ಜಿನ್ನಾಗರ ಪಂಚಾಯಿತಿ ಹೊಸಕೆರೆ ಗ್ರಾಮದಲ್ಲಿ ಚುನಾವಣೆ ದಿನ ದಿವಾಕರ್ ಮತ್ತು ವಿಜಯ್ ಕುಮಾರ್ ಗುಂಪಿನ ನಡುವೆ ಘರ್ಷಣೆ ನಡೆದು ಎರಡು ಗುಂಪಿನವರ ಮೇಲೆ ಪ್ರಕರಣ ದಾಖಲಾಗಿದ್ದು , ವಿಜಯ್ ಕುಮಾರ್ ಗೆದ್ದಿದ್ದರೆ, ದಿವಾಕರ್ ಗೌಡ ಸೋತಿದ್ದಾರೆ. ನಡೆಮಾವಿನಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಚಿ ಸಚಿವ ಡಿ.ನಾಗರಾಜಯ್ಯನವರ ಸಹೋದರ ಬಿ.ಶಿವಣ್ಣನವರ ಮಗ ಸಾಫ್ಟ್ವೇರ್ ಎಂಜನಿಯರ್ ಪ್ರಮೋದ್ ಸೋತಿದ್ದಾರೆ. ಇಲ್ಲಿ ಜೈದೀಪ್ ಗೆದ್ದು ಗಮನ ಸೆಳೆದಿದ್ದಾರೆ. ಪತ್ರಕರ್ತ ಬೀಚನಹಳ್ಳಿ ಶ್ರೀನಿವಾಸ್ ಹಳೇವೂರು ಪಂಚಾಯಿತಿಗೆ ಆಯ್ಕೆಯಾಗಿದ್ದಾರೆ.