ಕ್ಷೇತ್ರಕ್ಕೆ 4893 ಮನೆಗಳನ್ನು ಮಂಜೂರು ಮಾಡಿಸಲಾಗಿದೆ. ಪಟ್ಟಣದ ಕರಡಿಪುರದಲ್ಲಿ ಬಡವರಿಗಾಗಿ 250ಕ್ಕೂ ಹೆಚ್ಚು ನಿವೇಶನದ ಸ್ಥಳವನ್ನು ಗುರುತು ಮಾಡಲಾಗಿದೆ
ಕೆ.ಎನ್.ರಾಜಣ್ಣ ಶಾಸಕ
500 ಮನೆಗಳನ್ನು ಮಂಜೂರು ಮಾಡಿಸಲಾಗಿದೆ. ಜಿ.ಪ್ಲಸ್ ಮನೆಗಳನ್ನು ನಿರ್ಮಾಣ ಮಾಡಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಲಾಲಾಪೇಟೆ ಮಂಜುನಾಥ್ ಪುರಸಭೆ ಅಧ್ಯಕ್ಷ
ಬಡವರಿಗೆ ಮನೆ ಕಲ್ಪಿಸಿಕೊಡಿ
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿರುವ ಸರ್ಕಾರದ ಜಾಗ ಗುರುತಿಸಿ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಈಗಾಗಲೇ ಬಡವಾಣೆ ನಿರ್ಮಿಸಲಾಗಿದೆ. ಈಗಾಗಲೇ ಕೆಲವು ಕಡೆ ಬಡವರಿಗೆ ನಿವೇಶನ ವಿತರಣೆ ಮಾಡಲಾಗುತ್ತಿದೆ. ಪಟ್ಟಣದಲ್ಲಿ ಆಶ್ರಯ ಸಮಿತಿ ರಚನೆ ಮಾಡಿ ಒಂದೂವರೆ ವರ್ಷ ಕಳೆಯುತ್ತಾ ಬಂದಿದೆ. ಇದುವರೆಗೂ ಸಭೆ ನಡೆದಿಲ್ಲ. ಈ ಭಾಗದಲ್ಲಿ ಸಭೆ ನಡೆದು ಬಡವರಿಗೆ ನಿವೇಶನ ಹಾಗೂ ಮನೆ ಹಂಚಿಕೆ ಮಾಡಿದರೆ ಪಟ್ಟಣದ ಬಡವರಿಗೆ ಅನುಕೂಲವಾಗಲಿದೆ ಎಂಬುದು ಜನರ ಹಕ್ಕೋತ್ತಾಯ.