<p><strong>ಉಡುಪಿ</strong>: ಹಿರಿಯ ಯಕ್ಷಗಾನ ಕವಿ, ಪ್ರಸಿದ್ಧ ಅರ್ಥದಾರಿ ಹೆಬ್ರಿ ತಾಲ್ಲೂಕಿನ ಮುದ್ರಾಡಿಯ ಅಂಬಾತನಯ ಮುದ್ರಾಡಿ (ಕೇಶವ ಶೆಟ್ಟಿಗಾರ್) ಅವರಿಗೆ 2019ನೇ ಸಾಲಿನ ಪ್ರತಿಷ್ಠಿತ ಪಾರ್ಥಿಸುಬ್ಬ ಪ್ರಶಸ್ತಿ ಬಂದಿದೆ.</p>.<p>ಯಕ್ಷಗಾನ ತಾಳಮದ್ದಳೆಯ ಅರ್ಥದಾರಿಯಾಗಿ ದಶಕಗಳ ಕಾಲ ಯಕ್ಷಸೇವೆ ಸಲ್ಲಿಸಿರುವ ಅಂಬಾತನಯ ಮುದ್ರಾಡಿ ಅವರು ಪ್ರಸಿದ್ಧ ಸಾಹಿತಿ, ಬರಹಗಾರರೂ ಹೌದು. ಯಕ್ಷಗಾನ ಕುರಿತ ಕೃತಿಗಳು, ನಾಟಕಗಳು, ಶಿಶುಗೀತೆಗಳು, ಕವನ ಸಂಕಲನಗಳು ಪ್ರಕಟವಾಗಿವೆ. ಹಲವು ಅಪ್ರಕಟಿತ ಬರಹಗಳು ಇವೆ. 6 ದಶಕಗಳಿಗೂ ಹೆಚ್ಚಿನ ಅವಧಿಯ ಕಲಾಸೇವೆಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಬಂದಿದ್ದು, ಈ ಸಂದರ್ಭ‘ಪ್ರಜಾವಾಣಿ’ ಜತೆ ಅವರು ಮಾತನಾಡಿದರು.</p>.<p><strong>*ಪ್ರಶಸ್ತಿ ಬಂದಿರುವುದು ಹೇಗನಿಸುತ್ತಿದೆ ?</strong></p>.<p>-ಯಕ್ಷಗಾನ ತಾಳಮದ್ದಳೆ ಕಲೆಗೆ ಸಲ್ಲಿಸಿರುವ ಸೇವೆ ಪರಿಗಣಿಸಿ ಪಾರ್ಥಿಸುಬ್ಬ ಪ್ರಶಸ್ತಿ ನೀಡುತ್ತಿರುವುದು ಖುಷಿಯಾಗಿದೆ. ಈ ಹಿಂದೆಯೂ ಹಲವು ಪ್ರಶಸ್ತಿಗಳು ಬಂದಿವೆ. ಅವುಗಳಲ್ಲಿ ಇದೂ ಒಂದು.</p>.<p><strong>*ಈಚೆಗೆ ಯಕ್ಷಗಾನ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ?</strong></p>.<p>-ಯಕ್ಷಗಾನದ ಮೂಲ ಉದ್ದೇಶ ಪೌರಾಣಿಕ, ಧಾರ್ಮಿಕ ಸಂಸ್ಕೃತಿ ಪ್ರಸಾರವೇ ಹೊರತು; ಮನೋರಂಜನೆ ಪ್ರಧಾನವಲ್ಲ. ಯಕ್ಷಗಾನದ ಮೂಲಸಂಸ್ಕೃತಿಗೆ ಪೆಟ್ಟುಬೀಳಬಾರದು. ಸ್ವಾತಂತ್ರ್ಯ ಚಳವಳಿಯ ಸಂದರ್ಭ ಯಕ್ಷಗಾನ ಬಳಸಿಕೊಂಡಿದ್ದರ ಉದ್ದೇಶ ಸ್ವಾತಂತ್ರ್ಯ ಪಡೆಯುವುದಾಗಿತ್ತು. ಈಗ ಮನೋರಂಜನೆ ಪ್ರಮುಖ ಉದ್ದೇಶವಾಗಿರುವುದು ಸರಿಯಲ್ಲ.</p>.<p><strong>*ಯಕ್ಷಗಾನದಲ್ಲಿ ಪ್ರಯೋಗಗಳು ಹೆಚ್ಚಾಗಿರುವ ಬಗ್ಗೆ ಏನು ಹೇಳುತ್ತೀರಿ ?</strong></p>.<p>-ಪ್ರಚಾರಕ್ಕಾಗಿ, ಜನರಂಜನೆಗಾಗಿ ಯಕ್ಷಗಾನದ ಮೂಲಸ್ವರೂಪ ಬದಲಿಸುವುದು ತಪ್ಪು. ಹಾಗೆ ನೋಡಿದರೆ, ಯಕ್ಷಗಾನ ಮೂಲಉದ್ದೇಶಗಳಿಂದ ದಾರಿ ತಪ್ಪಿ ಬಹಳ ವರ್ಷಗಳಾಗಿವೆ. ಬೆರಳೆಣಿಕೆ ಕಲಾವಿದರು ಮಾತ್ರ ಮೂಲಸ್ವರೂಪ, ಸೌಂದರ್ಯ ಕೆಡದಂತೆ ಪ್ರಯೋಗಗಳಲ್ಲಿ ತೊಡಗಿದ್ದಾರೆ. ಇಂಥವರ ಸಂಖ್ಯೆ ಹೆಚ್ಚಾಗಬೇಕು.</p>.<p><strong>*ಯಕ್ಷಗಾನದ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಏನು ಮಾಡಬೇಕು ?</strong></p>.<p>-ಕಲಾವಿದರಲ್ಲಿ ಅಧ್ಯಯನಶೀಲತೆ ಹೆಚ್ಚಬೇಕು. ಪುರಾಣದ ಓದಿನೊಂದಿಗೆ ಸಂಸ್ಕೃತಿಯ ಕುರಿತು ಕಾಳಜಿ ತೋರುವ ಪ್ರಯತ್ನ ನಡೆಯಬೇಕು. ಪ್ರಯೋಗಗಳು ತಪ್ಪಲ್ಲ ಆದರೆ, ಯಕ್ಷಗಾನೀಯ ಚೌಕಟ್ಟಿನೊಳಗಿರಬೇಕು.</p>.<p><strong>*ಯುವ ಯಕ್ಷಗಾನ ಕಲಾವಿದರಿಗೆ ನೀಡುವ ಸಲಹೆಗಳು ಏನು ?</strong></p>.<p>-ಯುವ ಕಲಾವಿದರು ಕೇಳಿಸಿಕೊಳ್ಳುವುದನ್ನು ಕಲಿಯಬೇಕು. ರಾಮಾಯಣ, ಮಹಾಭಾರತಗಳ ಅಧ್ಯಯನ ಮಾಡಬೇಕು. ಕನಿಷ್ಠ ಒಂದು ಪ್ರಸಂಗವನ್ನು ಅಮೂಲಾಗ್ರವಾಗಿ ಅಭ್ಯಾಸ ಮಾಡಬೇಕು.ಎಲ್ಲ ಕಲೆಗಳು ಪಾಂಡಿತ್ಯದ ಸೃಷ್ಟಿಯಲ್ಲ; ಪ್ರತಿಭೆಯ ಸೃಷ್ಟಿ ಎಂಬುದನ್ನು ಮರೆಯಬಾರದು.</p>.<p><strong>*ಯಕ್ಷಗಾನದಲ್ಲಿನ ಬದಲಾವಣೆಯ ಬಗ್ಗೆ ನಿಮ್ಮ ಅಭಿಪ್ರಾಯ ?</strong></p>.<p>-ಯಕ್ಷಗಾನದಲ್ಲಿ ಕುಣಿತ, ಮಾತಿನ ಆರ್ಭಟ ಹೆಚ್ಚಾಗಿದ್ದು, ಸಮಷ್ಠಿಯ ಸೌಂದರ್ಯ ಕಡಿಮೆಯಾಗಿದೆ. ಸಿನಿಮಾ ಹಾಡುಗಳಲ್ಲಿ ನಾಲ್ಕೈದು ಹೆಜ್ಜೆ ಕುಣಿದರೆ ಆ ಕ್ಷಣಕ್ಕೆ ಸಂತೋಷವಾಗಬಹುದು. ಆದರೆ, ಹಳ್ಳಿಗಳಲ್ಲಿ ಸುಧೀರ್ಘ ಅವಧಿ ಕುಳಿತು ವೀಕ್ಷಿಸಿದಾಗ ಮಾತ್ರ ಯಕ್ಷಗಾನದ ರುಚಿ ಸವಿಯಲು ಸಾಧ್ಯ.</p>.<p><strong>*ಯಕ್ಷಗಾನ ತಾಳಮದ್ದಳೆಯ ಬಗ್ಗೆ ಆಸಕ್ತಿ ಚಿಗುರಿದ್ದು ಹೇಗೆ ?</strong></p>.<p>-ನಾನು ಯಕ್ಷಗಾನ ವೇಷಧಾರಿಯಲ್ಲ; ಚಿಕ್ಕವನಿರುವಾಗ ತಂದೆ ಬೂಬ ಶೆಟ್ಟಿಗಾರ್ ಅವರ ಜತೆ ತಾಳಮದ್ದಳೆಗೆ ಹೋಗುತ್ತಿದ್ದೆ. ಅವರು ಹೇಳುತ್ತಿದ್ದ ಕಥೆಗಳನ್ನು ಆಸಕ್ತಿಯಿಂದ ಆಲಿಸುತ್ತಿದ್ದೆ. ನಂತರ ತಾಳಮದ್ದಳೆಯಲ್ಲಿ ಆಸಕ್ತಿ ಬಂದು ಅಮೃತೇಶ್ವರಿ ಇಡುಗುಂಜಿ ಮೇಳದಲ್ಲಿ ಮೂರುವರೆ ವರ್ಷ ಮಾತುಗಾರನಾಗಿದ್ದೆ. ಬಳಿಕ ಹಲವು ಕಡೆಗಳಲ್ಲಿ ಸೇವೆ ಸಲ್ಲಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ಹಿರಿಯ ಯಕ್ಷಗಾನ ಕವಿ, ಪ್ರಸಿದ್ಧ ಅರ್ಥದಾರಿ ಹೆಬ್ರಿ ತಾಲ್ಲೂಕಿನ ಮುದ್ರಾಡಿಯ ಅಂಬಾತನಯ ಮುದ್ರಾಡಿ (ಕೇಶವ ಶೆಟ್ಟಿಗಾರ್) ಅವರಿಗೆ 2019ನೇ ಸಾಲಿನ ಪ್ರತಿಷ್ಠಿತ ಪಾರ್ಥಿಸುಬ್ಬ ಪ್ರಶಸ್ತಿ ಬಂದಿದೆ.</p>.<p>ಯಕ್ಷಗಾನ ತಾಳಮದ್ದಳೆಯ ಅರ್ಥದಾರಿಯಾಗಿ ದಶಕಗಳ ಕಾಲ ಯಕ್ಷಸೇವೆ ಸಲ್ಲಿಸಿರುವ ಅಂಬಾತನಯ ಮುದ್ರಾಡಿ ಅವರು ಪ್ರಸಿದ್ಧ ಸಾಹಿತಿ, ಬರಹಗಾರರೂ ಹೌದು. ಯಕ್ಷಗಾನ ಕುರಿತ ಕೃತಿಗಳು, ನಾಟಕಗಳು, ಶಿಶುಗೀತೆಗಳು, ಕವನ ಸಂಕಲನಗಳು ಪ್ರಕಟವಾಗಿವೆ. ಹಲವು ಅಪ್ರಕಟಿತ ಬರಹಗಳು ಇವೆ. 6 ದಶಕಗಳಿಗೂ ಹೆಚ್ಚಿನ ಅವಧಿಯ ಕಲಾಸೇವೆಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಬಂದಿದ್ದು, ಈ ಸಂದರ್ಭ‘ಪ್ರಜಾವಾಣಿ’ ಜತೆ ಅವರು ಮಾತನಾಡಿದರು.</p>.<p><strong>*ಪ್ರಶಸ್ತಿ ಬಂದಿರುವುದು ಹೇಗನಿಸುತ್ತಿದೆ ?</strong></p>.<p>-ಯಕ್ಷಗಾನ ತಾಳಮದ್ದಳೆ ಕಲೆಗೆ ಸಲ್ಲಿಸಿರುವ ಸೇವೆ ಪರಿಗಣಿಸಿ ಪಾರ್ಥಿಸುಬ್ಬ ಪ್ರಶಸ್ತಿ ನೀಡುತ್ತಿರುವುದು ಖುಷಿಯಾಗಿದೆ. ಈ ಹಿಂದೆಯೂ ಹಲವು ಪ್ರಶಸ್ತಿಗಳು ಬಂದಿವೆ. ಅವುಗಳಲ್ಲಿ ಇದೂ ಒಂದು.</p>.<p><strong>*ಈಚೆಗೆ ಯಕ್ಷಗಾನ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ?</strong></p>.<p>-ಯಕ್ಷಗಾನದ ಮೂಲ ಉದ್ದೇಶ ಪೌರಾಣಿಕ, ಧಾರ್ಮಿಕ ಸಂಸ್ಕೃತಿ ಪ್ರಸಾರವೇ ಹೊರತು; ಮನೋರಂಜನೆ ಪ್ರಧಾನವಲ್ಲ. ಯಕ್ಷಗಾನದ ಮೂಲಸಂಸ್ಕೃತಿಗೆ ಪೆಟ್ಟುಬೀಳಬಾರದು. ಸ್ವಾತಂತ್ರ್ಯ ಚಳವಳಿಯ ಸಂದರ್ಭ ಯಕ್ಷಗಾನ ಬಳಸಿಕೊಂಡಿದ್ದರ ಉದ್ದೇಶ ಸ್ವಾತಂತ್ರ್ಯ ಪಡೆಯುವುದಾಗಿತ್ತು. ಈಗ ಮನೋರಂಜನೆ ಪ್ರಮುಖ ಉದ್ದೇಶವಾಗಿರುವುದು ಸರಿಯಲ್ಲ.</p>.<p><strong>*ಯಕ್ಷಗಾನದಲ್ಲಿ ಪ್ರಯೋಗಗಳು ಹೆಚ್ಚಾಗಿರುವ ಬಗ್ಗೆ ಏನು ಹೇಳುತ್ತೀರಿ ?</strong></p>.<p>-ಪ್ರಚಾರಕ್ಕಾಗಿ, ಜನರಂಜನೆಗಾಗಿ ಯಕ್ಷಗಾನದ ಮೂಲಸ್ವರೂಪ ಬದಲಿಸುವುದು ತಪ್ಪು. ಹಾಗೆ ನೋಡಿದರೆ, ಯಕ್ಷಗಾನ ಮೂಲಉದ್ದೇಶಗಳಿಂದ ದಾರಿ ತಪ್ಪಿ ಬಹಳ ವರ್ಷಗಳಾಗಿವೆ. ಬೆರಳೆಣಿಕೆ ಕಲಾವಿದರು ಮಾತ್ರ ಮೂಲಸ್ವರೂಪ, ಸೌಂದರ್ಯ ಕೆಡದಂತೆ ಪ್ರಯೋಗಗಳಲ್ಲಿ ತೊಡಗಿದ್ದಾರೆ. ಇಂಥವರ ಸಂಖ್ಯೆ ಹೆಚ್ಚಾಗಬೇಕು.</p>.<p><strong>*ಯಕ್ಷಗಾನದ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಏನು ಮಾಡಬೇಕು ?</strong></p>.<p>-ಕಲಾವಿದರಲ್ಲಿ ಅಧ್ಯಯನಶೀಲತೆ ಹೆಚ್ಚಬೇಕು. ಪುರಾಣದ ಓದಿನೊಂದಿಗೆ ಸಂಸ್ಕೃತಿಯ ಕುರಿತು ಕಾಳಜಿ ತೋರುವ ಪ್ರಯತ್ನ ನಡೆಯಬೇಕು. ಪ್ರಯೋಗಗಳು ತಪ್ಪಲ್ಲ ಆದರೆ, ಯಕ್ಷಗಾನೀಯ ಚೌಕಟ್ಟಿನೊಳಗಿರಬೇಕು.</p>.<p><strong>*ಯುವ ಯಕ್ಷಗಾನ ಕಲಾವಿದರಿಗೆ ನೀಡುವ ಸಲಹೆಗಳು ಏನು ?</strong></p>.<p>-ಯುವ ಕಲಾವಿದರು ಕೇಳಿಸಿಕೊಳ್ಳುವುದನ್ನು ಕಲಿಯಬೇಕು. ರಾಮಾಯಣ, ಮಹಾಭಾರತಗಳ ಅಧ್ಯಯನ ಮಾಡಬೇಕು. ಕನಿಷ್ಠ ಒಂದು ಪ್ರಸಂಗವನ್ನು ಅಮೂಲಾಗ್ರವಾಗಿ ಅಭ್ಯಾಸ ಮಾಡಬೇಕು.ಎಲ್ಲ ಕಲೆಗಳು ಪಾಂಡಿತ್ಯದ ಸೃಷ್ಟಿಯಲ್ಲ; ಪ್ರತಿಭೆಯ ಸೃಷ್ಟಿ ಎಂಬುದನ್ನು ಮರೆಯಬಾರದು.</p>.<p><strong>*ಯಕ್ಷಗಾನದಲ್ಲಿನ ಬದಲಾವಣೆಯ ಬಗ್ಗೆ ನಿಮ್ಮ ಅಭಿಪ್ರಾಯ ?</strong></p>.<p>-ಯಕ್ಷಗಾನದಲ್ಲಿ ಕುಣಿತ, ಮಾತಿನ ಆರ್ಭಟ ಹೆಚ್ಚಾಗಿದ್ದು, ಸಮಷ್ಠಿಯ ಸೌಂದರ್ಯ ಕಡಿಮೆಯಾಗಿದೆ. ಸಿನಿಮಾ ಹಾಡುಗಳಲ್ಲಿ ನಾಲ್ಕೈದು ಹೆಜ್ಜೆ ಕುಣಿದರೆ ಆ ಕ್ಷಣಕ್ಕೆ ಸಂತೋಷವಾಗಬಹುದು. ಆದರೆ, ಹಳ್ಳಿಗಳಲ್ಲಿ ಸುಧೀರ್ಘ ಅವಧಿ ಕುಳಿತು ವೀಕ್ಷಿಸಿದಾಗ ಮಾತ್ರ ಯಕ್ಷಗಾನದ ರುಚಿ ಸವಿಯಲು ಸಾಧ್ಯ.</p>.<p><strong>*ಯಕ್ಷಗಾನ ತಾಳಮದ್ದಳೆಯ ಬಗ್ಗೆ ಆಸಕ್ತಿ ಚಿಗುರಿದ್ದು ಹೇಗೆ ?</strong></p>.<p>-ನಾನು ಯಕ್ಷಗಾನ ವೇಷಧಾರಿಯಲ್ಲ; ಚಿಕ್ಕವನಿರುವಾಗ ತಂದೆ ಬೂಬ ಶೆಟ್ಟಿಗಾರ್ ಅವರ ಜತೆ ತಾಳಮದ್ದಳೆಗೆ ಹೋಗುತ್ತಿದ್ದೆ. ಅವರು ಹೇಳುತ್ತಿದ್ದ ಕಥೆಗಳನ್ನು ಆಸಕ್ತಿಯಿಂದ ಆಲಿಸುತ್ತಿದ್ದೆ. ನಂತರ ತಾಳಮದ್ದಳೆಯಲ್ಲಿ ಆಸಕ್ತಿ ಬಂದು ಅಮೃತೇಶ್ವರಿ ಇಡುಗುಂಜಿ ಮೇಳದಲ್ಲಿ ಮೂರುವರೆ ವರ್ಷ ಮಾತುಗಾರನಾಗಿದ್ದೆ. ಬಳಿಕ ಹಲವು ಕಡೆಗಳಲ್ಲಿ ಸೇವೆ ಸಲ್ಲಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>