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>pokಶಿರಾ:</strong> ಪಾಕ್ ಆಕ್ರಮಿತ ಕಾಶ್ಮೀರ ಮತ್ತೆ ಭಾರತಕ್ಕೆ ಸೇರುವ ಮೂಲಕ ನಮ್ಮ ದೇಶದ ಭೂಪಟ ವಿಸ್ತಾರವಾಗಬೇಕು ಎಂದು ಸ್ಪಟಿಕಪುರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ದೊದ್ದಬಾಣಗೆರೆ ಗ್ರಾಮದಲ್ಲಿ ನಡೆದ ವೀರ ಆಂಜನೇಯ, ಶಿವ ಪಾರ್ವತಿ, ಮಹಾಗಣಪತಿ ಹಾಗೂ ನಾಗದೇವತಾ ಪ್ರತಿಷ್ಟಾಪನಾ ಮಹೋತ್ಸವದಲ್ಲಿ ಮಾತನಾಡಿದರು.</p>.<p>ಗಡಿಯಲ್ಲಿ ಸೈನಿಕರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಕಠಿಣ ಸಮಯದಲ್ಲಿ ಪ್ರಧಾನಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿರುವ ಎಲ್ಲಾ ನಿರ್ಧಾರಗಳಿಗೂ ಪಕ್ಷಾತೀತವಾಗಿ ಕೈಜೋಡಿಸುವ ಮೂಲಕ ದೇಶದ ಸಾರ್ವಭೌಮತೆ ಎತ್ತಿಹಿಡಿದ್ದಾರೆ ಎಂದರು.</p>.<p>ಮದಲೂರು ಕರೆ ತುಂಬಿದ ನಂತರ ದೊಡ್ಡಬಾಣಗೆರೆ ಕೆರೆಗೆ ಹೇಮಾವತಿ ನೀರು ಹರಿಸುವ ಬೇಡಿಕೆ ಇಟ್ಟಿದ್ದೆವು, ಭದ್ರಾ ಹಾಗೂ ಹೇಮಾವತಿ ಎರಡು ನೀರು ಬರಲಿ ಎಂದರು.</p>.<p>ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ಭದ್ರಾ ನೀರು ತರುವಾಗ ಪ್ರಕೃತಿ ಮತ್ತು ಜನರನ್ನು ಉಳಿಸಲು ಅನೇಕ ತಂತ್ರಗಳನ್ನು ಮಾಡಲಾಗುತ್ತಿದೆ. ದೊಡ್ಡಬಾಣಗೆರೆ ಕೆರೆಗೆ ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ನೀರನ್ನೂ ಕೊಡಲಾಗುವುದು ಎಂದರು.</p>.<p>ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ, ನಾಲ್ಕು ದೇವರ ಸಂಗಮದಲ್ಲಿ ಕೆರೆಯ ದಡದಲ್ಲಿ ದೇವಾಲಯ ನಿರ್ಮಾಣವಾಗಿದೆ. ಇದು ಗ್ರಾಮ ಏಳಿಗೆಗೆ ಉತ್ತಮ ಸಂದೇಶ ಸಾರುವಂತಿದೆ ಎಂದರು.</p>.<p>ವನಕಲ್ಲು ಸಂಸ್ಥಾನ ಮಠದ ಪೀಠಾಧ್ಯಕ್ಷ ಬಸವರಮಾನಂದ ಸ್ವಾಮೀಜಿ, ವಿಎಸ್ಎಸ್ಎನ್ ಅಧ್ಯಕ್ಷ ಬಿ.ಹಲುಗುಂಡೇಗೌಡ, ಬಿ.ಎಚ್.ಗುಜ್ಜಾರಪ್ಪ, ಎಸ್.ರಾಮಕೃಷ್ಣ, ಅಜ್ಜೇಗೌಡ, ರಂಗನಾಥಪ್ಪ, ಬಿ.ವಿ.ಗುಂಡಪ್ಪ, ಮಲ್ಲಮ್ಮ ಕಾಂತರಾಜ್, ರೂಪಾ ನರಸಪ್ಪ, ಜಿ.ರಾಜಣ್ಣ, ಹನುಮಂತರಾಯಪ್ಪ, ಶ್ರೀರಾಮೇಗೌಡ, ಪುಟ್ಟೀರಪ್ಪ, ಕ್ಯಾದಿಗುಂಟೆ ತಿಪ್ಪೇಸ್ವಾಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>