<p><strong>ಬ್ರಹ್ಮಾವರ</strong>: ‘ನೆಮ್ಮದಿಯ ಜೀವನ ನಡೆಸಬೇಕೆಂದಾದರೆ ಜೀವನ ಶೈಲಿ ಮತ್ತು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ’ ಎಂದು ಬ್ರಹ್ಮಾವರ ಜಯಂಟ್ಸ್ ಗ್ರೂಪ್ ಅಧ್ಯಕ್ಷ ಅಣ್ಣಯ್ಯದಾಸ್ ಹೇಳಿದರು.</p>.<p>ಬ್ರಹ್ಮಾವರ ರುಡ್ಸೆಟ್ ಸಂಸ್ಥೆಯ ಸಭಾಂಗಣದಲ್ಲಿ ಬ್ರಹ್ಮಾವರ ಜಯಂಟ್ಸ್ ಗ್ರೂಪ್, ಲೋಂಬಾರ್ಡ್ ಆಸ್ಪತ್ರೆ, ರುಡ್ಸೆಟ್ ಆಸರೆ ಸಂಘಟನೆ ಸಂಯುಕ್ತ ಆಶ್ರಯದಲ್ಲಿ ನಡೆದ ಆರೋಗ್ಯ ಉಚಿತ ತಪಾಸಣೆ ಮತ್ತು ರಕ್ತ ಪರೀಕ್ಷೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಬೇಕರಿ ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥಗಳಿಗೆ ತಿನ್ನುವ ಬದಲು ಆರೋಗ್ಯದ ಕಡೆ ಗಮನ ಕೊಡಿ. ಜೀವನ ಶೈಲಿ ಮತ್ತು ಆಹಾರ ಕ್ರಮದಲ್ಲಿ ಕೆಲವು ಬದಲಾವಣೆ ಮಾಡುವ ಬಗ್ಗೆ ಪಣ ತೊಡಬೇಕು ಎಂದರು.</p>.<div><blockquote>ಉತ್ತಮ ಆಹಾರ ಕ್ರಮ ಧ್ಯಾನ ಹಾಗೂ ಯೋಗಾಭ್ಯಾಸದಲ್ಲಿ ನಿತ್ಯ ತೊಡಗಿಸಿಕೊಂಡಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು. </blockquote><span class="attribution">ಲಕ್ಷೀಶ ಎ.ಜೆ, ನಿರ್ದೇಶಕ ಬ್ರಹ್ಮಾವರ ರುಡ್ಸೆಟ್</span></div>.<p>ಆಸರೆ ಸಂಘಟನೆ ಅಧ್ಯಕ್ಷೆ ಹರಿಣಿ ಅಜಯ ರಾವ್ ಮಾತನಾಡಿ, ‘ಜೀವನದಲ್ಲಿ ಎಲ್ಲವನ್ನೂ ಖುಷಿಯಿಂದ ಅನುಭವಿಸಬೇಕಾದರೆ ಉತ್ತಮ ಆರೋಗ್ಯ ಬೇಕು. ದಿನನಿತ್ಯದ ಕೆಲಸದ ಜಂಜಾಟದಲ್ಲಿ ಆರೋಗ್ಯದ ಬಗೆಗಿನ ಕಾಳಜಿ ಮರೆತಿದ್ದೇವೆ. ಅಂತಹ ತಪ್ಪುಗಳನ್ನು ಮುಂದಕ್ಕೆ ಮಾಡಬೇಡಿ’ ಎಂದು ಸಲಹೆ ನೀಡಿದರು.</p>.<p>ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಲಕ್ಷ್ಮೀಶ ಎ.ಜಿ. ಅಧ್ಯಕ್ಷತೆ ವಹಿಸಿದ್ದರು. ಜಯಂಟ್ಸ್ನ ಮಾಜಿ ಅಧ್ಯಕ್ಷ ಸುಂದರ ಪೂಜಾರಿ, ಜಯಂಟ್ಸ್ ಗ್ರೂಪ್ನ ಮಧುಸೂದನ್ ಹೇರೂರು, ಡಾ. ಅಭಿನಯ ಅಶೋಕ, ಡಾ. ಸುಮನಾ ಆರ್, ರುಡ್ಸೆಟ್ ಸಂಸ್ಥೆಯ ಉಪನ್ಯಾಸಕರಾದ ಸಂತೋಷ, ಚೈತ್ರಾ ಕೆ ಇದ್ದರು.</p>.<p>ಉದ್ಯಮಿ ಮಹೇಶ ಕುಮಾರ್ ಮಲ್ಪೆ ನಿರೂಪಿಸಿದರು. ಅಣ್ಣಯ್ಯದಾಸ್ ಸ್ವಾಗತಿಸಿದರು. ಜಯಂಟ್ಸ್ ಕಾರ್ಯದರ್ಶಿ ಮಿಲ್ಟನ್ ಓಲಿವೆರಾ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ರಹ್ಮಾವರ</strong>: ‘ನೆಮ್ಮದಿಯ ಜೀವನ ನಡೆಸಬೇಕೆಂದಾದರೆ ಜೀವನ ಶೈಲಿ ಮತ್ತು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ’ ಎಂದು ಬ್ರಹ್ಮಾವರ ಜಯಂಟ್ಸ್ ಗ್ರೂಪ್ ಅಧ್ಯಕ್ಷ ಅಣ್ಣಯ್ಯದಾಸ್ ಹೇಳಿದರು.</p>.<p>ಬ್ರಹ್ಮಾವರ ರುಡ್ಸೆಟ್ ಸಂಸ್ಥೆಯ ಸಭಾಂಗಣದಲ್ಲಿ ಬ್ರಹ್ಮಾವರ ಜಯಂಟ್ಸ್ ಗ್ರೂಪ್, ಲೋಂಬಾರ್ಡ್ ಆಸ್ಪತ್ರೆ, ರುಡ್ಸೆಟ್ ಆಸರೆ ಸಂಘಟನೆ ಸಂಯುಕ್ತ ಆಶ್ರಯದಲ್ಲಿ ನಡೆದ ಆರೋಗ್ಯ ಉಚಿತ ತಪಾಸಣೆ ಮತ್ತು ರಕ್ತ ಪರೀಕ್ಷೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಬೇಕರಿ ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥಗಳಿಗೆ ತಿನ್ನುವ ಬದಲು ಆರೋಗ್ಯದ ಕಡೆ ಗಮನ ಕೊಡಿ. ಜೀವನ ಶೈಲಿ ಮತ್ತು ಆಹಾರ ಕ್ರಮದಲ್ಲಿ ಕೆಲವು ಬದಲಾವಣೆ ಮಾಡುವ ಬಗ್ಗೆ ಪಣ ತೊಡಬೇಕು ಎಂದರು.</p>.<div><blockquote>ಉತ್ತಮ ಆಹಾರ ಕ್ರಮ ಧ್ಯಾನ ಹಾಗೂ ಯೋಗಾಭ್ಯಾಸದಲ್ಲಿ ನಿತ್ಯ ತೊಡಗಿಸಿಕೊಂಡಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು. </blockquote><span class="attribution">ಲಕ್ಷೀಶ ಎ.ಜೆ, ನಿರ್ದೇಶಕ ಬ್ರಹ್ಮಾವರ ರುಡ್ಸೆಟ್</span></div>.<p>ಆಸರೆ ಸಂಘಟನೆ ಅಧ್ಯಕ್ಷೆ ಹರಿಣಿ ಅಜಯ ರಾವ್ ಮಾತನಾಡಿ, ‘ಜೀವನದಲ್ಲಿ ಎಲ್ಲವನ್ನೂ ಖುಷಿಯಿಂದ ಅನುಭವಿಸಬೇಕಾದರೆ ಉತ್ತಮ ಆರೋಗ್ಯ ಬೇಕು. ದಿನನಿತ್ಯದ ಕೆಲಸದ ಜಂಜಾಟದಲ್ಲಿ ಆರೋಗ್ಯದ ಬಗೆಗಿನ ಕಾಳಜಿ ಮರೆತಿದ್ದೇವೆ. ಅಂತಹ ತಪ್ಪುಗಳನ್ನು ಮುಂದಕ್ಕೆ ಮಾಡಬೇಡಿ’ ಎಂದು ಸಲಹೆ ನೀಡಿದರು.</p>.<p>ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಲಕ್ಷ್ಮೀಶ ಎ.ಜಿ. ಅಧ್ಯಕ್ಷತೆ ವಹಿಸಿದ್ದರು. ಜಯಂಟ್ಸ್ನ ಮಾಜಿ ಅಧ್ಯಕ್ಷ ಸುಂದರ ಪೂಜಾರಿ, ಜಯಂಟ್ಸ್ ಗ್ರೂಪ್ನ ಮಧುಸೂದನ್ ಹೇರೂರು, ಡಾ. ಅಭಿನಯ ಅಶೋಕ, ಡಾ. ಸುಮನಾ ಆರ್, ರುಡ್ಸೆಟ್ ಸಂಸ್ಥೆಯ ಉಪನ್ಯಾಸಕರಾದ ಸಂತೋಷ, ಚೈತ್ರಾ ಕೆ ಇದ್ದರು.</p>.<p>ಉದ್ಯಮಿ ಮಹೇಶ ಕುಮಾರ್ ಮಲ್ಪೆ ನಿರೂಪಿಸಿದರು. ಅಣ್ಣಯ್ಯದಾಸ್ ಸ್ವಾಗತಿಸಿದರು. ಜಯಂಟ್ಸ್ ಕಾರ್ಯದರ್ಶಿ ಮಿಲ್ಟನ್ ಓಲಿವೆರಾ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>