<p><strong>ತುಮಕೂರು: </strong>ಆಯೋಗದಲ್ಲಿ ದಾಖಲಾಗುವ ದೂರುಗಳನ್ನು ಮೂರು ತಿಂಗಳ ಒಳಗೆ ಇತ್ಯರ್ಥಪಡಿಸಿ ನೋಂದವರಿಗೆ ನ್ಯಾಯ ದೊರಕಿಸಲು ಕ್ರಮವಹಿಸಿ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕ್ಕುಮಾರ್ ದತ್ತ ಹೇಳಿದರು.</p>.<p>ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ‘ಆಯೋಗದಲ್ಲಿನ ಬಾಕಿ ಪ್ರಕರಣಗಳ ಪರಿಶೀಲನಾ ಸಭೆ’ಯಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.</p>.<p>ಕೆಲವೊಂದು ಪ್ರಕರಣಗಳಲ್ಲಿ ದೂರು ದಾಖಲಾಗಿ ನಾಲ್ಕೈದು ವರ್ಷ ಕಳೆದರೂ ಇತ್ಯರ್ಥ ಆಗುತ್ತಿಲ್ಲ. ಆಯೋಗ ನೀಡುವ ಸಮನ್ಸ್ಗಳಿಗೂ ಅಧಿಕಾರಿಗಳು ಪ್ರತಿಕ್ರಿಯೆ ನೀಡುವುದಿಲ್ಲ. ಇದು ಉತ್ತಮ ನಡೆ ಅಲ್ಲ. ಈ ಪದ್ಧತಿ ಹೀಗೆಯೇ ಮುಂದುವರೆದರೆ ವಾರಂಟ್ ನೀಡಬೇಕಾಗುತ್ತದೆ. ನೀವು ಕೇಂದ್ರ ಕಚೇರಿಗೆ ಬಂದು ಉತ್ತರಿಸಬೇಕಾಗುತ್ತದೆ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.</p>.<p>ಬಹುತೇಕ ಇಲಾಖೆಗಳ ಮುಖ್ಯಸ್ಥರು ಪ್ರಕರಣದ ವರದಿಯನ್ನು ಗಮನಿಸುತ್ತಿಲ್ಲ. ವರದಿಯನ್ನು ಕೆಳಹಂತದ ಸಿಬ್ಬಂದಿಯಿಂದ ತಯಾರಿಸಿ, ಆಯೋಗಕ್ಕೆ ರವಾನಿಸುತ್ತಿದ್ದಾರೆ. ಅದರಲ್ಲೂ ಕೆಲವೊಂದು ಹಿಂಬರಗಳು ಕೇವಲ ಎರಡೇ ಸಾಲಿನಿಂದ ಕೂಡಿರುತ್ತವೆ. ಮಾಹಿತಿ ಅಪೂರ್ಣವಾಗಿ ಇರುತ್ತದೆ ಎಂದು ಬೇಸರಿಸಿದರು.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಬರುವ ವರದಿಗಳನ್ನು ಎಸ್ಪಿ ಗಮನಿಸುವುದಿಲ್ಲ ಎನಿಸುತ್ತದೆ. ವರದಿಯಲ್ಲಿ ಎಸ್ಪಿ ಪರವಾಗಿ ಕಚೇರಿಯ ಆಡಳಿತ ಅಧಿಕಾರಿಯ ಸಹಿ ಇರುತ್ತದೆ. ಪೊಲೀಸ್ ಅಧಿಕಾರಿಗಳ ಮೇಲಿನ ಆರೋಪಗಳಲ್ಲಿಯೂ, ಆರೋಪಿಯೇ ವರದಿಗಳನ್ನು ತಯಾರಿಸಿದ ಉದಾಹರಣೆಗಳಿವೆ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು. ಈ ವೇಳೆ ಎಸ್ಪಿ ಕೆ.ವಂಶಿಕೃಷ್ಣ ಅವರು ಸಭೆಯಲ್ಲಿ ಇರಲಿಲ್ಲ.</p>.<p>ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ 3 ವಾರಗಳ ಒಳಗೆ ವರದಿ ಸಲ್ಲಿಸಿ, 3 ತಿಂಗಳ ಒಳಗೆ ದೂರುಗಳನ್ನು ಇತ್ಯರ್ಥ ಪಡಿಸಿ. ಇದರಿಂದ ಆಡಳಿತ ಸುಗಮವಾಗುತ್ತದೆ. ಜನರಿಗೂ ಅನುಕೂಲ ಆಗುತ್ತದೆ ಎಂದು ಕಿವಿಮಾತು ಹೇಳಿದರು.</p>.<p><strong>20 ವರ್ಷವಾದರೂ ಇತ್ಯರ್ಥವಾಗದ ದೂರು</strong></p>.<p>ನಿವೃತ್ತ ಶಿರಸ್ತೇದಾರ ಡಿ.ತಿಮ್ಮಯ್ಯ ಎಂಬುವವರ ಪಿಂಚಣಿ ಮಂಜೂರಾಗಿಲ್ಲ ಎಂಬ ದೂರು 20 ವರ್ಷಗಳಿಂದ ಇತ್ಯರ್ಥವಾಗಿಲ್ಲ. ಯಾಕೆ ತಡವಾಗಿದೆ ಎಂದು ರೂಪಕ್ಕುಮಾರ್ ದತ್ತ ಪ್ರಶ್ನಿಸಿದರು.</p>.<p>ಇದು ತುಂಬಾ ಹಳೆಯ ಪ್ರಕರಣ ಆಗಿದ್ದರಿಂದ, ಅದರ ಕಡತ ಸಿಕ್ಕಿಲ್ಲದಿರಬಹುದು. ಕಚೇರಿಯನ್ನು ನವೀಕರಿಸುತ್ತಿದ್ದೇವೆ. ಆ ಕಡತವನ್ನು ಹುಡುಕಿಸಿ, ಸಮಸ್ಯೆ ಪರಿಹರಿಸುತ್ತೇನೆ ಎಂದು ಪಕ್ಕದಲ್ಲಿದ್ದ ಜಿಲ್ಲಾಧಿಕಾರಿ ಕೆ.ರಾಕೇಶ್ಕುಮಾರ್ ಪ್ರತಿಕ್ರಿಯಿಸಿದರು.</p>.<p><strong>‘ಮತ್ತೊಮ್ಮೆ ವರದಿ ಕಳುಹಿಸಿ’</strong></p>.<p>ರೂಪಕ್ಕುಮಾರ್ ದತ್ತ ಅವರು ತಮ್ಮೊಂದಿಗೆ ಕಡತಗಳ ಬಂಡಲ್ ಅನ್ನೆ ಸಭೆಗೆ ತಂದಿದ್ದರು. ತಮ್ಮ ವಿಚಾರಣಪೀಠದಡಿಯ ಒಂದೊಂದೆ ದೂರುಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.</p>.<p>ಚಿಕ್ಕನಾಯಕನಹಳ್ಳಿಯ ಕುಡಿಯುವ ನೀರಿನ ಸಮಸ್ಯೆ, ಶೆಟ್ಟಿಹಳ್ಳಿಯ ಅಂಗನವಾಡಿ ಕಟ್ಟಡದ ಶಿಥಿಲಾವಸ್ಥೆ, ಮಾಯಸಂದ್ರ ಹೋಬಳಿಯಲ್ಲಿ ಅನಧಿಕೃತವಾಗಿ ಮರಗಳನ್ನು ಕಡಿದ ಪ್ರಕರಣ, ಯಲ್ಲೇನಹಳ್ಳಿಯ ಗೋಮಾಳ ಒತ್ತುವರಿ, ಕುಣಿಗಲ್ನಲ್ಲಿ ನಾಯಿ ದಾಳಿಗೆ ಬಾಲಕಿ ಬಲಿಯಾದ ಪ್ರಕರಣಗಳ ಕುರಿತು ಮಾಹಿತಿ ಪಡೆದುಕೊಂಡರು.</p>.<p>ಬಹುತೇಕ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗೆ ವರದಿ ಸಲ್ಲಿಸಲಾಗಿದೆ ಎಂಬ ಉತ್ತರಗಳು ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ಬಂದವು. ಆಗ, ಜಿಲ್ಲಾಧಿಕಾರಿ ಕೆ.ರಾಕೇಶ್ಕುಮಾರ್, ‘ಪ್ರಕರಣದ ಸಂಖ್ಯೆಯನ್ನು ಬರೆದುಕೊಂಡು, ವರದಿಯ ಪ್ರತಿಯನ್ನು ಮತ್ತೊಮ್ಮೆ ನಮಗೂ, ಆಯೋಗಕ್ಕೂ ಕಳುಹಿಸಿ’ ಎಂದು ಸೂಚಿಸಿದರು.</p>.<p><strong>ಸಮಸ್ಯೆಗೆ ಸ್ಪಂದಿಸಿ</strong></p>.<p>ಆಯೋಗ ಆಡಳಿತ ಮಾಡಲ್ಲ. ಆಡಳಿತದಲ್ಲಿ ಹೆಚ್ಚು–ಕಡಿಮೆ ಆದಾಗ ಜನ ಆಯೋಗಕ್ಕೆ ಬರುತ್ತಾರೆ. ಅವರ ಕಷ್ಟಗಳಿಗೆ ತಕ್ಷಣ ಸ್ಪಂದಿಸಿದರೆ, ಆಡಳಿತ ಸುಗಮ ಆಗುತ್ತದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕ್ಕುಮಾರ್ ದತ್ತ ಹೇಳಿದರು.</p>.<p>ಅಂಕಿ–ಅಂಶ</p>.<p>182 –ಆಯೋಗದಿಂದ ಅಂತಿಮ ಆದೇಶಕ್ಕಾಗಿ ಜಿಲ್ಲಾಡಳಿತ ಸಲ್ಲಿಸಬೇಕಾದ ಅನುಸರಣಾ ವರದಿಗಳು</p>.<p>131 –ಅನುಸರಣಾ ವರದಿ ಸಲ್ಲಿಸಿರುವ ಪ್ರಕರಣಗಳ ಸಂಖ್ಯೆ</p>.<p>51 –ಅನುಸರಣಾ ವರದಿ ಸಿದ್ಧವಾಗಬೇಕಾದ ಪ್ರಕರಣಗಳು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಆಯೋಗದಲ್ಲಿ ದಾಖಲಾಗುವ ದೂರುಗಳನ್ನು ಮೂರು ತಿಂಗಳ ಒಳಗೆ ಇತ್ಯರ್ಥಪಡಿಸಿ ನೋಂದವರಿಗೆ ನ್ಯಾಯ ದೊರಕಿಸಲು ಕ್ರಮವಹಿಸಿ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕ್ಕುಮಾರ್ ದತ್ತ ಹೇಳಿದರು.</p>.<p>ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ‘ಆಯೋಗದಲ್ಲಿನ ಬಾಕಿ ಪ್ರಕರಣಗಳ ಪರಿಶೀಲನಾ ಸಭೆ’ಯಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.</p>.<p>ಕೆಲವೊಂದು ಪ್ರಕರಣಗಳಲ್ಲಿ ದೂರು ದಾಖಲಾಗಿ ನಾಲ್ಕೈದು ವರ್ಷ ಕಳೆದರೂ ಇತ್ಯರ್ಥ ಆಗುತ್ತಿಲ್ಲ. ಆಯೋಗ ನೀಡುವ ಸಮನ್ಸ್ಗಳಿಗೂ ಅಧಿಕಾರಿಗಳು ಪ್ರತಿಕ್ರಿಯೆ ನೀಡುವುದಿಲ್ಲ. ಇದು ಉತ್ತಮ ನಡೆ ಅಲ್ಲ. ಈ ಪದ್ಧತಿ ಹೀಗೆಯೇ ಮುಂದುವರೆದರೆ ವಾರಂಟ್ ನೀಡಬೇಕಾಗುತ್ತದೆ. ನೀವು ಕೇಂದ್ರ ಕಚೇರಿಗೆ ಬಂದು ಉತ್ತರಿಸಬೇಕಾಗುತ್ತದೆ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.</p>.<p>ಬಹುತೇಕ ಇಲಾಖೆಗಳ ಮುಖ್ಯಸ್ಥರು ಪ್ರಕರಣದ ವರದಿಯನ್ನು ಗಮನಿಸುತ್ತಿಲ್ಲ. ವರದಿಯನ್ನು ಕೆಳಹಂತದ ಸಿಬ್ಬಂದಿಯಿಂದ ತಯಾರಿಸಿ, ಆಯೋಗಕ್ಕೆ ರವಾನಿಸುತ್ತಿದ್ದಾರೆ. ಅದರಲ್ಲೂ ಕೆಲವೊಂದು ಹಿಂಬರಗಳು ಕೇವಲ ಎರಡೇ ಸಾಲಿನಿಂದ ಕೂಡಿರುತ್ತವೆ. ಮಾಹಿತಿ ಅಪೂರ್ಣವಾಗಿ ಇರುತ್ತದೆ ಎಂದು ಬೇಸರಿಸಿದರು.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಬರುವ ವರದಿಗಳನ್ನು ಎಸ್ಪಿ ಗಮನಿಸುವುದಿಲ್ಲ ಎನಿಸುತ್ತದೆ. ವರದಿಯಲ್ಲಿ ಎಸ್ಪಿ ಪರವಾಗಿ ಕಚೇರಿಯ ಆಡಳಿತ ಅಧಿಕಾರಿಯ ಸಹಿ ಇರುತ್ತದೆ. ಪೊಲೀಸ್ ಅಧಿಕಾರಿಗಳ ಮೇಲಿನ ಆರೋಪಗಳಲ್ಲಿಯೂ, ಆರೋಪಿಯೇ ವರದಿಗಳನ್ನು ತಯಾರಿಸಿದ ಉದಾಹರಣೆಗಳಿವೆ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು. ಈ ವೇಳೆ ಎಸ್ಪಿ ಕೆ.ವಂಶಿಕೃಷ್ಣ ಅವರು ಸಭೆಯಲ್ಲಿ ಇರಲಿಲ್ಲ.</p>.<p>ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ 3 ವಾರಗಳ ಒಳಗೆ ವರದಿ ಸಲ್ಲಿಸಿ, 3 ತಿಂಗಳ ಒಳಗೆ ದೂರುಗಳನ್ನು ಇತ್ಯರ್ಥ ಪಡಿಸಿ. ಇದರಿಂದ ಆಡಳಿತ ಸುಗಮವಾಗುತ್ತದೆ. ಜನರಿಗೂ ಅನುಕೂಲ ಆಗುತ್ತದೆ ಎಂದು ಕಿವಿಮಾತು ಹೇಳಿದರು.</p>.<p><strong>20 ವರ್ಷವಾದರೂ ಇತ್ಯರ್ಥವಾಗದ ದೂರು</strong></p>.<p>ನಿವೃತ್ತ ಶಿರಸ್ತೇದಾರ ಡಿ.ತಿಮ್ಮಯ್ಯ ಎಂಬುವವರ ಪಿಂಚಣಿ ಮಂಜೂರಾಗಿಲ್ಲ ಎಂಬ ದೂರು 20 ವರ್ಷಗಳಿಂದ ಇತ್ಯರ್ಥವಾಗಿಲ್ಲ. ಯಾಕೆ ತಡವಾಗಿದೆ ಎಂದು ರೂಪಕ್ಕುಮಾರ್ ದತ್ತ ಪ್ರಶ್ನಿಸಿದರು.</p>.<p>ಇದು ತುಂಬಾ ಹಳೆಯ ಪ್ರಕರಣ ಆಗಿದ್ದರಿಂದ, ಅದರ ಕಡತ ಸಿಕ್ಕಿಲ್ಲದಿರಬಹುದು. ಕಚೇರಿಯನ್ನು ನವೀಕರಿಸುತ್ತಿದ್ದೇವೆ. ಆ ಕಡತವನ್ನು ಹುಡುಕಿಸಿ, ಸಮಸ್ಯೆ ಪರಿಹರಿಸುತ್ತೇನೆ ಎಂದು ಪಕ್ಕದಲ್ಲಿದ್ದ ಜಿಲ್ಲಾಧಿಕಾರಿ ಕೆ.ರಾಕೇಶ್ಕುಮಾರ್ ಪ್ರತಿಕ್ರಿಯಿಸಿದರು.</p>.<p><strong>‘ಮತ್ತೊಮ್ಮೆ ವರದಿ ಕಳುಹಿಸಿ’</strong></p>.<p>ರೂಪಕ್ಕುಮಾರ್ ದತ್ತ ಅವರು ತಮ್ಮೊಂದಿಗೆ ಕಡತಗಳ ಬಂಡಲ್ ಅನ್ನೆ ಸಭೆಗೆ ತಂದಿದ್ದರು. ತಮ್ಮ ವಿಚಾರಣಪೀಠದಡಿಯ ಒಂದೊಂದೆ ದೂರುಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.</p>.<p>ಚಿಕ್ಕನಾಯಕನಹಳ್ಳಿಯ ಕುಡಿಯುವ ನೀರಿನ ಸಮಸ್ಯೆ, ಶೆಟ್ಟಿಹಳ್ಳಿಯ ಅಂಗನವಾಡಿ ಕಟ್ಟಡದ ಶಿಥಿಲಾವಸ್ಥೆ, ಮಾಯಸಂದ್ರ ಹೋಬಳಿಯಲ್ಲಿ ಅನಧಿಕೃತವಾಗಿ ಮರಗಳನ್ನು ಕಡಿದ ಪ್ರಕರಣ, ಯಲ್ಲೇನಹಳ್ಳಿಯ ಗೋಮಾಳ ಒತ್ತುವರಿ, ಕುಣಿಗಲ್ನಲ್ಲಿ ನಾಯಿ ದಾಳಿಗೆ ಬಾಲಕಿ ಬಲಿಯಾದ ಪ್ರಕರಣಗಳ ಕುರಿತು ಮಾಹಿತಿ ಪಡೆದುಕೊಂಡರು.</p>.<p>ಬಹುತೇಕ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗೆ ವರದಿ ಸಲ್ಲಿಸಲಾಗಿದೆ ಎಂಬ ಉತ್ತರಗಳು ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ಬಂದವು. ಆಗ, ಜಿಲ್ಲಾಧಿಕಾರಿ ಕೆ.ರಾಕೇಶ್ಕುಮಾರ್, ‘ಪ್ರಕರಣದ ಸಂಖ್ಯೆಯನ್ನು ಬರೆದುಕೊಂಡು, ವರದಿಯ ಪ್ರತಿಯನ್ನು ಮತ್ತೊಮ್ಮೆ ನಮಗೂ, ಆಯೋಗಕ್ಕೂ ಕಳುಹಿಸಿ’ ಎಂದು ಸೂಚಿಸಿದರು.</p>.<p><strong>ಸಮಸ್ಯೆಗೆ ಸ್ಪಂದಿಸಿ</strong></p>.<p>ಆಯೋಗ ಆಡಳಿತ ಮಾಡಲ್ಲ. ಆಡಳಿತದಲ್ಲಿ ಹೆಚ್ಚು–ಕಡಿಮೆ ಆದಾಗ ಜನ ಆಯೋಗಕ್ಕೆ ಬರುತ್ತಾರೆ. ಅವರ ಕಷ್ಟಗಳಿಗೆ ತಕ್ಷಣ ಸ್ಪಂದಿಸಿದರೆ, ಆಡಳಿತ ಸುಗಮ ಆಗುತ್ತದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕ್ಕುಮಾರ್ ದತ್ತ ಹೇಳಿದರು.</p>.<p>ಅಂಕಿ–ಅಂಶ</p>.<p>182 –ಆಯೋಗದಿಂದ ಅಂತಿಮ ಆದೇಶಕ್ಕಾಗಿ ಜಿಲ್ಲಾಡಳಿತ ಸಲ್ಲಿಸಬೇಕಾದ ಅನುಸರಣಾ ವರದಿಗಳು</p>.<p>131 –ಅನುಸರಣಾ ವರದಿ ಸಲ್ಲಿಸಿರುವ ಪ್ರಕರಣಗಳ ಸಂಖ್ಯೆ</p>.<p>51 –ಅನುಸರಣಾ ವರದಿ ಸಿದ್ಧವಾಗಬೇಕಾದ ಪ್ರಕರಣಗಳು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>