ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಉಡುಪಿ | ಗದ್ದೆಗಿಳಿದ ಅನ್ನದಾತ: ಗರಿಗೆದರಿದ ಕೃಷಿ ಚಟುವಟಿಕೆ

ಭತ್ತದ ಕೃಷಿಗೆ ಜಿಲ್ಲೆಯಾದ್ಯಂತ ಉಳುಮೆ, ಬಿತ್ತನೆ, ನೇಜಿ ನೆಡುವ ಕಾರ್ಯ ಶುರು
Published : 17 ಜೂನ್ 2024, 7:20 IST
Last Updated : 17 ಜೂನ್ 2024, 7:20 IST
ಫಾಲೋ ಮಾಡಿ
Comments
ಬ್ರಹ್ಮಾವರದಲ್ಲಿ ಚಾಪೆ ನೇಜಿ ಮೂಲಕ ನಾಟಿ ಮಾಡುತ್ತಿರುವುದು
ಬ್ರಹ್ಮಾವರದಲ್ಲಿ ಚಾಪೆ ನೇಜಿ ಮೂಲಕ ನಾಟಿ ಮಾಡುತ್ತಿರುವುದು
ಬೈಂದೂರು ವ್ಯಾಪ್ತಿಯ ಗದ್ದೆಯೊಂದರಲ್ಲಿ ಟ್ರ್ಯಾಕ್ಟರ್‌ ಮೂಲಕ ಉಳುಮೆ ನಡೆಸುತ್ತಿರುವುದು
ಬೈಂದೂರು ವ್ಯಾಪ್ತಿಯ ಗದ್ದೆಯೊಂದರಲ್ಲಿ ಟ್ರ್ಯಾಕ್ಟರ್‌ ಮೂಲಕ ಉಳುಮೆ ನಡೆಸುತ್ತಿರುವುದು
ಜಿಲ್ಲೆಯ ರೈತರ ಬೇಡಿಕೆ ಅಗತ್ಯಗಳಿಗೆ ತಕ್ಕಂತೆ ಭತ್ತದ ಬಿತ್ತನೆ ಬೀಜ ಸರಬರಾಜು ಮಾಡುವ ಕೆಲಸ ಇಲಾಖೆಗಳಿಂದ ನಡೆಯಬೇಕು
ಕೆ. ವಿಕಾಸ್ ಹೆಗ್ಡೆ ವ್ಯವಸಾಯ ಸಹಕಾರಿ ಬ್ಯಾಂಕ್ ಬಸ್ರೂರು ಉಪಾಧ್ಯಕ್ಷ
ಈ ಸಲ ಉತ್ತಮ ಮಳೆಯಾಗಿ ಕೃಷಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ಕಳೆದ ವರ್ಷ ಅಕಾಲಿಕ ಮಳೆಯಿಂದ ಹಲವಾರು ಸಮಸ್ಯೆ ಎದುರಿಸಿದ್ದೆವು. ಹಲವು ಕಷ್ಟಗಳ ನಡುವೆಯೂ ಕೃಷಿ ಮಾಡುತ್ತೇವೆ
ಗೋಪಾಲ ಕುಲಾಲ್‌ ಮುನಿಯಾಲು ಪ್ರಗತಿಪರ ಕೃಷಿಕ
ಎಂಒ 4 ತಳಿಯ ಭತ್ತದ ಬಿತ್ತನೆ
ಬೀಜ ಸಿಕ್ಕಿಲ್ಲ ಎಂದು ವಿಳಂಬ ಮಾಡದೆ ರೈತರು ಕೆಂಪು ಮುಕ್ತಿ ಜ್ಯೋತಿ ಉಮಾ ಮುಂತಾದ ಪರ್ಯಾಯ ತಳಿಗಳ ಬಿತ್ತನೆ ಬೀಜ ಬಳಸಿ ಕೃಷಿ ಕಾರ್ಯ ನಡೆಸಬೇಕು–ಸೀತಾ ಜಂಟಿ ನಿರ್ದೇಶಕಿ ಕೃಷಿ ಇಲಾಖೆ ಎಂಒ 4 ಭತ್ತದ ತಳಿಯ ಬಿತ್ತನೆ ಬೀಜದ ಕೊರತೆ ಉಂಟಾಗಿದೆ. ಕಳೆದ ಬಾರಿಯ ಇಳುವರಿಯಲ್ಲಿಯೇ ಬಿತ್ತನೆ ಬೀಜ ತೆಗೆದು ಇಟ್ಟಿರುವ ಕಾರಣ ನಮಗೆ ಹೆಚ್ಚಿನ ಸಮಸ್ಯೆ ಉಂಟಾಗಲಿಲ್ಲ –ಹರೀಶ ಪೂಜಾರಿ ಕಾಡಿಗುಂಡಿ ಪ್ರಗತಿಪರ ಕೃಷಿಕ ಯಡ್ತರೆ ಮಳೆ ಅಭಾವದಿಂದ ನೀರಿನ ಸಮಸ್ಯೆ ಉಂಟಾಗಿದೆ. ಕಳೆದ ವರ್ಷವೂ ಮಳೆಕೊರತೆ ಕಂಡುಬಂದಿತ್ತು. ಈ ಬಾರಿಯೂ ವಿಳಂಬವಾಗಿದೆ. ಕಾರ್ಮಿಕರ ಕೊರತೆ ನೀರಿನ ಅಭಾವದಿಂದ ಸಮಸ್ಯೆ ಆಗುತ್ತಿದೆ –ಸಂತೋಷ್ ಶೆಟ್ಟಿ ಬರ್ಪಾಣಿ ಅದಮಾರು ಆರಂಭದಲ್ಲೇ ಉತ್ತಮ ಮಳೆಯಾಗಿರುವುದರಿಂದ ನೀರಿನ ಮೂಲಗಳಲ್ಲಿ ನೀರಿನ ಹರಿವು ಶುರುವಾಗಿದೆ. ಮಳೆ ಕಡಿಮೆಯಾದ್ದರಿಂದ ಸ್ವಲ್ಪಮಟ್ಟಿಗೆ ತೊಂದರೆಯಾದರೂ ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಪಂಪ್‌ಸೆಟ್‌ಗಳ ಮೂಲಕ ಗದ್ದೆ ಒಣಗದಂತೆ ನೀರು ಬಿಡಲಾಗುತ್ತಿದೆ‌ –ಕೃಷ್ಣ ನಾಯಕ್ ರೈತ ಹಿರಿಯಡಕ ಗ್ರಾಮೀಣ ಭಾಗಗಳಲ್ಲಿ ಹಿಂದಿನಂತೆ ಕೂಲಿ ಕಾರ್ಮಿಕರು ಸಿಗುವುದಿಲ್ಲ. ಕಾರ್ಮಿಕರ ಬದಲಾಗಿ ಯಂತ್ರಗಳು ಬಂದಿವೆಯಾದರೂ ಎತ್ತರ ಭಾಗದ ಗದ್ದೆಗಳಿಗೆ ಅದನ್ನು ಕೊಂಡೊಯ್ಯುವುದು ದುಸ್ತರ ಕೆಲಸ –ಉಪೇಂದ್ರ ನಾಯಕ್ ಸಾವಯವ ಕೃಷಿಕ ಮರ್ಣೆ ಗ್ರಾಮ ನಾಟಿ ಮಾಡಿದ ಮೇಲೆ ತುಂತುರು ಮಳೆಯಾದರೂ ಕಾಲಕಾಲಕ್ಕೆ ಸುರಿದರೆ ಭತ್ತ ಸಸಿ ಬಲಿತುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಬಿಸಿಲಿಗೆ ಸಸಿ ಮುರುಟಿ ಹೋಗುತ್ತದೆ. ಕೃಷಿ ಕಾರ್ಮಿಕರ ಕೊರತೆಯೂ ಎದುರಾಗಿದೆ. ಆಧುನಿಕ ಕೃಷಿ ಸಲಕರಣೆಗಳ ಬಾಡಿಗೆಯೂ ವಿಪರೀತವಾಗಿದೆ. ಕೃಷಿ ಇಲಾಖೆಯಿಂದ ಸ್ಯಾಂಪಲ್ ಬಿತ್ತನೆ ಬೀಜ ಲಭ್ಯವಿಲ್ಲ –ರವಿ ಪೂಜಾರಿ ಮೂಡಬೆಟ್ಟು ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT