ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ದಾರಿ ತಪ್ಪಿದ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರ: ಸಚಿವ ಜಿ.ಪರಮೇಶ್ವರ ಆತಂಕ

Published : 31 ಡಿಸೆಂಬರ್ 2023, 5:54 IST
Last Updated : 31 ಡಿಸೆಂಬರ್ 2023, 5:54 IST
ಫಾಲೋ ಮಾಡಿ
Comments
ಕನ್ನಡ ಬದುಕಿಗೆ ಬರಲಿ: ಬರಗೂರು
‘ಕನ್ನಡ ಭಾಷೆ ನಾಮಫಲಕ ಮೀರಿ ಬದುಕಿಗೆ ಬರಬೇಕು. ಕನ್ನಡದ ಮುಖಾಂತರ ಬದುಕು ಕಟ್ಟಿಕೊಳ್ಳಬಲ್ಲೆವು ಎಂಬ ವಾತಾವರಣ ನಿರ್ಮಿಸಬೇಕು’ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು. ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ ‘ಕನ್ನಡದ ಬಗ್ಗೆ ಆದರ್ಶದ ಪಾಠಗಳನ್ನು ಹೇಳಿದರೆ ಸಾಲದು ವಾಸ್ತವ ಬೇರೆಯೇ ಇರುತ್ತದೆ. ಆದರ್ಶ ಮತ್ತು ವಾಸ್ತವದ ನಡುವಿನ ಕಂದಕ ಮುಚ್ಚಬೇಕು. ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಮಾಡಬೇಕು’ ಎಂದು ಒತ್ತಾಯಿಸಿದರು. ಪ್ರಜಾಸತ್ತಾತ್ಮಕತೆ ಸಾಂಸ್ಕೃತಿಕ ಸ್ವಾಯತ್ತತೆ ಜಾತ್ಯತೀತತೆ ಈ ಮೂರು ಬಿಕ್ಕಟ್ಟಿನಲ್ಲಿವೆ. ಇಂತಹ ಸಮಯದಲ್ಲಿ ಲೇಖಕರು ಸಾಹಿತಿಗಳು ಮೌನವಾಗಿದ್ದಾರೆ ಎಂಬ ಟೀಕೆಗಳು ಕೇಳಿ ಬರುತ್ತಿವೆ. ಆದರೆ ಮೌನ ಮತ್ತು ಮಾತು ಎರಡೂ ಜಾಗೃತವಾಗಿವೆ. ಸಮಕಾಲೀನ ಸಂದರ್ಭದ ಸಂಕಷ್ಟಗಳಿಗೆ ಕನ್ನಡ ಸಾಹಿತ್ಯ ಹಿಂದಕ್ಕೆ ಸರಿದಿಲ್ಲ ಎಂದರು. ಬೌದ್ಧಿಕ ವಲಯವನ್ನು ವಿಭಜಕ ಪ್ರವೃತ್ತಿ ಆವರಿಸಿಕೊಂಡಿದೆ. ಪರಸ್ಪರ ಭೇಟಿ ಮಾಡಲು ಆಗದಂತಹ ವಿಭಜಕಗಳು ನಿರ್ಮಾಣವಾಗುತ್ತಿದೆ. ಸಾಂಸ್ಕೃತಿಕ ವಲಯದಲ್ಲಿನ ವಿಭಜಕ ಪ್ರವೃತ್ತಿ ಆತಂಕಕಾರಿ. ಪ್ರಜಾಪ್ರಭುತ್ವ ಉಳಿಯಲು ಭಿನ್ನಾಭಿಪ್ರಾಯದ ನಡುವೆ ಸಂವಾದಕ್ಕೆ ಸಾಧ್ಯವಾಗಬೇಕು.‌ ಬೌದ್ಧಿಕ ವಲಯ ವಿಭಜಕ ಮೀರಿ ಸಂವಾದಕ್ಕೆ ಸಿದ್ಧವಾಗಬೇಕು. ವಿಚಾರ ವಿನಿಮಯ ಮಾಡಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.
‘ಪಲ್ಲಕ್ಕಿ’ ಉತ್ಸವ ಬೇಡ: ಶಿವಪ್ರಕಾಶ್
‘ಸಮ್ಮೇಳನಾಧ್ಯಕ್ಷರನ್ನು ಪಲ್ಲಕ್ಕಿ‌ ಮೇಲೆ ಹೊತ್ತು ತರುವುದು ನಿಲ್ಲಿಸಬೇಕು. ಇದು ಸಾಮಂತವಾದಿ ಸಂಸ್ಕೃತಿಯ ಸಂಕೇತ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದಕ್ಕೆ ಅವಕಾಶ ಇರಬಾರದು. ಅಧ್ಯಕ್ಷರು ನೆಲದ ಮೇಲೆ ನಡೆದು ಸಮ್ಮೇಳನದ ಸೇವೆ ಮಾಡಲಿ’ ಎಂಬ ಆಶಯವನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಚ್.ಎಸ್.ಶಿವಪ್ರಕಾಶ್‌ ವ್ಯಕ್ತಪಡಿಸಿದರು. ಜಿಲ್ಲೆಯ ನೆಲ ಕಲೆ ಸಂಸ್ಕೃತಿಯ ಬಗ್ಗೆ ವಿ.ವಿಯಲ್ಲಿ ಹೆಚ್ಚಿನ ಅಧ್ಯಯನಗಳಾಗಬೇಕು. ಪ್ರಾಥಮಿಕ ಶಿಕ್ಷಣದ ಜತೆಗೆ ಉನ್ನತ ಶಿಕ್ಷಣ ಮತ್ತು ವಿಜ್ಞಾನ–ತಂತ್ರಜ್ಞಾನದಲ್ಲಿ ಕನ್ನಡ ಬಳಕೆಯಾಗಬೇಕು. ಇಂಗ್ಲಿಷ್‌ ಜ್ಞಾನದ ಮೂಲ ಎಂಬ ಮೂಢನಂಬಿಕೆ ಜನರಲ್ಲಿ ಬೇರೂರಿದೆ. ಇದು ದೂರವಾಗಿ ಕನ್ನಡದ ಚಿಂತನೆ ಬೆಳೆಯಬೇಕು ಎಂದು ಆಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT