ವೈ.ಎನ್. ಹೊಸಕೋಟೆ: ಪ್ರತಿಯೊಬ್ಬ ಕನ್ನಡಿಗ ಸಂಕಲ್ಪದೊಂದಿಗೆ ಶ್ರಮಿಸುವುದರಿಂದ ಗಡಿ ಭಾಗದಲ್ಲಿ ಭಾಷಾ ಉಳಿವು ಸಾಧ್ಯ ಎಂದು ಕನ್ನಡ ಶಿಕ್ಷಕ ಗಂಗಾಧರ ತಿಳಿಸಿದರು.
ಹೋಬಳಿಯ ಮರಿದಾಸನಹಳ್ಳಿಯಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ನ ಹೋಬಳಿ ಘಟಕದಿಂದ ಹಮ್ಮಿಕೊಂಡಿದ್ದ ಶಾಲೆಗೊಂದು ಕನ್ನಡ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಭಾರ ಪ್ರಾಂಶುಪಾಲ ಆಂಜನೇಯ ಮಾತನಾಡಿದರು.ಮುಖ್ಯಶಿಕ್ಷಕ ರಾಜಗೋಪಾಲ ಅಧ್ಯಕ್ಷತೆವಹಿಸಿ ಮಾತನಾಡಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಹನುಮಂತರಾಯಪ್ಪ, ಕಸಾಪ ಕಾರ್ಯದರ್ಶಿ ಚಂದ್ರಶೇಖರ ಮುದ್ರಾಡಿ, ನಿರ್ದೇಶಕ ಚನ್ನಮಲ್ಲಿಕಾರ್ಜುನ, ಉಪನ್ಯಾಸಕರಾದ ರಮೇಶ್, ನಾಗಾನಂದ, ಅನಿಲ್ ಹಾಜರಿದ್ದರು.