<p><strong>ತಿಪಟೂರು:</strong> ನಗರದಲ್ಲಿ ಮೃತಪಟ್ಟವರನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಇರುವ ಚಿರಶಾಂತಿ ವಾಹನ ಕೆಟ್ಟುನಿಂತು ತಿಂಗಳುಗಳೇ ಕಳೆದರೂ ದುರಸ್ತಿಯಾಗಿಲ್ಲ.</p>.<p>ನಗರದ 31 ವಾರ್ಡ್ಗಳಲ್ಲಿ ಯಾರಾದರೂ ನಿಧನರಾದರೆ ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲು ಅನುಕೂಲವಾಗಲೆಂದು 12 ವರ್ಷಗಳ ಹಿಂದೆಯೇ ವಾಹನ ಖರೀದಿಸಲಾಗಿತ್ತು. ಅಗತ್ಯವಿರುವವರು ₹ 300 ಪಾವತಿಸಿ ಇದನ್ನು ಬಳಸಿಕೊಳ್ಳಬಹುದು. ವಾಹನದ ನಿರ್ವಹಣೆ ಮಾಡಬೇಕಿದ್ದ ನಗರಸಭೆ ಈ ವಾಹನದದುರಸ್ತಿಗೆ ಆಸಕ್ತಿವಹಿಸಿಲ್ಲ. ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.</p>.<p class="Subhead">ಖಾಸಗಿ ಆಂಬುಲೆನ್ಸ್ ಲಾಬಿ: ನಗರಸಭೆಯ ಚಿರಶಾಂತಿ ವಾಹನ ಕೆಟ್ಟು ನಿಂತಿರುವುದನ್ನೇ ಬಂಡವಾಳ ಮಾಡಿಕೊಂಡ ಕೆಲ ಖಾಸಗಿ ಆಂಬುಲೆನ್ಸ್ಗಳು ನಿಧನರಾದವರನ್ನು ಸ್ಮಶಾನಕ್ಕೆ ಕೊಂಡೊಯ್ಯಲು<br />ಸಾವಿರಾರು ರೂಪಾಯಿ ಕೇಳುತ್ತಾ, ಸಾವಿನ ಮನೆಯಲ್ಲೂ ಸುಲಿಗೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.</p>.<p class="Subhead"><strong>ನೂತನ ವಾಹನ ಖರೀದಿಗೆ ಆಗ್ರಹ:</strong></p>.<p>12 ವರ್ಷಗಳಿಂದ ವಾಹನ ಬಳಸಿಕೊಂಡಿದ್ದಾರೆ. ಆದರೆ ಸುಸ್ಥಿತಿಯಲ್ಲಿ ಇಟ್ಟುಕೊಂಡಿಲ್ಲ. ಈ ವಾಹನದ ಚಾಲಕನಿಗೆ ಯಾರಿಗೆ ಸಮಸ್ಯೆ ಹೇಳಿಕೊಳ್ಳುವುದು ಎಂಬುದೇ ಪ್ರಶ್ನೆಯಾಗಿದೆ. ತಿಂಗಳಿಗೆ ಎರಡು ಬಾರಿ ಕೆಟ್ಟು ನಿಲ್ಲುತ್ತದೆ. ಹಾಗಾಗಿ ನೂತನ ವಾಹನ ಖರೀದಿಸಬೇಕು ಎನ್ನುವುದು ನಗರವಾಸಿಗಳ ಒತ್ತಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಪಟೂರು:</strong> ನಗರದಲ್ಲಿ ಮೃತಪಟ್ಟವರನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಇರುವ ಚಿರಶಾಂತಿ ವಾಹನ ಕೆಟ್ಟುನಿಂತು ತಿಂಗಳುಗಳೇ ಕಳೆದರೂ ದುರಸ್ತಿಯಾಗಿಲ್ಲ.</p>.<p>ನಗರದ 31 ವಾರ್ಡ್ಗಳಲ್ಲಿ ಯಾರಾದರೂ ನಿಧನರಾದರೆ ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲು ಅನುಕೂಲವಾಗಲೆಂದು 12 ವರ್ಷಗಳ ಹಿಂದೆಯೇ ವಾಹನ ಖರೀದಿಸಲಾಗಿತ್ತು. ಅಗತ್ಯವಿರುವವರು ₹ 300 ಪಾವತಿಸಿ ಇದನ್ನು ಬಳಸಿಕೊಳ್ಳಬಹುದು. ವಾಹನದ ನಿರ್ವಹಣೆ ಮಾಡಬೇಕಿದ್ದ ನಗರಸಭೆ ಈ ವಾಹನದದುರಸ್ತಿಗೆ ಆಸಕ್ತಿವಹಿಸಿಲ್ಲ. ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.</p>.<p class="Subhead">ಖಾಸಗಿ ಆಂಬುಲೆನ್ಸ್ ಲಾಬಿ: ನಗರಸಭೆಯ ಚಿರಶಾಂತಿ ವಾಹನ ಕೆಟ್ಟು ನಿಂತಿರುವುದನ್ನೇ ಬಂಡವಾಳ ಮಾಡಿಕೊಂಡ ಕೆಲ ಖಾಸಗಿ ಆಂಬುಲೆನ್ಸ್ಗಳು ನಿಧನರಾದವರನ್ನು ಸ್ಮಶಾನಕ್ಕೆ ಕೊಂಡೊಯ್ಯಲು<br />ಸಾವಿರಾರು ರೂಪಾಯಿ ಕೇಳುತ್ತಾ, ಸಾವಿನ ಮನೆಯಲ್ಲೂ ಸುಲಿಗೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.</p>.<p class="Subhead"><strong>ನೂತನ ವಾಹನ ಖರೀದಿಗೆ ಆಗ್ರಹ:</strong></p>.<p>12 ವರ್ಷಗಳಿಂದ ವಾಹನ ಬಳಸಿಕೊಂಡಿದ್ದಾರೆ. ಆದರೆ ಸುಸ್ಥಿತಿಯಲ್ಲಿ ಇಟ್ಟುಕೊಂಡಿಲ್ಲ. ಈ ವಾಹನದ ಚಾಲಕನಿಗೆ ಯಾರಿಗೆ ಸಮಸ್ಯೆ ಹೇಳಿಕೊಳ್ಳುವುದು ಎಂಬುದೇ ಪ್ರಶ್ನೆಯಾಗಿದೆ. ತಿಂಗಳಿಗೆ ಎರಡು ಬಾರಿ ಕೆಟ್ಟು ನಿಲ್ಲುತ್ತದೆ. ಹಾಗಾಗಿ ನೂತನ ವಾಹನ ಖರೀದಿಸಬೇಕು ಎನ್ನುವುದು ನಗರವಾಸಿಗಳ ಒತ್ತಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>