ವ್ಯಕ್ತಿಪೂಜೆ: ನಗರದಲ್ಲಿ ನಡೆದ ವಿಭಾಗದ ಮಟ್ಟದ ವಿಷಯ ಪ್ರಮುಖರ ಪ್ರಶಿಕ್ಷಣ ವರ್ಗದ ಸಭೆಯಲ್ಲಿ ಮಾತನಾಡಿದ ಕಟೀಲ್, ‘ಸ್ವಾತಂತ್ರ್ಯದ ನಂತರ ರಾಷ್ಟ್ರಮಾತೆ ಪೂಜೆ ಮಾಡಬೇಕಾಗಿದ್ದ ಕಾಂಗ್ರೆಸ್ ಇಂದಿರಾಗಾಂಧಿ, ಸೋನಿಯಾ ಗಾಂಧಿ ಎಂದು ವ್ಯಕ್ತಿ ಪೂಜೆ ಮಾಡಿತು. ಬಿಜೆಪಿ ಆಡಳಿತದಲ್ಲಿ ದೇಶ ರಾಮರಾಜ್ಯವಾಗುತ್ತಿದೆ. ಮಹಾತ್ಮಗಾಂಧಿ ಅವರು ಜಾತ್ಯತೀತ ಎನ್ನುವ ಪದವನ್ನೇ ಬಳಸಲಿಲ್ಲ. ಅವರು ಸಹ ರಾಮರಾಜ್ಯದ ಮಾತುಗಳನ್ನು ಆಡಿದ್ದರು. ರಾಮನ ಆದರ್ಶಗಳನ್ನು ಪ್ರತಿಯೊಬ್ಬರಲ್ಲೂ ಬಿಜೆಪಿ ಮೂಡಿಸಲಿದೆ ಎಂದು ಹೇಳಿದರು.