<p><strong>ತುಮಕೂರು</strong>: ಪೋಲಿಯೊ ರೋಗ ನಿವಾರಣೆ ಮಾಡುವಲ್ಲಿ ರೋಟರಿ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದ್ದು, ಅದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಮಹದೇವ ಪ್ರಸಾದ್ ಹೇಳಿದರು.</p>.<p>ನಗರದಲ್ಲಿ ಈಚೆಗೆ ರೋಟರಿ ತುಮಕೂರು ಸೇವಾ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಗತ್ತಿನಲ್ಲಿ ಶೇ 99ರಷ್ಟು ಪೋಲಿಯೊ ರೋಗ ವಾಸಿಯಾಗಿದ್ದು, ಪಾಕಿಸ್ತಾನ, ಅಫ್ಗಾನಿಸ್ತಾನದಲ್ಲಿ ಸ್ವಲ್ಪ ಉಳಿದುಕೊಂಡಿದೆ ಎಂದರು.</p>.<p>ರೋಟರಿ ವತಿಯಿಂದ ಉಚಿತವಾಗಿ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಲಾಗುತ್ತಿದ್ದು, ವಿಶೇಷವಾಗಿ ಮಕ್ಕಳಿಗೆ ಆದ್ಯತೆ ನೀಡಲಾಗುತ್ತಿದೆ. ಈವರೆಗೂ 12 ಸಾವಿರ ಹೃದಯ ಶಸ್ತ್ರ ಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಿಸಲಾಗಿದೆ ಎಂದು ಹೇಳಿದರು.</p>.<p>ರೋಟರಿ ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ ಅವರಿಗೆ ‘ಇಂಡಿಯಾ ಇನ್ಸ್ಪೈರ್ ಅವಾರ್ಡ್’ ನೀಡಿ ಗೌರವಿಸಲಾಯಿತು.</p>.<p>ರೋಟರಿ ಪದಾಧಿಕಾರಿಗಳಾದ ನಾಗಮಣಿ ಪ್ರಭಾಕರ್, ಜಿ.ಆರ್.ನಾಗರಾಜ್, ಎನ್.ಸಿ.ಉಮೇಶ್, ಪ್ರಮೀಳ, ಬಿಳಿಗೆರೆ ಶಿವಕುಮಾರ್, ಜಿ.ಎನ್.ಜನಾರ್ಧನ್, ಚಂದ್ರಿಕಾ ಶಿವಕುಮಾರ್, ಶಿವಶಂಕರ ಕಾಡದೇವರಮಠ, ಲಕ್ಕಪ್ಪ, ಶಿವಣ್ಣ ಮಲ್ಲಸಂದ್ರ, ಸದಾಶಿವಯ್ಯ, ನಾಗೇಶ್ ಕುಮಾರ್, ಎಂ.ಎಸ್.ಪ್ರಕಾಶ್, ಜಿ.ಎನ್.ಮಹೇಶ್, ಸಿ.ನಾಗರಾಜ್, ಕೀರ್ತಿಶೇಖರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಪೋಲಿಯೊ ರೋಗ ನಿವಾರಣೆ ಮಾಡುವಲ್ಲಿ ರೋಟರಿ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದ್ದು, ಅದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಮಹದೇವ ಪ್ರಸಾದ್ ಹೇಳಿದರು.</p>.<p>ನಗರದಲ್ಲಿ ಈಚೆಗೆ ರೋಟರಿ ತುಮಕೂರು ಸೇವಾ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಗತ್ತಿನಲ್ಲಿ ಶೇ 99ರಷ್ಟು ಪೋಲಿಯೊ ರೋಗ ವಾಸಿಯಾಗಿದ್ದು, ಪಾಕಿಸ್ತಾನ, ಅಫ್ಗಾನಿಸ್ತಾನದಲ್ಲಿ ಸ್ವಲ್ಪ ಉಳಿದುಕೊಂಡಿದೆ ಎಂದರು.</p>.<p>ರೋಟರಿ ವತಿಯಿಂದ ಉಚಿತವಾಗಿ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಲಾಗುತ್ತಿದ್ದು, ವಿಶೇಷವಾಗಿ ಮಕ್ಕಳಿಗೆ ಆದ್ಯತೆ ನೀಡಲಾಗುತ್ತಿದೆ. ಈವರೆಗೂ 12 ಸಾವಿರ ಹೃದಯ ಶಸ್ತ್ರ ಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಿಸಲಾಗಿದೆ ಎಂದು ಹೇಳಿದರು.</p>.<p>ರೋಟರಿ ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ ಅವರಿಗೆ ‘ಇಂಡಿಯಾ ಇನ್ಸ್ಪೈರ್ ಅವಾರ್ಡ್’ ನೀಡಿ ಗೌರವಿಸಲಾಯಿತು.</p>.<p>ರೋಟರಿ ಪದಾಧಿಕಾರಿಗಳಾದ ನಾಗಮಣಿ ಪ್ರಭಾಕರ್, ಜಿ.ಆರ್.ನಾಗರಾಜ್, ಎನ್.ಸಿ.ಉಮೇಶ್, ಪ್ರಮೀಳ, ಬಿಳಿಗೆರೆ ಶಿವಕುಮಾರ್, ಜಿ.ಎನ್.ಜನಾರ್ಧನ್, ಚಂದ್ರಿಕಾ ಶಿವಕುಮಾರ್, ಶಿವಶಂಕರ ಕಾಡದೇವರಮಠ, ಲಕ್ಕಪ್ಪ, ಶಿವಣ್ಣ ಮಲ್ಲಸಂದ್ರ, ಸದಾಶಿವಯ್ಯ, ನಾಗೇಶ್ ಕುಮಾರ್, ಎಂ.ಎಸ್.ಪ್ರಕಾಶ್, ಜಿ.ಎನ್.ಮಹೇಶ್, ಸಿ.ನಾಗರಾಜ್, ಕೀರ್ತಿಶೇಖರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>