<p><strong>ತುರುವೇಕೆರೆ</strong>: ತಾಲ್ಲೂಕಿನ ದಂಡಿನಶಿವರ ಗ್ರಾಮದೇವತೆ ಹೊನ್ನಾದೇವಿ ಜಾತ್ರೆ ಅಂಗವಾಗಿ ಶುಕ್ರವಾರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.</p>.<p>ದೇವಸ್ಥಾನದಿಂದ ಹೊನ್ನಾದೇವಿಯನ್ನು ಬಸವನ ನಗಾರಿ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಕರೆತಂದು ರಥಕ್ಕೆ ಕೂರಿಸಿ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.</p>.<p>ರಥದ ನಾಲ್ಕು ಚಕ್ರ ಹಾಗೂ ಮುಂಭಾಗದಲ್ಲಿ ಪೂಜೆ ಸಲ್ಲಿಸಿ ಉಗ್ಗೆದನ್ನವನ್ನು ನೈವೇದ್ಯ ಮಾಡಿ ದೇವಿಗೆ ಮಂಗಳಾರತಿ ನಡೆಸಿದರು. ಸಾವಿರಾರು ಭಕ್ತರು ದೇವಿಯ ಜಯಘೋಷದೊಂದಿಗೆ ರಥ ಎಳೆದರು. ಹರಕೆ ಈಡೇರಿಸುವಂತೆ ಭಕ್ತಾಧಿಗಳು ಧವನ ಮತ್ತು ಬಾಳೆ ಹಣ್ಣನ್ನು ರಥಕ್ಕೆ ತೂರಿದರು. ಚಂದ್ರಮಂಡಲೊತ್ಸವ ನೆರವೇರಿತು.</p>.<p>ಗ್ರಾಮದ ಮಹಿಳೆಯರು, ಹೆಣ್ಣು ಮಕ್ಕಳು ಸರತಿ ಸಾಲಿನಲ್ಲಿ ಬಾಯಿಬೀಗ ಹಾಕಿಸಿಕೊಂಡರು. ಶನಿವಾರ ರಾತ್ರಿ ದೂಪದ ಸೇವೆ ಸಲ್ಲಿಸಿ, ಕಂಬ ವಿಸರ್ಜನೆ ಮಾಡಿದ ಮೇಲೆ ಜಾತ್ರೆಗೆ ತೆರೆ ಎಳೆಯಲಾಗುತ್ತದೆ.</p>.<p>ಭಕ್ತರಿಗೆ ಪಾನಕ, ಫಲಹಾರ, ಮಜ್ಜಿಗೆ ವಿತರಿಸಿದರು. ಅನ್ನದಾಸೋಹ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ಸಂಜೆವರೆಗೆ ಪ್ರಸಾದ ಸ್ವೀಕರಿಸಿದರು. ಹೊನ್ನಾದೇವಿಯ 33 ಹಳ್ಳಿಗಳ ಭಕ್ತರು ಪಾಲ್ಗೊಂಡಿದ್ದರು.</p>.<p>ದೇವಾಲಯದ ಧರ್ಮದರ್ಶಿ ಡಿ.ಎಸ್.ಗಂಗಾಧರ ಗೌಡ, ಗುಡಿಗೌಡ ಡಿ.ಎನ್.ಸಿದ್ದೇಗೌಡ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುರುವೇಕೆರೆ</strong>: ತಾಲ್ಲೂಕಿನ ದಂಡಿನಶಿವರ ಗ್ರಾಮದೇವತೆ ಹೊನ್ನಾದೇವಿ ಜಾತ್ರೆ ಅಂಗವಾಗಿ ಶುಕ್ರವಾರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.</p>.<p>ದೇವಸ್ಥಾನದಿಂದ ಹೊನ್ನಾದೇವಿಯನ್ನು ಬಸವನ ನಗಾರಿ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಕರೆತಂದು ರಥಕ್ಕೆ ಕೂರಿಸಿ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.</p>.<p>ರಥದ ನಾಲ್ಕು ಚಕ್ರ ಹಾಗೂ ಮುಂಭಾಗದಲ್ಲಿ ಪೂಜೆ ಸಲ್ಲಿಸಿ ಉಗ್ಗೆದನ್ನವನ್ನು ನೈವೇದ್ಯ ಮಾಡಿ ದೇವಿಗೆ ಮಂಗಳಾರತಿ ನಡೆಸಿದರು. ಸಾವಿರಾರು ಭಕ್ತರು ದೇವಿಯ ಜಯಘೋಷದೊಂದಿಗೆ ರಥ ಎಳೆದರು. ಹರಕೆ ಈಡೇರಿಸುವಂತೆ ಭಕ್ತಾಧಿಗಳು ಧವನ ಮತ್ತು ಬಾಳೆ ಹಣ್ಣನ್ನು ರಥಕ್ಕೆ ತೂರಿದರು. ಚಂದ್ರಮಂಡಲೊತ್ಸವ ನೆರವೇರಿತು.</p>.<p>ಗ್ರಾಮದ ಮಹಿಳೆಯರು, ಹೆಣ್ಣು ಮಕ್ಕಳು ಸರತಿ ಸಾಲಿನಲ್ಲಿ ಬಾಯಿಬೀಗ ಹಾಕಿಸಿಕೊಂಡರು. ಶನಿವಾರ ರಾತ್ರಿ ದೂಪದ ಸೇವೆ ಸಲ್ಲಿಸಿ, ಕಂಬ ವಿಸರ್ಜನೆ ಮಾಡಿದ ಮೇಲೆ ಜಾತ್ರೆಗೆ ತೆರೆ ಎಳೆಯಲಾಗುತ್ತದೆ.</p>.<p>ಭಕ್ತರಿಗೆ ಪಾನಕ, ಫಲಹಾರ, ಮಜ್ಜಿಗೆ ವಿತರಿಸಿದರು. ಅನ್ನದಾಸೋಹ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ಸಂಜೆವರೆಗೆ ಪ್ರಸಾದ ಸ್ವೀಕರಿಸಿದರು. ಹೊನ್ನಾದೇವಿಯ 33 ಹಳ್ಳಿಗಳ ಭಕ್ತರು ಪಾಲ್ಗೊಂಡಿದ್ದರು.</p>.<p>ದೇವಾಲಯದ ಧರ್ಮದರ್ಶಿ ಡಿ.ಎಸ್.ಗಂಗಾಧರ ಗೌಡ, ಗುಡಿಗೌಡ ಡಿ.ಎನ್.ಸಿದ್ದೇಗೌಡ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>