ತುರುವೇಕೆರೆ: ಕೊಬ್ಬರಿಗೆ ಬೆಂಬಲ ಬೆಲೆ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಶುಕ್ರವಾರ ಮನವಿ ನೀಡಲು ಎಪಿಎಂಸಿ ಸದಸ್ಯರೊಂದಿಗೆ ನಿಯೋಗ ಹೋಗುವುದಾಗಿ ಶಾಸಕ ಮಸಾಲ ಜಯರಾಂ ಹೇಳಿದರು.
ತಾಲ್ಲೂಕಿನ ಮಾಯಸಂದ್ರ ಮತ್ತು ಡಿ.ಕಲ್ಕೆರೆ ಗ್ರಾಮದಲ್ಲಿ ಎಪಿಎಂಸಿಯ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ₹75 ಲಕ್ಷ ವೆಚ್ಚದ ಗ್ರಾಮೀಣ ಸಂತೆಗಳ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತಾಲ್ಲೂಕಿನ ಎಪಿಎಂಸಿ ಅಧ್ಯಕ್ಷ ನರಸಿಂಹರಾಜು ಮಾತನಾಡಿದರು. ಪ್ರಸನ್ನ, ವಿ.ಟಿ.ವೆಂಕಟರಾಮು, ಕಾಂತರಾಜು, ನಾಗರಾಜು, ವಿಜ ಯೇಂದ್ರ, ಇಂದ್ರಮ್ಮ, ಲೋಕೇಶ್, ಮಧುಸೂದನ್, ವೆಂಕಟೇಶ್, ರಾಜೇಶ್, ಧನಪಾಲ್, ಎನ್.ಆರ್.ಜಯರಾಂ, ಸುರೇಶ್ ಇದ್ದರು.