ಕಾಚಿಹಳ್ಳಿಯ ನೂರು ಮೀಟರ್ ಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗಳು ಕಾವೇರಿ ನೀರಾವರಿ ನಿಗಮ ಅನುದಾನದಲ್ಲಿ ಪ್ರಾರಂಭವಾಗಿದ್ದು. ಕೆಲ ಮುಖಂಡರ ಆರೋಪದ ಮೇರೆಗೆ ಇಪ್ಪತ್ತು ದಿನಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ಮಳೆಗೆ ರಸ್ತೆ ಕೆಸರುಗದ್ದೆಯಾಗಿದ್ದು ಸಂಚರಿಸಲು ಯೋಗ್ಯವಿಲ್ಲದಂತಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಮಹಾಲಕ್ಷ್ಮಮ್ಮ, ಗ್ರಾಮಸ್ಥರಾದ ಶಿವಲಿಂಗಯ್ಯ, ಚನ್ನೆಗೌಡ ಆರೋಪಿಸಿದ್ದಾರೆ.