<p>ತಿಪಟೂರು: ಧರ್ಮದ ತಾತ್ವಿಕ ಶಕ್ತಿಯನ್ನು ಪುನರುತ್ಥಾನಗೊಳಿಸುವ ಅಗತ್ಯವಿದೆ ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.<br /> <br /> ಇಲ್ಲಿನ ಇಂದಿರಾ ನಗರದ ರೇಣುಕಾಚಾರ್ಯ ಮಂಗಳ ಮಂದಿರ ಆವರಣದಲ್ಲಿ ಈಚೆಗೆ ನಡೆದ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಧರ್ಮ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಎಲ್ಲೆಡೆ ಸ್ವಾರ್ಥ ಮತ್ತು ಸಂಕುಚಿತ ಮನೋಭಾವ ತಾಂಡವವಾಡುತ್ತಿದ್ದು, ಶಾಂತಿ, ನೆಮ್ಮದಿ ದೂರವಾಗುತ್ತಿದೆ ಎಂದರು.<br /> <br /> ಆರೋಗ್ಯಕರ ಸಮಾಜ ಸ್ಥಾಪಿಸಲು ಧರ್ಮಶಕ್ತಿ ಮುಖ್ಯ. ಉಜ್ವಲ ಜೀವನಕ್ಕೆ ಧರ್ಮಾಚರಣೆ ಅವಶ್ಯಕ. ರೇಣುಕಾಚಾರ್ಯರು ಜಾತಿ-ಮತಗಳ ಸಂಕೋಲೆ ಕಿತ್ತೆಸೆದು ಮಾನವೀಯ ಸಂಬಂಧ ಗಟ್ಟಿಗೊಳಿಸುವ ಕಾರ್ಯ ಮಾಡಿದ್ದಾರೆ. <br /> <br /> ರೇಣುಕರು ತೋರಿಸಿಕೊಟ್ಟ ಮಾರ್ಗದಲ್ಲೆ ಹಲವರು ಮುಂದುವರಿದು, ಅನೇಕ ಸಾಧನೆಗೈದಿದ್ದಾರೆ. ಇಂದಿಗೂ ರೇಣುಕರು ಬೋಧಿಸಿದ ತತ್ವ, ಹಿತನುಡಿಗಳೇ ಸಮಾಜದಲ್ಲಿ ಪ್ರತಿಧ್ವನಿಸುತ್ತಿವೆ . ಈ ಎಲ್ಲ ಅಂಶಗಳಿಂದಲೆ ವೀರಶೈವ ಧರ್ಮ ಸಂಸ್ಕೃತಿ ಸದಾ ಸಕಲರ ಹಿತ ಬಯಸುತ್ತದೆ ಎಂದರು.<br /> <br /> ಕುಪ್ಪೂರು ಗದ್ದಿಗೆ ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ದೊಡ್ಡಗುಣಿ, ನೊಣವಿನಕೆರೆ, ತಿಪಟೂರು, ಹೊನ್ನವಳ್ಳಿ, ಮಾದಿಹಳ್ಳಿ, ಅಂಬಲದೇವರಹಳ್ಳಿ ಮಠದ ಮಠಾಧೀಶರು ಪಾಲ್ಗೊಂಡಿದ್ದರು.<br /> <br /> ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಸಿ.ನಾಗೇಶ್ ಮಾತನಾಡಿ, ರೇಣುಕರು ಜಗತ್ತಿಗೆ ನೀಡಿದ ತತ್ವ- ಆದರ್ಶಗಳನ್ನು ನಮ್ಮ ಸಮಾಜ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.<br /> <br /> ಕಲ್ಪತರು ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಬಸವಯ್ಯ ಸಮಾರಂಭ ಉದ್ಘಾಟಿಸಿದರು. ಮಾಜಿ ಶಾಸಕ ಬಿ.ನಂಜಾಮರಿ ಮತ್ತಿತರರು ಇದ್ದರು. ಡಾ. ಕೆ.ಎಸ್.ಗಂಗಾಧರಪ್ಪ ಉಪನ್ಯಾಸ ನೀಡಿದರು. ಟಿ.ಎಸ್.ಸದಾಶಿವಯ್ಯ ಸ್ವಾಗತಿಸಿದರು. ಶೋಭಾ ಜಯದೇವ್ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಿಪಟೂರು: ಧರ್ಮದ ತಾತ್ವಿಕ ಶಕ್ತಿಯನ್ನು ಪುನರುತ್ಥಾನಗೊಳಿಸುವ ಅಗತ್ಯವಿದೆ ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.<br /> <br /> ಇಲ್ಲಿನ ಇಂದಿರಾ ನಗರದ ರೇಣುಕಾಚಾರ್ಯ ಮಂಗಳ ಮಂದಿರ ಆವರಣದಲ್ಲಿ ಈಚೆಗೆ ನಡೆದ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಧರ್ಮ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಎಲ್ಲೆಡೆ ಸ್ವಾರ್ಥ ಮತ್ತು ಸಂಕುಚಿತ ಮನೋಭಾವ ತಾಂಡವವಾಡುತ್ತಿದ್ದು, ಶಾಂತಿ, ನೆಮ್ಮದಿ ದೂರವಾಗುತ್ತಿದೆ ಎಂದರು.<br /> <br /> ಆರೋಗ್ಯಕರ ಸಮಾಜ ಸ್ಥಾಪಿಸಲು ಧರ್ಮಶಕ್ತಿ ಮುಖ್ಯ. ಉಜ್ವಲ ಜೀವನಕ್ಕೆ ಧರ್ಮಾಚರಣೆ ಅವಶ್ಯಕ. ರೇಣುಕಾಚಾರ್ಯರು ಜಾತಿ-ಮತಗಳ ಸಂಕೋಲೆ ಕಿತ್ತೆಸೆದು ಮಾನವೀಯ ಸಂಬಂಧ ಗಟ್ಟಿಗೊಳಿಸುವ ಕಾರ್ಯ ಮಾಡಿದ್ದಾರೆ. <br /> <br /> ರೇಣುಕರು ತೋರಿಸಿಕೊಟ್ಟ ಮಾರ್ಗದಲ್ಲೆ ಹಲವರು ಮುಂದುವರಿದು, ಅನೇಕ ಸಾಧನೆಗೈದಿದ್ದಾರೆ. ಇಂದಿಗೂ ರೇಣುಕರು ಬೋಧಿಸಿದ ತತ್ವ, ಹಿತನುಡಿಗಳೇ ಸಮಾಜದಲ್ಲಿ ಪ್ರತಿಧ್ವನಿಸುತ್ತಿವೆ . ಈ ಎಲ್ಲ ಅಂಶಗಳಿಂದಲೆ ವೀರಶೈವ ಧರ್ಮ ಸಂಸ್ಕೃತಿ ಸದಾ ಸಕಲರ ಹಿತ ಬಯಸುತ್ತದೆ ಎಂದರು.<br /> <br /> ಕುಪ್ಪೂರು ಗದ್ದಿಗೆ ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ದೊಡ್ಡಗುಣಿ, ನೊಣವಿನಕೆರೆ, ತಿಪಟೂರು, ಹೊನ್ನವಳ್ಳಿ, ಮಾದಿಹಳ್ಳಿ, ಅಂಬಲದೇವರಹಳ್ಳಿ ಮಠದ ಮಠಾಧೀಶರು ಪಾಲ್ಗೊಂಡಿದ್ದರು.<br /> <br /> ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಸಿ.ನಾಗೇಶ್ ಮಾತನಾಡಿ, ರೇಣುಕರು ಜಗತ್ತಿಗೆ ನೀಡಿದ ತತ್ವ- ಆದರ್ಶಗಳನ್ನು ನಮ್ಮ ಸಮಾಜ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.<br /> <br /> ಕಲ್ಪತರು ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಬಸವಯ್ಯ ಸಮಾರಂಭ ಉದ್ಘಾಟಿಸಿದರು. ಮಾಜಿ ಶಾಸಕ ಬಿ.ನಂಜಾಮರಿ ಮತ್ತಿತರರು ಇದ್ದರು. ಡಾ. ಕೆ.ಎಸ್.ಗಂಗಾಧರಪ್ಪ ಉಪನ್ಯಾಸ ನೀಡಿದರು. ಟಿ.ಎಸ್.ಸದಾಶಿವಯ್ಯ ಸ್ವಾಗತಿಸಿದರು. ಶೋಭಾ ಜಯದೇವ್ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>