<p><strong>ತುಮಕೂರು:</strong>ಅಪಘಾತವೊಂದರಲ್ಲಿ ಕೈಯಿಂದ ಬೇರ್ಪಟ್ಟಿದ್ದ ಅಂಗೈ ಮಣಿಕಟ್ಟನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿ ಮರುಜೋಡಣೆಯನ್ನು ನಗರದ ಸಿದ್ಧಗಂಗಾ ಆಸ್ಪತ್ರೆ ವೈದ್ಯರು ಪ್ರಶಂಶೆಗೆ ಪಾತ್ರರಾಗಿದ್ದಾರೆ.</p>.<p>ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಹುಲಿಕುಂಟೆ ಗ್ರಾಮದ 26 ವರ್ಷದ ಹರೀಶ್ ಶಸ್ತ್ರಚಿಕಿತ್ಸೆಗೊಳಗಾದವರು.</p>.<p>ಸೆಪ್ಟಂಬರ್ 2 ರಂದು ಹಬ್ಬಕ್ಕೆ ಊರಿಗೆ ತೆರಳುತ್ತಿದ್ದಾಗ ಕೊರಟಗೆರೆ ಬಳಿ ಸಂಭವಿಸಿದ ಅಪಘಾತದಲ್ಲಿ ಬಲಗೈನ ಅಂಗೈ ಮಣಿಕಟ್ಟು ಸಮೇತ ತುಂಡಾಗಿ ಬಿದ್ದಿತ್ತು.</p>.<p>ಸಿದ್ಧಗಂಗಾ ಆಸ್ಪತ್ರೆಗೆ ತುರ್ತು ನಿರ್ಧಾರ ತೆಗೆದುಕೊಂಡ ಎಲುಬು ಮತ್ತು ಕೀಲು ಮೂಳೆ ರೋಗ ತಜ್ಞರಾದ ಡಾ.ಸಿ.ವಿ.ಕುಮಾರ್ ಹಾಗೂ ವಿಜಯ್ಕುಮಾರ್ ನೇತೃತ್ವದ ವೈದ್ಯರ ತಂಡ ಸತತ 8 ತಾಸು ( ರಾತ್ರಿ11ಗಂಟೆಯಿಂದ ಬೆಳಿಗ್ಗೆ7ಗಂಟೆಯವರೆಗೂ) ನಿರಂತರ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.</p>.<p>ಪೋಷಕರ ಪ್ರತಿಕ್ರಿಯೆ: ‘ಅಪಘಾತದಲ್ಲಿ ಗಾಯಗೊಂಡಿದ್ದ ನನ್ನ ಮಗನಿಗೆ ಸಿದ್ಧಗಂಗಾ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿ ಮಗನ ಪ್ರಾಣ ಉಳಿಸಿದ್ದಾರೆ’ ಎಂದು ಹರೀಶ್ ತಂದೆ ಮಂಜುನಾಥ್ ಹೇಳಿದ್ದಾರೆ.</p>.<p>’ಬೆಂಗಳೂರಿನಲ್ಲಿ ಇದೇ ಚಿಕಿತ್ಸೆಗೆ ಲಕ್ಷಾಂತರ ಖರ್ಚಾಗುತ್ತಿತ್ತು.ಜೀವ ಉಳಿಯುವ ಭರವಸೆಯನ್ನೂ ನೀಡದೆ ಚಿಕಿತ್ಸೆ ಕೊಡಿಸಬೇಕಾಗಿತ್ತು.ಆದರೆ, ಸಿದ್ಧಗಂಗಾ ಆಸ್ಪತ್ರೆ ವೈದ್ಯರು ಧೈರ್ಯ ತುಂಬಿ ನಿರಂತರ ಶಸ್ತ್ರಚಿಕಿತ್ಸೆ ಮುಖಾಂತರ ಮಗನ ಪ್ರಾಣ ಉಳಿಸಿದ್ದಾರೆ’ ಎಂದು ವೈದ್ಯರ ಕಾರ್ಯ ಪ್ರಶಂಸಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong>ಅಪಘಾತವೊಂದರಲ್ಲಿ ಕೈಯಿಂದ ಬೇರ್ಪಟ್ಟಿದ್ದ ಅಂಗೈ ಮಣಿಕಟ್ಟನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿ ಮರುಜೋಡಣೆಯನ್ನು ನಗರದ ಸಿದ್ಧಗಂಗಾ ಆಸ್ಪತ್ರೆ ವೈದ್ಯರು ಪ್ರಶಂಶೆಗೆ ಪಾತ್ರರಾಗಿದ್ದಾರೆ.</p>.<p>ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಹುಲಿಕುಂಟೆ ಗ್ರಾಮದ 26 ವರ್ಷದ ಹರೀಶ್ ಶಸ್ತ್ರಚಿಕಿತ್ಸೆಗೊಳಗಾದವರು.</p>.<p>ಸೆಪ್ಟಂಬರ್ 2 ರಂದು ಹಬ್ಬಕ್ಕೆ ಊರಿಗೆ ತೆರಳುತ್ತಿದ್ದಾಗ ಕೊರಟಗೆರೆ ಬಳಿ ಸಂಭವಿಸಿದ ಅಪಘಾತದಲ್ಲಿ ಬಲಗೈನ ಅಂಗೈ ಮಣಿಕಟ್ಟು ಸಮೇತ ತುಂಡಾಗಿ ಬಿದ್ದಿತ್ತು.</p>.<p>ಸಿದ್ಧಗಂಗಾ ಆಸ್ಪತ್ರೆಗೆ ತುರ್ತು ನಿರ್ಧಾರ ತೆಗೆದುಕೊಂಡ ಎಲುಬು ಮತ್ತು ಕೀಲು ಮೂಳೆ ರೋಗ ತಜ್ಞರಾದ ಡಾ.ಸಿ.ವಿ.ಕುಮಾರ್ ಹಾಗೂ ವಿಜಯ್ಕುಮಾರ್ ನೇತೃತ್ವದ ವೈದ್ಯರ ತಂಡ ಸತತ 8 ತಾಸು ( ರಾತ್ರಿ11ಗಂಟೆಯಿಂದ ಬೆಳಿಗ್ಗೆ7ಗಂಟೆಯವರೆಗೂ) ನಿರಂತರ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.</p>.<p>ಪೋಷಕರ ಪ್ರತಿಕ್ರಿಯೆ: ‘ಅಪಘಾತದಲ್ಲಿ ಗಾಯಗೊಂಡಿದ್ದ ನನ್ನ ಮಗನಿಗೆ ಸಿದ್ಧಗಂಗಾ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿ ಮಗನ ಪ್ರಾಣ ಉಳಿಸಿದ್ದಾರೆ’ ಎಂದು ಹರೀಶ್ ತಂದೆ ಮಂಜುನಾಥ್ ಹೇಳಿದ್ದಾರೆ.</p>.<p>’ಬೆಂಗಳೂರಿನಲ್ಲಿ ಇದೇ ಚಿಕಿತ್ಸೆಗೆ ಲಕ್ಷಾಂತರ ಖರ್ಚಾಗುತ್ತಿತ್ತು.ಜೀವ ಉಳಿಯುವ ಭರವಸೆಯನ್ನೂ ನೀಡದೆ ಚಿಕಿತ್ಸೆ ಕೊಡಿಸಬೇಕಾಗಿತ್ತು.ಆದರೆ, ಸಿದ್ಧಗಂಗಾ ಆಸ್ಪತ್ರೆ ವೈದ್ಯರು ಧೈರ್ಯ ತುಂಬಿ ನಿರಂತರ ಶಸ್ತ್ರಚಿಕಿತ್ಸೆ ಮುಖಾಂತರ ಮಗನ ಪ್ರಾಣ ಉಳಿಸಿದ್ದಾರೆ’ ಎಂದು ವೈದ್ಯರ ಕಾರ್ಯ ಪ್ರಶಂಸಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>