ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕುಮಾರ ಸ್ವಾಮೀಜಿ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತಸಾಗರ

Last Updated 22 ಜನವರಿ 2019, 5:57 IST
ಅಕ್ಷರ ಗಾತ್ರ

ತುಮಕೂರು:ಶಿವಕುಮಾರ ಸ್ವಾಮೀಜಿ ಅವರ ದರ್ಶನಕ್ಕೆ ಸಿದ್ಧಗಂಗಾ ಮಠದತ್ತ ಮಂಗಳವಾರ ಭಕ್ತ ಸಾಗರವೇ ಹರಿದು ಬರುತ್ತಿದೆ.

ಹರಿದು ಬರುತ್ತಿರುವ ಭಕ್ತರು ಯಾವುದೇ ಅಡ್ಡಿ ಇಲ್ಲದೆ ದರ್ಶನ ಪಡೆಯುವಂತಾಗಲು ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸರು ವ್ಯವಸ್ಥೆ ಮಾಡಿದ್ದಾರೆ. ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಉದ್ದ ಸರದಿಯಲ್ಲಿ ಜನ ನಿಂತಿದ್ದು, ಗಂಟೆ ಗಂಟೆಗೂ ಜನರ ಸಂಖ್ಯೆ ಹೆಚ್ಚುತ್ತಲೇ ಇದೆ.

3ರ ವರೆಗೆ ಮಾತ್ರ ದರ್ಶನ: ಕಿರಿಯ ಶ್ರೀ
ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ಶಿವಕುಮಾರ ಸ್ವಾಮೀಜಿ ದರ್ಶನಕ್ಕೆ ಅವಕಾಶ. ನಂತರ ಸಮಯ ವಿಸ್ತರಣೆ ಇಲ್ಲ. 3.30ರ ಬಳಿಕ ಕ್ರಿಯಾಸಮಾಧಿ ಪ್ರಕ್ರಿಯೆ ನಡೆಯಲಿದೆ ಎಂದು ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಪ್ರಸಾದ ವ್ಯವಸ್ಥೆ
ಬರುವ ಭಕ್ತರಿಗೆ 10ಕ್ಕೂ ಹೆಚ್ಚು ಕಡೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಹಲವು ಹಳ್ಳಿಗಳ ಜನರು ಸ್ವಯಂ ಪ್ರೇರಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತುಮಕೂರು ನಗರದಲ್ಲಿ ಅಘೋಷಿತ ಬಂದ್‌ ಏರರ್ಪಟ್ಟಿದ್ದು, ಬಹುತೇಕ ಅಂಗಡಿ ಮುಂಗಟ್ಟೆಗಳು ಮುಚ್ಚಿವೆ. ಹಲವು ಹೋಟೇಲ್‌ಗಳ ಮಾಲೀಕರು ಭಕ್ತರಿಗೆ ಉಚಿ ಉಪಹಾರ, ಊಟ ನೀಡುತ್ತಿದ್ದಾರೆ.

* ಇವನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT