<p><strong>ತುಮಕೂರು</strong>: ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚುವರಿಯಾಗಿ ಪಡೆದುಕೊಂಡಿದ್ದ ₹79 ಹಣವನ್ನು ಗ್ರಾಹಕರಿಗೆ ಹಿಂದಿರುಗಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.</p>.<p>ಬೆಂಗಳೂರು ಫ್ಲಿಪ್ಕಾರ್ಟ್ ಸಂಸ್ಥೆ ವ್ಯವಸ್ಥಾಪಕ, ಫ್ಲಿಪ್ಕಾರ್ಟ್ ಇಂಟರ್ನೆಟ್ ವಿಭಾಗದ ವ್ಯವಸ್ಥಾಪಕ ಹಾಗೂ ಕೊಯಮತ್ತೂರಿನ ಯುಆರ್– ಕಿಡ್ಸ್ ಸ್ಟೋರ್ ಸಂಸ್ಥೆ ಜಂಟಿಯಾಗಿ ಹೆಚ್ಚುವರಿಯಾಗಿ ಪಡೆದುಕೊಂಡಿರುವ ಹಣವನ್ನು ವಾಪಸ್ ಮಾಡಬೇಕು. ಜತೆಗೆ ₹6 ಸಾವಿರ ಪರಿಹಾರ ಹಾಗೂ ₹6 ಸಾವಿರ ನ್ಯಾಯಾಲಯದ ವೆಚ್ಚವನ್ನು (ಒಟ್ಟು ₹12 ಸಾವಿರ) ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.</p>.<p>ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚುವರಿಯಾಗಿ ₹79 ಹಣವನ್ನು ಪಡೆದುಕೊಳ್ಳಲಾಗಿದೆ ಎಂದು ಆರೋಪಿಸಿ ಮಂಜುನಾಥ್ ಎಂಬುವರು ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಗರಿಷ್ಠ ಬೆಲೆಗಿಂತ ಹೆಚ್ಚು ಹಣ ಪಡೆದುಕೊಂಡು ನಷ್ಟ ಉಂಟು ಮಾಡಲಾಗಿದೆ. ಇದರಿಂದ ಮಾನಸಿಕ ಹಿಂಸೆ ಅನುಭವಿಸಿದ್ದೇನೆ. ಹಾಗಾಗಿ ₹50 ಸಾವಿರ ಪರಿಹಾರವನ್ನು ಶೇ 24ರಷ್ಟು ಬಡ್ಡಿ ಸಹಿತ ಕೊಡಿಸಬೇಕು ಎಂದು ಕೇಳಿಕೊಂಡಿದ್ದರು.</p>.<p>ಪ್ರಕರಣದ ವಿವರ: ತುಮಕೂರು ತಾಲ್ಲೂಕಿನ ಮಲ್ಲಸಂದ್ರದ ಮಂಜುನಾಥ್ ಎಂಬುವರು 2024 ಮೇ 17ರಂದು ಫ್ಲಿಪ್ ಕಾರ್ಟ್ ಮೂಲಕ ಕಸೂತಿ ಮಾಡುವ ಥ್ರೆಡ್ (ಎಂಬ್ರಾಯಿಡರಿ ಕ್ರಾಸ್ ಸ್ಟಿಚ್ ಥ್ರೆಡ್) ಖರೀದಿಸಿದ್ದರು. ಕೊಯಮತ್ತೂರಿನ ಯುಆರ್– ಕಿಡ್ಸ್ ಸ್ಟೋರ್ ಸಂಸ್ಥೆ ಇದನ್ನು ಪೂರೈಸಿತ್ತು. ಥ್ರೆಡ್ ಗರಿಷ್ಠ ಮಾರಾಟ ಬೆಲೆ ₹520 (ಎಲ್ಲ ತೆರಿಗೆ ಸೇರಿ). ಆದರೆ ₹599 ಪಡೆದುಕೊಳ್ಳಲಾಗಿತ್ತು.</p>.<p>ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಜಿ.ಟಿ.ವಿಜಯಲಕ್ಷ್ಮಿ, ಸದಸ್ಯೆ ನಿವೇದಿತಾ ರವೀಶ್ ನೇತೃತ್ವದ ಪೀಠ ಹೆಚ್ಚುವರಿಯಾಗಿ ಪಡೆದುಕೊಂಡಿದ್ದ ₹79 ಹಣವನ್ನು ₹12 ಸಾವಿರ ಪರಿಹಾರದೊಂದಿಗೆ ನೀಡುವಂತೆ ಆದೇಶಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚುವರಿಯಾಗಿ ಪಡೆದುಕೊಂಡಿದ್ದ ₹79 ಹಣವನ್ನು ಗ್ರಾಹಕರಿಗೆ ಹಿಂದಿರುಗಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.</p>.<p>ಬೆಂಗಳೂರು ಫ್ಲಿಪ್ಕಾರ್ಟ್ ಸಂಸ್ಥೆ ವ್ಯವಸ್ಥಾಪಕ, ಫ್ಲಿಪ್ಕಾರ್ಟ್ ಇಂಟರ್ನೆಟ್ ವಿಭಾಗದ ವ್ಯವಸ್ಥಾಪಕ ಹಾಗೂ ಕೊಯಮತ್ತೂರಿನ ಯುಆರ್– ಕಿಡ್ಸ್ ಸ್ಟೋರ್ ಸಂಸ್ಥೆ ಜಂಟಿಯಾಗಿ ಹೆಚ್ಚುವರಿಯಾಗಿ ಪಡೆದುಕೊಂಡಿರುವ ಹಣವನ್ನು ವಾಪಸ್ ಮಾಡಬೇಕು. ಜತೆಗೆ ₹6 ಸಾವಿರ ಪರಿಹಾರ ಹಾಗೂ ₹6 ಸಾವಿರ ನ್ಯಾಯಾಲಯದ ವೆಚ್ಚವನ್ನು (ಒಟ್ಟು ₹12 ಸಾವಿರ) ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.</p>.<p>ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚುವರಿಯಾಗಿ ₹79 ಹಣವನ್ನು ಪಡೆದುಕೊಳ್ಳಲಾಗಿದೆ ಎಂದು ಆರೋಪಿಸಿ ಮಂಜುನಾಥ್ ಎಂಬುವರು ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಗರಿಷ್ಠ ಬೆಲೆಗಿಂತ ಹೆಚ್ಚು ಹಣ ಪಡೆದುಕೊಂಡು ನಷ್ಟ ಉಂಟು ಮಾಡಲಾಗಿದೆ. ಇದರಿಂದ ಮಾನಸಿಕ ಹಿಂಸೆ ಅನುಭವಿಸಿದ್ದೇನೆ. ಹಾಗಾಗಿ ₹50 ಸಾವಿರ ಪರಿಹಾರವನ್ನು ಶೇ 24ರಷ್ಟು ಬಡ್ಡಿ ಸಹಿತ ಕೊಡಿಸಬೇಕು ಎಂದು ಕೇಳಿಕೊಂಡಿದ್ದರು.</p>.<p>ಪ್ರಕರಣದ ವಿವರ: ತುಮಕೂರು ತಾಲ್ಲೂಕಿನ ಮಲ್ಲಸಂದ್ರದ ಮಂಜುನಾಥ್ ಎಂಬುವರು 2024 ಮೇ 17ರಂದು ಫ್ಲಿಪ್ ಕಾರ್ಟ್ ಮೂಲಕ ಕಸೂತಿ ಮಾಡುವ ಥ್ರೆಡ್ (ಎಂಬ್ರಾಯಿಡರಿ ಕ್ರಾಸ್ ಸ್ಟಿಚ್ ಥ್ರೆಡ್) ಖರೀದಿಸಿದ್ದರು. ಕೊಯಮತ್ತೂರಿನ ಯುಆರ್– ಕಿಡ್ಸ್ ಸ್ಟೋರ್ ಸಂಸ್ಥೆ ಇದನ್ನು ಪೂರೈಸಿತ್ತು. ಥ್ರೆಡ್ ಗರಿಷ್ಠ ಮಾರಾಟ ಬೆಲೆ ₹520 (ಎಲ್ಲ ತೆರಿಗೆ ಸೇರಿ). ಆದರೆ ₹599 ಪಡೆದುಕೊಳ್ಳಲಾಗಿತ್ತು.</p>.<p>ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಜಿ.ಟಿ.ವಿಜಯಲಕ್ಷ್ಮಿ, ಸದಸ್ಯೆ ನಿವೇದಿತಾ ರವೀಶ್ ನೇತೃತ್ವದ ಪೀಠ ಹೆಚ್ಚುವರಿಯಾಗಿ ಪಡೆದುಕೊಂಡಿದ್ದ ₹79 ಹಣವನ್ನು ₹12 ಸಾವಿರ ಪರಿಹಾರದೊಂದಿಗೆ ನೀಡುವಂತೆ ಆದೇಶಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>