<p><strong>ಶಿರಾ</strong>: ತಾಲ್ಲೂಕಿನ ನೇರಳಗುಡ್ಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಒಂದೂವರೆ ತಿಂಗಳಿಂದ ವೈದ್ಯರು ಇಲ್ಲದ ಕಾರಣ ರೋಗಿಗಳು ಸಂಕಷ್ಟ ಪಡುವಂತಾಗಿದೆ.</p>.<p>ನೇರಳಗುಡ್ಡ ಸುತ್ತಮುತ್ತ ಅತಿ ಹೆಚ್ಚು ಸಣ್ಣಪುಟ್ಟ ಗ್ರಾಮಗಳಿವೆ. ಇಲ್ಲಿ ವೈದ್ಯರು ಇಲ್ಲದ ಕಾರಣ ಈ ಭಾಗದ ಜನತೆ ಚಿಕಿತ್ಸೆಗಾಗಿ ಬುಕ್ಕಾಪಟ್ಟಣ, ತಾವರೆಕೆರೆ, ಶಿರಾಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.</p>.<p>ನೇರಳಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರು ಇಲ್ಲಿಂದ ಒಂದು ವರ್ಷದ ಗ್ರಾಮೀಣ ಸೇವೆ ಮುಗಿಸಿ ಬೇರೆಡೆಗೆ ಹೋಗಿರುವುದರಿಂದ ಇಲ್ಲಿ ಒಂದೂವರೆ ತಿಂಗಳಿಂದ ವೈದ್ಯರು ಇಲ್ಲದಂತಾಗಿದೆ. ಅವರ ಬದಲು ಬೇರೆ ವೈದ್ಯರನ್ನು ವರ್ಗಾವಣೆ ಮಾಡದ ಕಾರಣ ಹೆಚ್ಚು ತೊಂದರೆಯಾಗುತ್ತಿದೆ.</p>.<p>ಬುಕ್ಕಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಾಲತಿ ಪ್ರಭಾರ ವೈದ್ಯರಾಗಿ ನೇಮಕಗೊಂಡಿದ್ದು, ಅವರು ಸಮೀಕ್ಷೆ, ವರದಿ, ಸಭೆ, ಫೊಕ್ಸೊ ಕಾಯ್ದೆ ವಿಚಾರಣೆ, ಪೊಲೀಸ್ ವಿಚಾರಣೆಯಂತಹ ಒತ್ತಡದಿಂದಾಗಿ ಬುಕ್ಕಾಪಟ್ಟಣ ಹಾಗೂ ನೇರಳಗುಡ್ಡ ಎರಡು ಕಡೆ ಕೆಲಸ ಮಾಡಲು ಕಷ್ಟವಾಗುತ್ತಿದೆ.</p>.<p>ಬೇಸಿಗೆ ಪ್ರಾರಂಭವಾಗುತ್ತಿರುವುದರಿಂದ ಜನರು ಹೆಚ್ಚು ಕಾಯಿಲೆಗಳಿಗೆ ಸಿಲುಕುತ್ತಿದ್ದು ದೂರದ ಆಸ್ಪತ್ರೆಗಳಿಗೆ ಹೋಗುವುದು ಕಷ್ಟವಾಗುತ್ತಿದೆ.</p>.<p>ಆದ್ದರಿಂದ ನೇರಳಗುಡ್ಡ ಕಿರಿಯ ಪ್ರಾಥಮಿಕ ಆರೋಗ್ಯಕ್ಕೆ ಆದಷ್ಟು ಶೀಘ್ರವಾಗಿ ವೈದ್ಯರನ್ನು ನೇಮಕ ಮಾಡಿ ಗ್ರಾಮೀಣ ಪ್ರದೇಶದ ಬಡವರ ಆರೋಗ್ಯದ ಬಗ್ಗೆ ಸರ್ಕಾರ ಕಾಳಜಿ ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಾ</strong>: ತಾಲ್ಲೂಕಿನ ನೇರಳಗುಡ್ಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಒಂದೂವರೆ ತಿಂಗಳಿಂದ ವೈದ್ಯರು ಇಲ್ಲದ ಕಾರಣ ರೋಗಿಗಳು ಸಂಕಷ್ಟ ಪಡುವಂತಾಗಿದೆ.</p>.<p>ನೇರಳಗುಡ್ಡ ಸುತ್ತಮುತ್ತ ಅತಿ ಹೆಚ್ಚು ಸಣ್ಣಪುಟ್ಟ ಗ್ರಾಮಗಳಿವೆ. ಇಲ್ಲಿ ವೈದ್ಯರು ಇಲ್ಲದ ಕಾರಣ ಈ ಭಾಗದ ಜನತೆ ಚಿಕಿತ್ಸೆಗಾಗಿ ಬುಕ್ಕಾಪಟ್ಟಣ, ತಾವರೆಕೆರೆ, ಶಿರಾಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.</p>.<p>ನೇರಳಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರು ಇಲ್ಲಿಂದ ಒಂದು ವರ್ಷದ ಗ್ರಾಮೀಣ ಸೇವೆ ಮುಗಿಸಿ ಬೇರೆಡೆಗೆ ಹೋಗಿರುವುದರಿಂದ ಇಲ್ಲಿ ಒಂದೂವರೆ ತಿಂಗಳಿಂದ ವೈದ್ಯರು ಇಲ್ಲದಂತಾಗಿದೆ. ಅವರ ಬದಲು ಬೇರೆ ವೈದ್ಯರನ್ನು ವರ್ಗಾವಣೆ ಮಾಡದ ಕಾರಣ ಹೆಚ್ಚು ತೊಂದರೆಯಾಗುತ್ತಿದೆ.</p>.<p>ಬುಕ್ಕಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಾಲತಿ ಪ್ರಭಾರ ವೈದ್ಯರಾಗಿ ನೇಮಕಗೊಂಡಿದ್ದು, ಅವರು ಸಮೀಕ್ಷೆ, ವರದಿ, ಸಭೆ, ಫೊಕ್ಸೊ ಕಾಯ್ದೆ ವಿಚಾರಣೆ, ಪೊಲೀಸ್ ವಿಚಾರಣೆಯಂತಹ ಒತ್ತಡದಿಂದಾಗಿ ಬುಕ್ಕಾಪಟ್ಟಣ ಹಾಗೂ ನೇರಳಗುಡ್ಡ ಎರಡು ಕಡೆ ಕೆಲಸ ಮಾಡಲು ಕಷ್ಟವಾಗುತ್ತಿದೆ.</p>.<p>ಬೇಸಿಗೆ ಪ್ರಾರಂಭವಾಗುತ್ತಿರುವುದರಿಂದ ಜನರು ಹೆಚ್ಚು ಕಾಯಿಲೆಗಳಿಗೆ ಸಿಲುಕುತ್ತಿದ್ದು ದೂರದ ಆಸ್ಪತ್ರೆಗಳಿಗೆ ಹೋಗುವುದು ಕಷ್ಟವಾಗುತ್ತಿದೆ.</p>.<p>ಆದ್ದರಿಂದ ನೇರಳಗುಡ್ಡ ಕಿರಿಯ ಪ್ರಾಥಮಿಕ ಆರೋಗ್ಯಕ್ಕೆ ಆದಷ್ಟು ಶೀಘ್ರವಾಗಿ ವೈದ್ಯರನ್ನು ನೇಮಕ ಮಾಡಿ ಗ್ರಾಮೀಣ ಪ್ರದೇಶದ ಬಡವರ ಆರೋಗ್ಯದ ಬಗ್ಗೆ ಸರ್ಕಾರ ಕಾಳಜಿ ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>