<p><strong>ತುಮಕೂರು: </strong>ರಾಷ್ಟ್ರೀಯ ಅಂಧರ ಕ್ಷೇಮಾಭಿವೃದ್ಧಿ ಸಂಸ್ಥೆಯ 11ನೇ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮೂರು ಅಂಗವಿಕಲ ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟವು.</p>.<p>ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಎಸ್.ಜಗದೀಶ ಕನಮಡಿ ಅವರು ತಿಪಟೂರಿನ ವಿನುತಾ ಅವರ ಕೈ ಹಿಡಿದರು.</p>.<p>ತುಮಕೂರಿನ ಟಿ.ಎನ್.ಮಂಜುನಾಥ್ ಮತ್ತು ಚಿಕ್ಕಬಳ್ಳಾಪುರದ ಮಂಜುಳಾ ಅವರ ಜೋಡಿ ಗಾಲಿ ಕುರ್ಚಿಯನ್ನೇ ಹಸೆಮಣೆ ಆಗಿಸಿಕೊಂಡು ಮಾಂಗಲ್ಯ ಧಾರಣೆ ಸಂಪ್ರದಾಯದಲ್ಲಿ ಭಾಗಿಯಾಯಿತು.</p>.<p>ಕಾಲು ಊನಗೊಂಡಿದ್ದರೂ ಗುಬ್ಬಿ ತಾಲ್ಲೂಕಿನ ಎಂ.ಧನಂಜಯ್ ಅವರು ದಾವಣಗೆರೆಯ ಕೆ.ಜಿ.ಸಿಂಧು ಅವರೊಂದಿಗೆ ಬದುಕಿನ ಹೊಸ ಹೆಜ್ಜೆ ಇಟ್ಟರು. ಅದಕ್ಕೆ ಅಂಧರಾದ ಸಿಂಧು ಸಹ ಸಾಥ್ ನೀಡಿದರು.</p>.<p>ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಂಗವಿಕಲತೆಗೆ ಸವಾಲು ಹಾಕಿ ಇವರು ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇದು ನಿಜವಾದ ಪವಾಡ. ಇವರಲ್ಲಿ ದೈಹಿಕ ನೂನ್ಯತೆ ಇರಬಹುದು, ಆದರೆ ಇಚ್ಛಾಶಕ್ತಿಯ ಕೊರತೆ ಇಲ್ಲ ಎಂದರು.</p>.<p>ಜೀವನದಲ್ಲಿ ಸಂಗಾತಿ ಇದ್ದರೆ ಬದುಕಲು ಆನೆ ಬಲ ಬರುತ್ತದೆ. ಗೃಹಸ್ಥಾಶ್ರಮ ಶ್ರೇಷ್ಠವೆಂದು ಪುರಾಣಗಳು ಹೇಳಿವೆ. ಅದು ಉಳಿದ ಆಶ್ರಮಗಳನ್ನು ಕಾಪಾಡುತ್ತದೆ ಎಂದು ಹೇಳಿದರು.</p>.<p>ಅಂಗವಿಕಲರನ್ನು ನಾವು ವ್ಯಂಗ್ಯ ಮಾಡಬಾರದು ಎಂದು ಸಲಹೆ ನೀಡಿದರು.</p>.<p>ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ಕ್ಷೇಮಾಭಿವೃದ್ಧಿ ಸಂಘದ ಕಾರ್ಯ ಶ್ಲಾಘನೀಯ. ಸಂಘದ ಕಟ್ಟಡಕ್ಕಾಗಿ ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಸಿ.ಎ. ಸೈಟ್ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ರಾಷ್ಟ್ರೀಯ ಅಂಧರ ಕ್ಷೇಮಾಭಿವೃದ್ಧಿ ಸಂಸ್ಥೆಯ 11ನೇ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮೂರು ಅಂಗವಿಕಲ ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟವು.</p>.<p>ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಎಸ್.ಜಗದೀಶ ಕನಮಡಿ ಅವರು ತಿಪಟೂರಿನ ವಿನುತಾ ಅವರ ಕೈ ಹಿಡಿದರು.</p>.<p>ತುಮಕೂರಿನ ಟಿ.ಎನ್.ಮಂಜುನಾಥ್ ಮತ್ತು ಚಿಕ್ಕಬಳ್ಳಾಪುರದ ಮಂಜುಳಾ ಅವರ ಜೋಡಿ ಗಾಲಿ ಕುರ್ಚಿಯನ್ನೇ ಹಸೆಮಣೆ ಆಗಿಸಿಕೊಂಡು ಮಾಂಗಲ್ಯ ಧಾರಣೆ ಸಂಪ್ರದಾಯದಲ್ಲಿ ಭಾಗಿಯಾಯಿತು.</p>.<p>ಕಾಲು ಊನಗೊಂಡಿದ್ದರೂ ಗುಬ್ಬಿ ತಾಲ್ಲೂಕಿನ ಎಂ.ಧನಂಜಯ್ ಅವರು ದಾವಣಗೆರೆಯ ಕೆ.ಜಿ.ಸಿಂಧು ಅವರೊಂದಿಗೆ ಬದುಕಿನ ಹೊಸ ಹೆಜ್ಜೆ ಇಟ್ಟರು. ಅದಕ್ಕೆ ಅಂಧರಾದ ಸಿಂಧು ಸಹ ಸಾಥ್ ನೀಡಿದರು.</p>.<p>ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಂಗವಿಕಲತೆಗೆ ಸವಾಲು ಹಾಕಿ ಇವರು ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇದು ನಿಜವಾದ ಪವಾಡ. ಇವರಲ್ಲಿ ದೈಹಿಕ ನೂನ್ಯತೆ ಇರಬಹುದು, ಆದರೆ ಇಚ್ಛಾಶಕ್ತಿಯ ಕೊರತೆ ಇಲ್ಲ ಎಂದರು.</p>.<p>ಜೀವನದಲ್ಲಿ ಸಂಗಾತಿ ಇದ್ದರೆ ಬದುಕಲು ಆನೆ ಬಲ ಬರುತ್ತದೆ. ಗೃಹಸ್ಥಾಶ್ರಮ ಶ್ರೇಷ್ಠವೆಂದು ಪುರಾಣಗಳು ಹೇಳಿವೆ. ಅದು ಉಳಿದ ಆಶ್ರಮಗಳನ್ನು ಕಾಪಾಡುತ್ತದೆ ಎಂದು ಹೇಳಿದರು.</p>.<p>ಅಂಗವಿಕಲರನ್ನು ನಾವು ವ್ಯಂಗ್ಯ ಮಾಡಬಾರದು ಎಂದು ಸಲಹೆ ನೀಡಿದರು.</p>.<p>ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ಕ್ಷೇಮಾಭಿವೃದ್ಧಿ ಸಂಘದ ಕಾರ್ಯ ಶ್ಲಾಘನೀಯ. ಸಂಘದ ಕಟ್ಟಡಕ್ಕಾಗಿ ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಸಿ.ಎ. ಸೈಟ್ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>