‘ಈ ವಿಡಿಯೊ ಮೂಲಕ ತನ್ನ ತೇಜೋವಧೆ ಮಾಡಲಾಗಿದೆ. ನನ್ನಿಂದ ಹಣ ಲಪಟಾಯಿಸುವ ಉದ್ದೇಶ ಇದೆ. ಮಠದ ಹೆಸರು ಮತ್ತು ಭಾವಚಿತ್ರ ಬಳಸಿಕೊಂಡು ವಿವಿಧ ಶೀರ್ಷಿಕೆಯಡಿ ಟಿ.ವಿಗಳಲ್ಲಿ ಪ್ರಸಾರ ಮಾಡುವ ಹುನ್ನಾರ ನಡೆಸಿದ್ದಾರೆ. 2ರಿಂದ 15ನೇ ಪ್ರತಿವಾದಿಗಳು (ವಿದ್ಯುನ್ಮಾನ ಮಾಧ್ಯಮಗಳು) ಈ ಮಾಹಿತಿಯ ಸತ್ಯಾಸತ್ಯತೆ ಪರಾಮರ್ಶಿಸದೆ ಪ್ರಕಟಿಸುವರು. ಇದರಿಂದ ನನ್ನ ಘನತೆ, ಗೌರವಗಳಿಗೆ ಧಕ್ಕೆ ಉಂಟಾಗುತ್ತದೆ. ಮಠ ಮತ್ತು ನನ್ನ ಭಾವಚಿತ್ರಗಳನ್ನು ಟಿ.ವಿ ವಾಹಿನಿಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸದಂತೆ ತಾತ್ಕಾಲಿಕ ನಿರ್ಬಂಧಕ್ಕೆ ಆದೇಶ ನೀಡಬೇಕು’ ಎಂದು ರುದ್ರಮುನಿ ಸ್ವಾಮೀಜಿ ನ್ಯಾಯಾಲಯವನ್ನು ಕೋರಿದ್ದರು.